ಬೆಂಗಳೂರು: ತ್ಯಾಗರಾಜನಗರದ 'ಶ್ರೀ ವಜ್ರಕ್ಷೇತ್ರ' ಅಭಯ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಮೇ 4 ರಿಂದ 10ರ ವರೆಗೆ ಶ್ರೀ ನರಸಿಂಹ ಜಯಂತಿ ಸಪ್ತಾಹವನ್ನು ಆಯೋಜಿಸಿದ್ದು, ಈ ಎಲ್ಲಾ ದಿನಗಳಲ್ಲೂ ಬೆಳಗ್ಗೆ ವಿಶೇಷ ಪೂಜಾ ಕೈಂಕರ್ಯಗಳು ನಡೆಯಲಿದೆ.
ಸಾಂಸ್ಕೃತಿಕ ಕಾರ್ಯಕ್ರಮಗಳು: ಪ್ರತಿಸಂಜೆ 6-30ಕ್ಕೆ. ಮೇ 4ರಂದು-ವಿದುಷಿಯರಾದ ಶ್ರೀಮತಿ ಗಾಯತ್ರಿ ಮಯ್ಯ ಮತ್ತು ಶ್ರೀಮತಿ ಪವಿತ್ರಾ ಪ್ರಶಾಂತ್ ನಿರ್ದೇಶನದಲ್ಲಿ ಪ್ರಣವಾಂಜಲಿ ಪರ್ಫಾರ್ಮಿಂಗ್ ಆಫ್ ಆರ್ಟ್ಸ್ ನ ವಿದ್ಯಾರ್ಥಿಗಳಿಂದ "ಭರತನಾಟ್ಯ"
ಮೇ 5ರಂದು- ಶ್ರೀ ಮಂಜುನಾಥೇಶ್ವರ ಸಂಗೀತ ಕಲಾ ಶಾಲೆಯ ವಿದ್ಯಾರ್ಥಿಗಳಿಂದ "ಗಾಯನ ಮತ್ತು ಪಿಟೀಲು ವಾದನ".
ಮೇ 6ರಂದು- ಎಂ.ಜಿ. ಜಯಸಿಂಹ ಮತ್ತು ತಂಡದವರಿಂದ "ಭಕ್ತಿ ವಾಣಿ".
ಮೇ 7ರಂದು-ನೂಪುರ ನೃತ್ಯ ಶಾಲೆಯ ಡಾ|| ಲಲಿತಾ ಶ್ರೀನಿವಾಸನ್ ಅವರ ಶಿಷ್ಯೆ ವಿದುಷಿ ಸುಮಾ ಅನುರಾಗ್ ರವರಿಂದ "ಭರತನಾಟ್ಯ".
ಮೇ 8ರಂದು-ವಿದುಷಿ ಕು|| ದಿವ್ಯಶ್ರೀ ರಂಗನಾಥನ್ ರವರಿಂದ "ಸ್ಯಾಕ್ಸೋಫೋನ್ ವಾದನ". ಪಿಟೀಲು : ವಿದ್ವಾನ್ ಎಸ್. ಶಶಿಧರ್, ಮೃದಂಗ: ಕಾರ್ತೀಕ್ ಪ್ರಣವ್.
ಮೇ 9ರಂದು-ಗೋಕುಲಾ ಸ್ಕೂಲ್ ಆಫ್ ಮ್ಯೂಸಿಕ್ ನ 'ಕರ್ನಾಟಕ ಕಲಾಶ್ರೀ' ವಿದ್ವಾನ್ ಎಚ್.ಎಸ್. ವೇಣುಗೋಪಾಲ್ ಅವರ ಶಿಷ್ಯರಿಂದ "ಸಂಗೀತ ಕಾರ್ಯಕ್ರಮ".
ಮೇ 10ರಂದು-ಬೆಳಗ್ಗೆ 8-00ಕ್ಕೆ : ಕು|| ಅಹಿಕಾ ನಾಗದೀಪ್ ಮತ್ತು ಸಂಗಡಿಗರಿಂದ "ವೀಣಾ ವಾದನ".
ಕಾರ್ಯಕ್ರಮ ನಡೆಯುವ ಸ್ಥಳ: ಶ್ರೀ ಅಭಯ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, 'ಶ್ರೀವಜ್ರಕ್ಷೇತ್ರ' #152/1, 7ನೇ ಅಡ್ಡರಸ್ತೆ, 3ನೇ ಬ್ಲಾಕ್, ತ್ಯಾಗರಾಜನಗರ, ಬೆಂಗಳೂರು-560028.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ