ಶ್ರೀ ಶಾಮಸುಂದರ ವಿಠಲ ದಾಸರ ಆರಾಧನ ಮಹೋತ್ಸವ

Upayuktha
0


ಬೆಂಗಳೂರು: ನರಸಿಂಹ ಜಯಂತಿಯ  ಪುಣ್ಯ ದಿನದಂದು ಬೆಂಗಳೂರು ಚಾಮರಾಜಪೇಟೆಯ ಶ್ರೀಪಾದರಾಜ ಮಠದಲ್ಲಿ ದಾಸವಾಣಿ ಕರ್ನಾಟಕದ ವತಿಯಿಂದ ಶ್ರೀ ಶಾಮಸುಂದರ ವಿಠಲ ದಾಸರ ಆರಾಧನ ಮಹೋತ್ಸವವನ್ನು ಆಯೋಜನೆ ಮಾಡಲಾಗಿತ್ತು .


ಶಾಮಸುಂದರ ದಾಸರ ಮರಿಮಗಳಾದ ಶ್ರೀಮತಿ ಮಾನಸ ಜಯರಾಜ್ ಕುಲಕರ್ಣಿ ನೇತೃತ್ವದ ತಂಡದವರು ಶಾಮ ಸುಂದರ ದಾಸರ ಕೃತಿಗಳ ಗಾಯನವನ್ನು ಪ್ರಸ್ತುತಪಡಿಸಿದರು.


ದಾಸ ಸಾಹಿತ್ಯ ಚಿಂತಕರಾದ ಡಾ.ವೃಂದಸಂಗಂ ಮತ್ತು ಡಾ. ಸುಧಾ ದೇಶಪಾಂಡೆ ರವರು ಶಾಮಸುಂದರದಾಸರ ಜೀವನ ವೃತ್ತಾಂತವನ್ನು ಪರಿಚಯ ಮಾಡಿಕೊಟ್ಟರು.


ಸಂಸ್ಕೃತಿ ಚಿಂತಕ  ಡಾ ಗುರುರಾಜ ಪೋಶೆಟ್ಟಿಹಳ್ಳಿ ರವರು ಶಾಮ ಸುಂದರ ದಾಸರು ವರಕವಿ ದ.ರಾ. ಬೇಂದ್ರೆ ಅವರನ್ನು ಕುರಿತು ಬರೆದ ಪದ್ಯ 'ಸತ್ಕವೀನ್ದ್ರ  ಬಾ ಬೇಂದ್ರೆ ಸುಗುಣಸಾಂದ್ರ' ವಾಚನ ಮಾಡಿದರು. 19ನೇ ಶತಮಾನದಲ್ಲಿ ಬಾಳಿ ಬದುಕಿದ ದಾಸರು ಜ್ಞಾನಿಗಳಾಗಿ ಅನೇಕ ಪದಪದ್ಯ ಸುಳಾದಿಗಳನ್ನು ರಚಿಸಿ ಹರಿದಾಸ ಸಾಹಿತ್ಯಕ್ಕೆ ವಿಶೇಷವಾದ ಕೊಡುಗೆ ನೀಡಿದ್ದಾರೆ. ಇವರ ಕೃತಿಗಳು ಶ್ರುತಿ ಸ್ಮೃತಿ ಪುರಾಣಗಳಿಗೆ ವ್ಯಾಖ್ಯಾನದಂತಿದೆ ಎಂದು ಅಭಿಪ್ರಾಯ ಪಟ್ಟರು.


ದಾಸವಾಣಿ ಕರ್ನಾಟಕದ ಸಂಸ್ಥಾಪಕ ಜಯರಾಜ ಕುಲಕರ್ಣಿ, ಪ್ರಾಧ್ಯಾಪಕ ಪ್ರೊ . ಕೆ ವಿ ರಾಮರಾವ್  ಸಮೂಹದ ಸದಸ್ಯರಾದ ರಾಮಮೂರ್ತಿ, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top