ಸೈನಿಕರಿಗೆ ಹೆಚ್ಚಿನ ಧೈರ್ಯ ಶಕ್ತಿ ಮತ್ತು ಆತ್ಮಸ್ಥೈರ್ಯ ಕೊಟ್ಟು ಕಾಪಾಡಲಿ : ಎಂ.ಎಸ್.ಸೋಮಲಿಂಗಪ್ಪ

Upayuktha
0



ಬಳ್ಳಾರಿ: ಸಿರುಗುಪ್ಪ ಮಾಜಿ ಶಾಸಕರಾದ ಎಂಎಸ್ ಸೋಮಲಿಂಗಪ್ಪ ಅವರು ಸಿರುಗುಪ್ಪ ನಗರದ  ಶಂಭುಲಿಂಗ ದೇವಸ್ಥಾನಕ್ಕೆ ತೆರಳಿ ಭಾರತ ಮತ್ತು ಪಾಕಿಸ್ತಾನದ ನಡುವೆ "ಆಪರೇಷನ್ ಸಿಂಧೂರ" ಮೂಲಕ ಕಳೆದ ನಾಲ್ಕು ದಿನಗಳಿಂದ ಯುದ್ಧ ನಡೆಯುತ್ತಿದ್ದು ಯುದ್ಧ ಮಾಡುತ್ತಿರುವ ನಮ್ಮ "ಭಾರತೀಯ ಸೈನಿಕರಿಗೆ ಮತ್ತು ನಮ್ಮ ದೇಶದ ಹೆಮ್ಮೆಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ"  ರವರಿಗೆ ಹೆಚ್ಚಿನ ಧೈರ್ಯ ಶಕ್ತಿ ಮತ್ತು  ಆತ್ಮಸ್ಥೈರ್ಯ ಕೊಟ್ಟು ಕಾಪಾಡಲಿ" ಆಪರೇಷನ್ ಸಿಂಧೂರ" ಯಶಸ್ವಿಯಾಗಲಿ ಎಂದು ದೇವರಿಗೆ  ವಿಶೇಷ ಪೂಜೆ ಸಲ್ಲಿಸಲಾಯಿತು. 


ಈ ಸಂದರ್ಭದಲ್ಲಿ ತಾಲೂಕು ಭಾರತೀಯ ಜನತಾ ಪಾರ್ಟಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಸ್ವಾಮಿ, ಮತ್ತು ವೀರನಗೌಡ, ಮೇಕಲ್ ವೀರೇಶ್, ಮಹದೇವ್, ನಟರಾಜ್, ದೇಶನೂರ ಹುಲುಗಪ್ಪ, ಪೂಜಾರಿ ಗಾದಿಲಿಂಗ, ಮಧುಸೂದನ್, ನಟರಾಜ್, ವಿಕ್ರಂ ಜೈನ್, ಪ್ರಧಾನ ಕಾರ್ಯದರ್ಶಿ ಬೆಳಗಲ್ ಬಸವರಾಜ್, ರಾಘವೇಂದ್ರ, ಮಂಜುನಾಥ ಮತ್ತು ಕಾರ್ಯಕರ್ತರು ಮುಖಂಡರು ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top