ಆಧ್ಯಾತ್ಮಿಕ ಮತ್ತು ರಾಷ್ಟ್ರೀಯ ಚೈತನ್ಯ ಜಾಗೃತಗೊಳಿಸುವ ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ

Upayuktha
0


ಪ್ರಸ್ತುತ ಭಾರತದ ಸೇರಿದಂತೆ ವಿಶ್ವದಾದ್ಯಂತ ಯುದ್ಧ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಜಾಗತಿಕ ವಾತಾವರಣ ಎಷ್ಟು ಅಸ್ಥಿರವಾಗಿದೆ ಎಂದರೆ, ಮೂರನೆಯ ಮಹಾಯುದ್ಧದ ಕಿಡಿ ಯಾವಾಗ ಹೊತ್ತುವುದೆಂದು ಹೇಳಲು ಸಾಧ್ಯವಿಲ್ಲ. ಇಂತಹ ಸಮಯದಲ್ಲಿ ‘ಸನಾತನ ರಾಷ್ಟ್ರ’ವೆಂದು ಭಾರತದ ವಿಜಯಪತಾಕೆ ಎಲ್ಲೆಡೆ ಹಾರಬೇಕು, ಹಾಗೂ ಭಾರತದ ಶಕ್ತಿಯ ಕೇಂದ್ರವಾಗಿರುವ ‘ಸನಾತನ ಶಕ್ತಿ’ ಶಕ್ತಿಶಾಲಿಯಾಗಬೇಕು, ಎಂದು ಗೋವಾದಲ್ಲಿ ಮೇ 17 ರಿಂದ 19.2025 ಈ ಸಮಯದಲ್ಲಿ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ ಈ ಭವ್ಯ ಸಮಾರಂಭ ನೆರವೇರಿತು.


ಈ ಸಮಾರಂಭಕ್ಕೆ ಭಾರತ ಸಹಿತ 23 ದೇಶಗಳಲ್ಲಿನ 30 ಸಾವಿರಕ್ಕಿಂತಲೂ ಹೆಚ್ಚಿನ ಸನಾತನ ಧರ್ಮಪ್ರೇಮಿಗಳು ಉಪಸ್ಥಿತರಿದ್ದರು. ಇದರಲ್ಲಿ ಸಂತ- ಮಹಂತರು, ಹಿಂದುತ್ವನಿಷ್ಠ ನಾಯಕರು, ರಾಜಕೀಯ ಪದಾಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಸಾಧಕರು, ಧರ್ಮಪ್ರೇಮಿಗಳು, ಭಕ್ತರ ಸಮಾವೇಶವಿತ್ತು. ದೇಶವಿದೇಶದಿಂದ ಎರಡುವರೆ ಲಕ್ಷ ಜನರು ಈ ಕಾರ್ಯಕ್ರಮದ 'ನೇರ ಪ್ರಸಾರ (ಲೈವ್)' ನೋಡಿದ್ದಾರೆ. ಸನಾತನ ಸಂಸ್ಥೆಯ ಸಂಸ್ಥಾಪಕ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ 83 ನೇ ಜನ್ಮೋತ್ಸವ ಮತ್ತು ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ಪ್ರಯುಕ್ತ ಈ ಸಮಾರಂಭದ ಆಯೋಜನೆ ಮಾಡಲಾಗಿತ್ತು. ಬ್ರಾಹ್ಮತೇಜ ಮತ್ತು ಕ್ಷಾತ್ರತೇಜ ಜಾಗೃತಗೊಳಿಸುವ ಈ ಮಹೋತ್ಸವದಿಂದ ರಾಮರಾಜ್ಯ ರೂಪದ ಹಿಂದೂರಾಷ್ಟ್ರ ನಿರ್ಮಾಣದ ಸಂಕಲ್ಪಕ್ಕೆ ಆಧ್ಯಾತ್ಮಿಕ ಬಲ ಸಿಕ್ಕಿತು. ಆದ್ದರಿಂದ ಈ ಮಹೋತ್ಸವ ಹಿಂದೂ ರಾಷ್ಟ್ರ ಸ್ಥಾಪನೆಯ ಮಾರ್ಗದಲ್ಲಿನ ಮೈಲಿಗಲ್ಲು ಎಂದು ಹೇಳಬಹುದು.


ಮಹೋತ್ಸವದ ಕೇಂದ್ರ ಬಿಂದುವಾಗಿದ್ದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ತಮ್ಮ ಮಾರ್ಗದರ್ಶನದ ಮೂಲಕ ವೈಯಕ್ತಿಕ ಉಪಾಸನೆಯ ಜೊತೆಗೆ ಅಂದರೆ ವ್ಯಷ್ಟಿ ಸಾಧನೆಯ ಜೊತೆಗೆ ಸಮಷ್ಠಿ ಸಾಧನೆ ಮಾಡುವುದು ಎಂದರೆ ಧರ್ಮರಕ್ಷಣೆ ಮತ್ತು ರಾಷ್ಟ್ರ ರಕ್ಷಣೆಗಾಗಿ ಕೃತಿಶೀಲರಾಗುವ ಬೋಧಾಮೃತ ನೀಡಿದರು. ಮಹೋತ್ಸವದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಶಾಧ್ಯಕ್ಷ ಪ. ಪೂ. ಸ್ವಾಮಿ ಗೋವಿಂದದೇವ ಗಿರಿ ಮಹಾರಾಜರು, ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷ ಪೂ. ಮಹಂತ ರವೀಂದ್ರ ಪುರಿಜಿ ಮಹಾರಾಜ, ಅಯೋಧ್ಯೆ ಹನುಮಾನ ಗಡಿಯ ಪೂ. ಮಹಂತ ರಾಜು ದಾಸ, ಶ್ರೀ ಕ್ಷೇತ್ರ ತಪೋಭೂಮಿ (ಗೋವಾ) ಪೀಠಾಧೀಶ್ವರ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿ, "ಸನಾತನ ಬೋರ್ಡ್", ಪ್ರತಿಪಾದಕರು ಪೂಜ್ಯಶ್ರೀ ದೇವಕೀನಂದನ ಠಾಕೂರ, ಕೇಂದ್ರ ವಿದ್ಯುತ್ ರಾಜ್ಯ ಸಚಿವ ಶ್ರೀಪಾದಜಿ ನಾಯಿಕ, ಗೋವಾದ ಮುಖ್ಯಮಂತ್ರಿ ಡಾ. ಪ್ರಮೋದ ಸಾವಂತ, ಮಾಜಿ ಕೇಂದ್ರ ಮಾಹಿತಿ ಆಯುಕ್ತ ಶ್ರೀ. ಉದಯ ಮಾಹೂರಕರ, ಭಾಗ್ಯನಗರದ ಶಾಸಕ ಟಿ. ರಾಜಸಿಂಹ, ಹಾಗೂ ಕಾಶಿ ಮಥುರಾದ ದೇವಸ್ಥಾನ ಮೊಕದ್ದಮೆಗಾಗಿ ಹೋರಾಡುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ್ ಜೈನ್ ಮುಂತಾದ ಅನೇಕ ಗಣ್ಯರು ಉಪಸ್ಥಿತರಿದ್ದರು.


ಸಂತ ಮಹಂತ, ವಿಚಾರವಂತರು, ಹಿಂದುತ್ವನಿಷ್ಠ ನಾಯಕರು ಅವರ ಮಾರ್ಗದರ್ಶನದಲ್ಲಿ ಸನಾತನ ರಾಷ್ಟ್ರ ಸ್ಥಾಪನೆಗಾಗಿ ಕೇವಲ ವೈಚಾರಿಕ ದಿಶೆಯನ್ನಷ್ಟೇ ನೀಡದೆ ಉಪಸ್ಥಿತ ಪ್ರತಿಯೊಬ್ಬರಿಗೂ ಅದಕ್ಕಾಗಿ ಕೃತಿಶೀಲಗೊಳಿಸಿದರು. ಈ ಸಮಯದಲ್ಲಿ ಸಮರ್ಪಿತ ಭಾವದಿಂದ ರಾಷ್ಟ್ರ ಕಾರ್ಯ ಮಾಡುವ 25 ಹೋರಾಟಗಾರರಿಗೆ 'ಹಿಂದೂ ರಾಷ್ಟ್ರ ರತ್ನ' ಮತ್ತು 'ಸನಾತನ ಧರ್ಮಶ್ರೀ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸನಾತನ ಸಂಸ್ಕೃತಿ ಧರ್ಮರಕ್ಷಣೆಗಾಗಿ ಶಸ್ತ್ರ ಮತ್ತು ಶಾಸ್ತ್ರ ಇವೆರಡನ್ನು ಗೌರವಿಸುತ್ತದೆ ಎಂದು ಈ ಮಹೋತ್ಸವದಲ್ಲಿ ಉಧ್ಘೋಷ ಮಾಡಲಾಯಿತು.


ಮಹೋತ್ಸವದ ವೈಶಿಷ್ಠ್ಯಪೂರ್ಣ ಕ್ಷಣಗಳು:

ಬ್ರಾಹ್ಮತೇಜದ ಅವತರಣ: 12 ಜ್ಯೋತಿರ್ಲಿಂಗಗಳಲ್ಲಿ ಮೊದಲನೆಯದಾದ ಸೋಮನಾಥ ಶಿವಲಿಂಗವನ್ನು ಕ್ರೂರಿ ಮಹಮ್ಮದ ಗಜನಿ ದ್ವಂಸ ಮಾಡಿದ್ದನು; ಕೆಲವು ಶ್ರದ್ಧೆಯುಳ್ಳ ಅರ್ಚಕರು ಬಗ್ನಗೊಂಡಿದ್ದ ಶಿವಲಿಂಗದ ಅವಶೇಷಗಳಲ್ಲಿನ ಕೆಲವು ಅಂಶ ಅತ್ಯಂತ ರಹಸ್ಯವಾಗಿ ಸುರಕ್ಷಿತವಾಗಿರಿಸಿದ್ದರು. 1000 ವರ್ಷಗಳ ಹಿಂದಿನ ಶಿವಲಿಂಗದ ಈ ಅಂಶ ಮಹೋತ್ಸವದ ಒಂದು ಆಕರ್ಷಣೆಯಾಯಿತು. ಇದಲ್ಲದೆ ಸಂತ ಪರಂಪರೆಯಲ್ಲಿನ ಸಮರ್ಥ ರಾಮದಾಸ ಸ್ವಾಮಿ, ಪ. ಪೂ. ಗೋಂದವಲೇಕರ ಮಹಾರಾಜ,  ಪ. ಪ. ಶ್ರೀಶ್ರೀಧರ ಸ್ವಾಮೀಜಿ, ಪ. ಪೂ. ಗಗನಗಿರಿ ಮಹಾರಾಜ, ಸಿದ್ಧಾರೂಢ ಸ್ವಾಮೀಜಿ ಮುಂತಾದ 15 ಸಂತರ ಪಾದುಕೆಗಳು ಮಹೋತ್ಸವ ಸ್ಥಳದಲ್ಲಿ ಪ್ರದರ್ಶನಕ್ಕೆ ಇದ್ದವು. ಒಂದೇ ಸ್ಥಳದಲ್ಲಿ ಒಂದೇ ಸಮಯದಲ್ಲಿ ಇಷ್ಟೊಂದು ಸಂತರ ಪಾದುಕೆಗಳು ಇರುವುದು ಇದು ಒಂದು ದುರ್ಲಭ ಘಟನೆಯೇ ಇದೆ…


ಇದರ ಜೊತೆಗೆ ರಾಮರಾಜ್ಯದ ನಿರ್ಮಾಣಕ್ಕಾಗಿ ಒಂದು ಕೋಟಿ ಸಾಮೂಹಿಕ ರಾಮ ನಾಮ ಜಪ ಯಜ್ಞ, ಮಹಾಧನ್ವಂತರಿಯಾಗ, ಸನಾತನ ಧರ್ಮ ದ್ವಜದ ಆರೋಹಣ ಇವುಗಳು ಈ ಮಹೋತ್ಸವದ ಆಧ್ಯಾತ್ಮಿಕ ವೈಶಿಷ್ಟ್ಯಗಳಾಗಿದ್ದವು.


ಸಾಂಸ್ಕೃತಿಕ ಖಜಾನೆ: ಈ ಸಮಯದಲ್ಲಿ ರಾಷ್ಟ್ರೀಯ ಕೀರ್ತನಾಕಾರರು ಡಾ. ಚಾರುದತ್ತ ಆಫಳೆ ಇವರು 'ಯುದ್ಧಾಯ ಕೃತನಿಶ್ಚಯಃ ', ಈ ಕೀರ್ತನೆ ಪ್ರಸ್ತುತಪಡಿಸಿದರು. ಅಧರ್ಮದ ವಿರುದ್ಧ ಹೋರಾಡುವ ಸಮಯ ಬಂದಿದ್ದು ಧರ್ಮ ಮತ್ತು ರಾಷ್ಟ್ರ ರಕ್ಷಣೆಗಾಗಿ ಪ್ರತಿಯೊಬ್ಬರೂ ಕೃತಿಶೀಲರಾಗಬೇಕು, ಇದೇ ಈ ಕೀರ್ತನೆಯ ಸಂದೇಶವಾಗಿತ್ತು. ಅದರ ಜೊತೆಗೆ ಮಹೋತ್ಸವದಲ್ಲಿ ಗಾಯನ ಮತ್ತು ನೃತ್ಯ ಕಲೆಯ ಮಾಧ್ಯಮದಿಂದ ಗುರು  ಸಂಕೀರ್ತನೆ ಮಾಡಲಾಯಿತು.

 

ಧಾರಾಕಾರ ಮಳೆಯಲ್ಲಿಯೂ ನೆರವೇರಿರುವ ಶತಚಂಡಿ ಯಾಗ:

ಮಹೋತ್ಸವದ ಮೂರನೇ ದಿನ ಮಹಾಧನ್ವಂತರಿ ಯಜ್ಞ ನೆರವೇರಿದ ನಂತರ, ಭಾರತ ಪಾಕಿಸ್ತಾನ ಯುದ್ಧದಲ್ಲಿ ಭಾರತದ ವಿಜಯಕ್ಕಾಗಿ ಶತಚಂಡಿ ಮಹಾಯಜ್ಞದ ಸಂಕಲ್ಪವಾಗಿತ್ತು. ಆದರೆ ಅದೇ ದಿನ ಗೋವಾದಲ್ಲಿ ಧಾರಾಕಾರ ಮಳೆ ಆರಂಭವಾಯಿತು. ಮೈದಾನದಲ್ಲಿ ಮೊಳಕಾಲಿನಷ್ಟು ನೀರು ನಿಂತಿತು. ಆದರೆ ಶತಚಂಡಿ ಯಾಗ ಮುಂದುವರೆದಿತ್ತು. ಯಜ್ಞ ಪರಿಸರದಲ್ಲಿ ಮಳೆಯ ಒಂದು ಹನಿ ನೀರು ಕೂಡ ಒಳಗೆ ಬರಲಿಲ್ಲ. ಶತಚಂಡಿ ಯಜ್ಞ ನಿರ್ವಿಘ್ನವಾಗಿ ನೆರವೇರಿತು.


ಕ್ಷಾತ್ರತೇಜದ ಜಾಗೃತಿ: ಶಿವಾಜಿ ಕಾಲದ ಐತಿಹಾಸಿಕ ಮತ್ತು ದುರ್ಲಭ ಶಸ್ತ್ರಗಳ ಭವ್ಯ ಪ್ರದರ್ಶನ, ಇದು ಕೂಡ ಮಹೋತ್ಸವದ ಒಂದು ಮುಖ್ಯ ಆಕರ್ಷಣೆಯಾಗಿತ್ತು. ಈ ಪ್ರದರ್ಶನದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರಿಗೆ ಔರಂಗಜೇಬನು ಬಂಧಿಸುವಾಗ ಉಪಯೋಗಿಸಿದ್ದ ಮೂಲ ಸರಪಳಿಗಳು, ಸರದಾರ ಎಸಾಜಿ ಕಂಕ ಇವರ ತಲವಾರು ಮತ್ತು ಸರದಾರ ಕಾನ್ಹೋಜಿ ಜೆಧೆ ಇವರ ರಕ್ಷಾಕವಚ, ಕೊಲ್ಲಾಪುರದ ಸವ್ಯಸಾಚಿ ಗುರುಕುಲಂ ಮತ್ತು ಪುಣೆಯ ಶಿವಾಯಿ ಸಂಸ್ಥಾನ ಇವುಗಳ ಶಸ್ತ್ರ ಪ್ರದರ್ಶನ, ಗೋವಾದ ಸೌಂದೇಕರ್ ಮನೆತನದ ಪ್ರಾಚೀನ ಶಸ್ತ್ರಾಸ್ತ್ರಗಳು ಇವುಗಳ ಐತಿಹಾಸಿಕ ಶಸ್ತ್ರಗಳ ಸಮಾವೇಶವಿತ್ತು.


ಇದರ ಜೊತೆಗೆ ಮಹೋತ್ಸವದಲ್ಲಿ ಶಿವಾಜಿ ಕಾಲದ ಯುದ್ಧ ಕಲೆಯ ಮತ್ತು ಸಂರಕ್ಷಣೆಯ ಮೈಝುಮ್ಮೆನ್ನುವ ಪ್ರಾತ್ಯಕ್ಷಿಕೆಗಳು ಪ್ರಸ್ತುತಪಡಿಸಲಾದವು. ಇಂದಿನ ಕಾಲದಲ್ಲಿ, ಮೂಲಭೂತವಾದಿ ಭಯೋತ್ಪಾದಕರು ಭಾರತದ ಮೇಲೆ ದಾಳಿ ನಡೆಸುತ್ತಾರೆ, ಅಲ್ಲಿ ಶಿವ ಛತ್ರಪತಿಯ ರಣಕೌಶಲ್ಯದ ಮತ್ತು ಶೌರ್ಯದ ಆದರ್ಶ 'ಸನಾತನ ರಾಷ್ಟ್ರ' ಸ್ಥಾಪನೆ ಮಾಡುವುದಕ್ಕಾಗಿ ಶಕ್ತಿ ನೀಡುವಂಥದ್ದಾಗಿತ್ತು.


ಆಧ್ಯಾತ್ಮಿಕ ಪ್ರವಾಸೋದ್ಯಮಕ್ಕೆ ಚಾಲನೆ:

ಈ ಮಹೋತ್ಸವಕ್ಕಾಗಿ ಬಂದಿರುವ ಸನಾತನ ಪ್ರೇಮಿಗಳು ಈ ಸಂದರ್ಭದಲ್ಲಿ ಗೋವಾದ ದೇವಸ್ಥಾನಗಳು, ಐತಿಹಾಸಿಕ ಸ್ಥಳಗಳಿಗೆ ಭೇಟಿ ನೀಡಿದ್ದರಿಂದ ಗೋವಾದಲ್ಲಿನ ಆಧ್ಯಾತ್ಮಿಕ ಪ್ರವಾಸಕ್ಕೆ ಬೃಹತ್ ಪ್ರಮಾಣದಲ್ಲಿ ಚಾಲನೆ ದೊರೆಯಿತು. ದೇಶವಿದೇಶದಿಂದ ಬಂದಿರುವ ಗಣ್ಯರು, ಗೋವಾ ಇದು 'ಭೋಗಭೂಮಿ'ಯಲ್ಲ, 'ಯೋಗಭೂಮಿ’ಯಾಗಿದೆ ಎಂದು ಬಿಂಬಿಸಲು ಈ ಮಹೋತ್ಸವ ದೊಡ್ಡ ಯಶಸ್ಸು ತಂದಿತು.


ಸಂಕ್ಷಿಪ್ತವಾಗಿ, ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ ಇದು ರಾಷ್ಟ್ರೀಯ ಮಟ್ಟದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ಚೈತನ್ಯ ಜಾಗೃತಗೊಳಿಸುವಲ್ಲಿ ಯಶಸ್ವಿಯಾಯಿತು. ಸಾಧನೆ, ಶೌರ್ಯ ಮತ್ತು ದೇಶಭಕ್ತಿ ಈ ತ್ರಿಸೂತ್ರದಲ್ಲಿ ನಿಂತಿದ್ದ ಈ ಮಹೋತ್ಸವ, ಉಪಸ್ಥಿತರಲ್ಲಿ ಭಾರತಕ್ಕೆ ಹಿಂದೂ ರಾಷ್ಟ್ರ ಎಂದು ಪುನರ್ಪ್ರತಿಷ್ಠಾಪನೆ ಮಾಡಿಸುವಲ್ಲಿ ದೃಢವಾದ ಸಂಕಲ್ಪ ಜಾಗೃತಗೊಳಿಸುವುದಾಗಿತ್ತು. ಈ ಶಂಖನಾದ ಎಂದರೆ ಹಿಂದೂಗಳಿಗೆ ಆತ್ಮವಿಶ್ವಾಸ ಮತ್ತು ದಿಶೆ ನೀಡುವುದಾಗಿತ್ತು. ಮಹಾಭಾರತದ ಯುದ್ಧದ ಸಮಯದಲ್ಲಿ ಭಗವಾನ್ ಶ್ರೀಕೃಷ್ಣನು ಕುರುಕ್ಷೇತ್ರದಲ್ಲಿ 'ಪಾಂಚಜನ್ಯ.' ಶಂಖನಾದ ಮಾಡಿ ಯುದ್ಧಕ್ಕೆ ಆರಂಭ ನೀಡಿದ್ದನು, ನಂತರ ಅಧರ್ಮದ ನಾಶವಾಗಿ ಧರ್ಮಕ್ಕೆ ವಿಜಯವಾಯಿತು. ಶಂಖ ಇದು ವಿಜಯ, ಸಮೃದ್ಧಿ, ಆನಂದ, ಶಾಂತಿ, ಪ್ರಸಿದ್ಧಿ, ಕೀರ್ತಿ ಮತ್ತು ಲಕ್ಷ್ಮಿಯ ಪ್ರತೀಕವೆಂದು ನಂಬಲಾಗಿದೆ. ಪವಿತ್ರ ಪರಶುರಾಮ ಭೂಮಿಯಲ್ಲಿ ನಡೆದಿರುವ ಈ ಶಂಖನಾದ ಸನಾತನ ಸಂಸ್ಕೃತಿಯ ವಿಜಯಪಥದ ಶುಭಾರಂಭವಾಗಲಿದೆ ಎಂಬುದಂತೂ ನಿಶ್ಚಿತ.


- ಅಭಯ ವರ್ತಕ, ವಕ್ತಾರರು, ಸನಾತನ ಸಂಸ್ಥೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top