ಬಹುಮುಖಿ ಸಾಧಕರಲ್ಲೊಬ್ಬರಾದ ಶಾಂತಾ ನಾಗರಾಜ್ ಅವರು, ಹಿರಿಯ ಲೇಖಕಿ, ಪ್ರಾಧ್ಯಾಪಕಿ, ಸಂಘಟನಾ ಚತುರೆ, ಸಾಂತ್ವನ ನೀಡುವ ಆಪ್ತ ಸಮಾಲೋಚಕಿ, ರಂಗಭೂಮಿ ಕಾರ್ಯಕರ್ತೆ, ಕರಕುಶಲ ಚತುರೆ ಹೀಗೆ ನಾನಾ ರಂಗದಲ್ಲಿ ಅನುಭವ ಪಡೆದ ಬಹುಮುಖಿ ಸಾಧಕಿ.
ವಿ ಹರಿದಾಸ್ ಮತ್ತು ಸೀತಾಬಾಯಿ ದಂಪತಿಗೆ ಪುತ್ರಿಯಾಗಿ ತಾರೀಕು 10-10-1943 ರಂದು ಜನಿಸಿದರು. ಕನ್ನಡದಲ್ಲಿ ಎಂಎ ಪದವಿ ಪಡೆದು, ಉಪನ್ಯಾಸಕಿ ವೃತ್ತಿ ಆಯ್ಕೆ ಮಾಡಿಕೊಂಡರು. ಇವರ ಸೇವೆ ಅಮೋಘ. ಸಾಹಿತ್ಯ, ಸಮಾಜಸೇವೆ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಇವರ ಆಸಕ್ತಿ. ಇದಲ್ಲದೇ, ಕರಕುಶಲ ಕಲೆಯಲ್ಲಿ ಪರಿಣಿತಿ ಪಡೆದ ಸಾಧಕಿ. ಇವರು ತಮ್ಮ ಸಂಶೋಧನೆ "ಹರಿದಾಸರು-ಅಂಬಾಬಾಯಿ "ವಿಷಯದ ಬಗ್ಗೆ ಪಿಎಚ್ ಡಿ ಪದವಿಯನ್ನು ಡಾ॥ಅನಂತಪದ್ಮರಾವ್ ಅವರ ಮಾರ್ಗದರ್ಶನದಲ್ಲಿ ಪಡೆದರು. (ನ್ಯಾಷನಲ್ ಇನ್ಸಿಟೂಷನ್ ಆಫ್ ವೇದಿಕ್ ಸೈನ್ಸ್) ಇವರ ಎಲ್ಲ ಲೇಖನಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.
ಶಾಂತಾ ನಾಗರಾಜ್ ಅವರು ಸಾಮಾಜಿಕ ಸೇವೆ ಮಾಡುತ್ತಾ, ಸಾಂತ್ವನ ಬರವಣಿಗೆಗಳನ್ನು ಬರೆದು, ಅನೇಕ ಜನರ ಬಾಳಿಗೆ ಬೆಳಕು ತಂದಿರುವುದು ವಿಶೇಷ. ಯಶಸ್ವಿ ಗೃಹಿಣಿಯಾಗುವುದು ಹೇಗೆ, ಶಾಲಾ ಮಕ್ಕಳ ಪೋಷಕ ಜನರಿಗೆ ಕಿವಿಮಾತು, ದುಗುಡ ಕಳೆಯುವ ಮಾರ್ಗ, ಶಾಂತ ಮನಸ್ಸು ಮತ್ತು ನೆಮ್ಮದಿ ಪಡೆಯಲು ಕೈಪಿಡಿ, ವ್ಯಕ್ತಿ ವಿಕಸನ ಚಿಂತನೆ, ಮುಂತಾದ ಅನೇಕ ವಿಚಾರವಂತ ಲೇಖನಗಳು ಬರೆದು, ಸ್ವಸ್ಥ ಸಮಾಜ ನಿರ್ಮಿಸಲು ಸಹಾಯ ಮಾಡಿದ ಸಾಹಿತಿ. ಬಾಲಾಪರಾಧಿಗಳು, ಸ್ವಉದ್ಯೋಗ, ತೆರೆದ ಹೆಬ್ಬಾಗಿಲು ಎಂಬ ಕವನ ಸಂಕಲನ, ಕಿತ್ತು ತಿನ್ನುವ ಮುಪ್ಪು ಎಂಬ ಕಾದಂಬರಿ, ಡಾಲರ್ ಹಕ್ಕಿ, ಯಾನ ಸಂಸ್ಕೃತಿ ಎಂಬ ಕಥಾಸಂಕಲನ, ಪೀಡಾಯನ ಅಂತಹ ಹಾಸ್ಯ ಪಟ್ಟದ ಗೊಂಬೆಯೂ, ಪರದೇಶವೂ ಮುಂತಾದ ಅನೇಕ ಕೃತಿಗಳನ್ನು ಬರೆದ ಲೇಖಕಿ.
ಸಚಿವರಾಗಿದ್ದ ಎಂ ವೈ ಘೋಪ೯ಡೆಯವರ ಕೃತಿಗಳಾದ ನೆರಳು ಬೆಳಕು, ರೆಕ್ಕೆಯ ಮಿತ್ರರು, ಅಭಿವೃದ್ಧಿ, ಆಳ್ವಿಕೆ, ಮಾನವೀಯ ಮೌಲ್ಯಗಳು, ಪೂರ್ವ ಆಫ್ರಿಕದಲ್ಲಿ ಸಫಾರಿ ಮುಂತಾದ ಕೃತಿಗಳನ್ನು ಕನ್ನಡಕ್ಕೆ ಶಾಂತಾ ನಾಗರಾಜ್ ಅವರು ಅನುವಾದ ಮಾಡಿದ್ದಾರೆ. ಮಕ್ಕಳ ಕೃತಿಗಳಲ್ಲಿ ಕಾಗಜ್ಜನ ನ್ಯಾಯ, ನನಗೆ ಇಂಥಾ ಅಮ್ಮ ಬೇಕು ಪ್ರಮುಖವಾದವು.
ಶಾಂತಾ ನಾಗರಾಜ್ ಅವರು ಕನಾ೯ಟಕ ಲೇಖಕಿಯರ ಸಂಘದಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಅರಳದ ಮೊಗ್ಗುಗಳು ಎಂಬ
ಬಾಲಾಪರಾಧಿಗಳ ಜೀವನದ ಬಗ್ಗೆ ಧಾರಾವಾಹಿಯ ಚಿತ್ರಕಥೆ ರಚಿಸಿದ್ದಾರೆ. ಕರಿಮಾಯಿ, ಲಕ್ಷಾಪತಿ ರಾಜನ ಕಥೆ, ವೈಶಾಖ ಮುಂತಾದ ನಾಟಕಗಳಲ್ಲಿ ಸಹ ನಟಿಸಿದ್ದಾರೆ. ಕನ್ನಡ ಮಹಿಳೆ ವೆಬ್ ಸೈಟ್ ಸಹ ಮಾಡಿದ್ದಾರೆ. ಮಕ್ಕಳಿಗೆ ಬೇಸಿಗೆ ಶಿಬಿರ, ರಂಗಶಿಬಿರ ಏರ್ಪಡಿಸಿದ ಮಹಿಳೆ. ವಾರಾಂತ್ಯದಲ್ಲಿ ರಂಗ ಶಾಲೆಯನ್ನೂ ಮಾಡಿದ್ದಾರೆ. ಅಚಲ ಮಾಸಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯರಾಗಿ ಕಾಯ೯ ನಿವ೯ಹಿಸಿದ್ದಾರೆ. ಕುಹು ಕುಹು ಎಂಬ ಮಕ್ಕಳಿಗಾಗಿ ನಿಯತಕಾಲಿಕೆಗಳು ಸಂಪಾದಿಸಿದ ಸಾಧಕಿ.
ಎಲ್ಲಕ್ಕಿಂತ ಹೆಚ್ಚಾಗಿ ಇವರಿಗೆ ಬದುಕನ್ನು ಸಕ್ರಿಯವಾಗಿ ಹೇಗೆ ಸದುದ್ದೇಶದಿಂದ ಬಳಸಬೇಕೆಂಬ ಕಳಕಳಿ ಇವರ ಮನೋಧರ್ಮವಾಗಿದೆ. ಪ್ರೇಮಾ ಕಾರಂತರಿಂದ ಗೌರವವನ್ನು ಸ್ವೀಕರಿಸಿ ಧನ್ಯತೆ ವ್ಯಕ್ತ ಪಡಿಸಿದ್ದಾರೆ. ಇವರನ್ನು ಅನೇಕ ಸಂಘಟನೆಗಳು ಗೌರವಿಸಿವೆ. ಸದಾ ಕಾಲ ಸಮಾಜ ಸೇವೆ, ಬರವಣಿಗೆ, ಅನೇಕ ಸಂಘಟನೆ ಕಾರ್ಯ ಪ್ರವೃತ್ತರಾಗಿ, ತಮ್ಮ ಬದುಕನ್ನು ಸಕ್ರಿಯವಾಗಿ ಸದುಪಯೋಗ ಮಾಡುತ್ತಿರುವ ಲೇಖಕಿ, ಸಂಘಟಕಿ, ಸಾಧಕಿ ದೊರೆತಿರುವುದು ಕನ್ನಡ ಜನರ ಅದೃಷ್ಟ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ