ಸುದೀರ್ಘ ಸೇವೆಯಿಂದ ಸಂತೃಪ್ತಿ: ಸೂರ್ಯನಾರಾಯಣ ಭಟ್

Upayuktha
0


ಮಂಗಳೂರು: ಆಕಾಶವಾಣಿಯಲ್ಲಿ ಸುದೀರ್ಘ 36 ವರುಷಗಳ ಕಾಲ ಅತ್ಯಂತ ನಿಷ್ಠೆ, ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯಿಂದ ಕೆಲಸ ನಿರ್ವಹಿಸಿ, ಇದೀಗ ವೃತ್ತಿಯಿಂದ ನಿವೃತ್ತನಾಗಲಿದ್ದೇನೆ. ಅತ್ಯಂತ ತೃಪ್ತಿ ಮತ್ತು ಸಂತಸದೊಂದಿಗೆ ಕೆಲಸಕ್ಕೆ ವಿದಾಯ ಹೇಳುವ ಸಮಯ ಬಂದಿದೆ. ನಿವೃತ್ತನಾದರೂ ಇನ್ನಷ್ಟು ಸಾಹಿತ್ಯಸೇವೆ ಮಾಡುವ ಹಂಬಲ ಇದೆ ಎಂದು ಇದೇ ತಿಂಗಳ 30ರಂದು ನಿವೃತ್ತರಾಗಲಿರುವ ಆಕಾಶವಾಣಿ ಮಂಗಳೂರು ಇದರ ಸಹಾಯಕ ನಿರ್ದೇಶಕ  ಸೂರ್ಯನಾರಾಯಣ ಭಟ್ ಪಿ.ಎಸ್. ನುಡಿದರು.


ಗುರುವಾರ  ಕನ್ನಡ ಸಾಹಿತ್ಯ ಪರಿಷತ್ತು, ಮಂಗಳೂರು ತಾಲೂಕು ಇದರ ವತಿಯಿಂದ ನಿವೃತ್ತರಾಗಲಿರುವ ಸೂರ್ಯನಾರಾಯಣ ಭಟ್ ಅವರಿಗೆ ಸನ್ಮಾನ ಸಮಾರಂಭ ಜರುಗಿತು. ಕಸಾಪ ಇದರ ಪದಾಧಿಕಾರಿಗಳು ಈ ಸನ್ಮಾನ ನಡೆಸಿಕೊಟ್ಟರು. ಮಂಗಳೂರು ಆಕಾಶವಾಣಿ ಕಛೇರಿಯಲ್ಲಿ ಈ ಸಮಾರಂಭ ಜರುಗಿತು. ಕಸಾಪ ಮಂಗಳೂರು ಇದರ ಅಧ್ಯಕ್ಷರಾದ ಮಂಜುನಾಥ ರೇವಣಕರ್, ಕೇಂದ್ರ ಸಮಿತಿ ಕಸಾಪ ಇದರ ಮಾರ್ಗದರ್ಶಿ ಸಮಿತಿ ಸದಸ್ಯರಾದ ಡಾ| ಮುರುಳು ಮೋಹನ ಚೂಂತಾರು, ಕಾರ್ಯದರ್ಶಿ ಗಣೇಶ್ ಪ್ರಸಾದ್‍ಜೀ,  ರಘು ಶೆಟ್ಟರು,  ಸನತ್‍ಕುಮಾರ್ ಜೈನ್, ಸುಖಲಾಕ್ಷಿ ಆರ್. ಸುವರ್ಣ,  ರತ್ನಾವತಿ ಬೈಕಾಡಿ ಈ ಸನ್ಮಾನ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಡಾ| ಚೂಂತಾರು ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.


ಗಣೇಶ್ ಪ್ರಸಾದ್‍ಜೀ ಅವರು ವಂದನಾರ್ಪಣೆ ಮಾಡಿದರು. ರೇವಣ್‍ಕರ್ ಅವರು ಶುಭಹಾರೈಸಿದರು. ಈ ಸಂದರ್ಭದಲ್ಲಿ ಕಸಾಪದ ಸದಸ್ಯರಾದ  ಕೃಷ್ಣಪ್ಪನಾಯ್ಕ್,  ನಿಜಗುಣ ದೊಡ್ಡಮನಿ, ಪ್ರತಾಪ್‍ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಮಂಗಳೂರು ಆಕಾಶವಾಣಿಯ  ಚಂದ್ರಶೇಖರ್ ಶೆಟ್ಟಿ ಮತ್ತು ಇತರ ಸಹೋದ್ಯೋಗಿಗಳು ಈ ಸಮಾರಂಭಕ್ಕೆ ಸಾಕ್ಷಿಗಳಾದರು. 



  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top