ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ತ್ಯಾಗರಾಜನಗರದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದಲ್ಲಿ 48ನೇ ವರ್ಷದ ಶ್ರೀ ನರಸಿಂಹ ಜಯಂತಿ ಉತ್ಸವ ಹಾಗೂ ಬ್ರಹ್ಮರಥೋತ್ಸವ ಸಮಾರಂಭನ್ನು ಇದೇ ತಿಂಗಳ 10, 11 ಮತ್ತು 12 ರಂದು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದು, ವಿವರಗಳು ಈ ರೀತಿ ಇವೆ:
ಮೇ 10, ಶನಿವಾರ: ಬೆಳಗ್ಗೆ- ನವಗ್ರಹ ಶಾಂತಿ, ಹೋಮಗಳು, ಶ್ರೀ ಅಶ್ವತ್ಥ ಕುಬೇರ ಲಕ್ಷ್ಮೀ ನರಸಿಂಹ ಸ್ವಾಮಿಗೆ ಫಲ ಪಂಚಾಮೃತ ಅಭಿಷೇಕ, ಮಹಾಪೂಜೆ, ನಾಣ್ಯ ಅಭಿಷೇಕ, ಸುದರ್ಶನ ಹೋಮ, ಅನ್ನದಾನ ಸೇವೆ, ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಂತರ ಕಲ್ಯಾಣೋತ್ಸವ, ಶೇಷವಾಹನೋತ್ಸವ.
ಮೇ 11, ಭಾನುವಾರ: ಬೆಳಗ್ಗೆ-ಶ್ರೀ ನರಸಿಂಹ ತಾರಕ ಹೋಮ, ಬ್ರಹ್ಮ ರಥೋತ್ಸವ, ಮಹಾ ಮಂಗಳಾರತಿ, ಅನ್ನದಾನ ಸೇವೆ. ಸಂಜೆ ದ್ವಾರ ಪೂಜೆ, ಗಜೇಂದ್ರ ಮೋಕ್ಷ ಉತ್ಸವ.
ಮೇ 12, ಸೋಮವಾರ: ಬೆಳಗ್ಗೆ-ಶ್ರೀ ನರಸಿಂಹ ಕಂಬಕ್ಕೆ ಕುಂಭಾಭಿಷೇಕ, ಬ್ರಹ್ಮ ಕಲಶ ಅಭಿಷೇಕ, ಚಕ್ರಸ್ನಾನ, ಅನ್ನದಾನ ಸೇವೆ. ಸಂಜೆ ದೊಡ್ಡ ರಥೋತ್ಸವ, ಶ್ರೀ ನರಸಿಂಹ ದೇವರ ದಂಡಕ್ಕೆ ಪೂಜೆ, ಬಲಿಹರಣ. ಸ್ಥಳ : ಶ್ರೀ ಅಭಯ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ತ್ಯಾಗರಾಜನಗರ, ಬೆಂಗಳೂರು-560028
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ