ಈ ಪಾಕಿಗಳ ಅಭಿವೃದ್ಧಿ ಶೂನ್ಯ ದೇಶದಲ್ಲಿ ಯಾರು ಕೂಡಾ ಜೊತೆಯಾಗಿ ಬದುಕಲು ಸಾಧ್ಯವಿಲ್ಲ ಅನ್ನುವುದನ್ನು 1971ರಲ್ಲಿ ಪೂರ್ವ ಪಾಕಿಸ್ತಾನ ಅನುಭವಿಸಿದ ಕಾರಣಕ್ಕಾಗಿಯೇ ಬಾಂಗ್ಲಾದೇಶ ಪ್ರತ್ಯೇಕ ದೇಶವಾಗಿ ಹುಟ್ಟಿ ಕೊಂಡಿರುವುದೊಂದು ಇತಿಹಾಸ. ಈಗ ಅದೇ ತರದಲ್ಲಿ ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಬಲೂಚಿಸ್ತಾನ ಕೂಡಾ ಹೇೂರಾಟವನ್ನು ಮುಂದುವರಿಸಿದೆ. ಪಾಕಿಸ್ತಾನದ ಆರ್ಥಿಕ ರಾಜಕೀಯ ಸಾಮಾಜಿಕ ತುಳಿತದಿಂದ ದೂರವಾಗಿ ಸ್ವತಂತ್ರ ದೇಶವಾಗಿರಬೇಕು ಅನ್ನುವ ಬಲೂಚಿಗರ ಆರ್ತನಾದ ಇಂದು ನಿನ್ನೆಯದಲ್ಲ. ಇದರ ಹಿಂದೆಯೂ ದೊಡ್ಡ ಹೇೂರಾಟದ ಇತಿಹಾಸವಿದೆ.
ಇಂದು ಬಲೂಚಿಸ್ತಾನದ ಇತಿಹಾಸ ತೆರೆದು ನೇೂಡಿದಾಗ ತಕ್ಷಣವೇ ನಮಗೆ ನೆನಪಾಗಬೇಕು 1947 ರಲ್ಲಿ ಈ ಪಾಕಿಸ್ತಾನದವರ ಕೈಯಿಂದ ಜಮ್ಮು ಕಾಶ್ಮೀರದ ನೆಲವನ್ನು ಭಾರತದ ತೆಕ್ಕೆಗೆ ಸೇರಿಸಿಕೊಂಡ ನಮ್ಮ ಭಾರತೀಯರ ಹೇೂರಾಟದ ಕಥೆ. ಅಂದಿನ ದೃಢ ರಾಜಕೀಯ ಇಚ್ಛಾಶಕ್ತಿಯ ಫಲವಾಗಿ ಜಮ್ಮು ಕಾಶ್ಮೀರದ ಮುಕುಟಮಣಿ ಭಾರತದ ಮುಡಿಗೆ ಸೇರಲು ಸಾಧ್ಯವಾಯಿತು ಅನ್ನುವುದನ್ನು ಮತ್ತೆ ನೆನಪಿಸುವಂತಿದೆ, 1947ರಲ್ಲಿ ಇದೇ ಪಾಕಿಸ್ತಾನದವರ ಕೈಯಲ್ಲಿ ಬಲೂಚಿಸ್ತಾನದವರು ಅನುಭವಿಸಿದ ಪಾಡು.
ಭಾರತದಿಂದ ಸಿಡಿದು ಈ ಪಾಕಿಸ್ತಾನ ಸ್ವತಂತ್ರ ದೇಶವಾದ ಸಂದರ್ಭದಲ್ಲಿ ನೈಋತ್ಯ ಭಾಗದಲ್ಲಿದ್ದ ಈ ಬಲೂಚಿಗರು ಬ್ರಿಟಿಷರ ಹಿಡಿತದಿಂದ ಮುಕ್ತರಾದರು. ಆದರೆ ಅಲ್ಲಿಯೂ ಕೂಡಾ ನಮ್ಮ ಕಾಶ್ಮೀರದ ರಾಜ ಹರಿಸಿಂಗ್ ನಂತಹ ಒಬ್ಬ ರಾಜನಿದ್ದ. ಅವರಿಗೂ ಕೂಡಾ ಈ ಪಾಕಿಗಳ ಜೊತೆ ಸೇರುವ ಇಚ್ಛೆ ಕೂಡಾ ಇರಲಿಲ್ಲ. ಆದರೆ ಇದೇ ಪಾಕಿಗಳು ಬಲತ್ಕಾರವಾಗಿ ಇದೇ ಬಲೂಚಿಸ್ತಾನವನ್ನು ತಮ್ಮ ಕಕ್ಷೆಗೆ ಸೇರಿಸಿಕೊಂಡು ಬಿಟ್ಟರು. ಆದರೆ ಆ ಕಾಲದಲ್ಲಿ ಈ ಬಲೂಚಿಗಳನ್ನು ಬೆಂಬಲಿಸುವ ಹತ್ತಿರದ ದೇಶಗಳು ಯಾವುದು ಕೂಡ ಇರಲಿಲ್ಲ.
To the people of Balochistan: The time has come to claim your freedom. As we bring an end to Pakistan, rise up, strike, and take what is rightfully yours.
— Shesh Paul Vaid (@spvaid) May 8, 2025
ಈ ಬಲೂಚಿಸ್ತಾನದ ಸಂಸ್ಕೃತಿಯಾಗಲಿ ಭಾಷೆಯಾಗಲಿ ಧರ್ಮವಾಗಲಿ ಯಾವುದು ಕೂಡ ಈ ಪಾಕಿಗಳ ಸ್ವಭಾವಕ್ಕೆ ಒಪ್ಪುವಂತಿರಲಿಲ್ಲ. ಆದರೂ ಮನಸ್ಸಿಲ್ಲದ ಮನಸ್ಸಿನಲ್ಲಿ ಈ ಪಾಕಿ ಪಾಪಿಗಳ ಜೊತೆ ಬದುಕುವುದು ಅನಿವಾರ್ಯವಾಯಿತು. ಈ ಪಾಕಿಸ್ತಾನದವರಿಗೆ ಬಲೂಚಿ ಸ್ತಾನದ ನೈಸರ್ಗಿಕ ಸಂಪತ್ತು ಬೇಕಾಗಿತ್ತು ಹೊರತು ಬಲೂಚಿಸ್ತಾನದ ಜನ ಬೇಡವಾಗಿತ್ತು.
ಈ ಎಲ್ಲ ಶೇೂಷಣೆ ದೂಷಣೆಗಳ ನಡುವೆ ಸಮಯ ಸಂದರ್ಭ ಬಂದಾಗಲೆಲ್ಲ ಬಲೂಚಿಸ್ತಾನದ ಪ್ರತ್ಯೇಕವಾದಿಗಳು ತಮ್ಮ ಹೇೂರಾಟ ನಿರಂತರವಾಗಿ ಮುಂದುವರಿಸಿಕೊಂಡು ಬಂದರು. ಆದರೆ ಇವರ ಹೇೂರಾಟಕ್ಕೆ ನೇರವಾಗಿ ಯಾರು ಸಹಕರಿಸದ ಕಾರಣ ಈ ಪಾಕಿಸ್ತಾನದ ಭಯೇೂತ್ಪಾದಕ ಶಕ್ತಿಯ ಸೈನಿಕರು ಬಲೂಚಿಗಳನ್ನು ಹಿಮ್ಮೆಟುವುದರಲ್ಲಿ ಯಶಸ್ವಿಯಾದರು.
ಇದು ಒಂದು ತರದಲ್ಲಿ ಜನಾಂಗೀಯ ಹೇೂರಾಟವೆಂದೇ ಕರೆಯಬೇಕು. ಮುಸ್ಲಿಮೇತರ ಬಲೂಚಿಗಳು ಸರಿ ಸುಮಾರು ಶೇ.45ರಷ್ಟು ಸಣ್ಣಪುಟ್ಟ ಪ್ರಮಾಣದಲ್ಲಿ ಸಿಂಧಿಗಳು ಪಂಜಾಬಿಗಳು ಹಿಂದುಗಳಿರುವ ಪ್ರದೇಶವೆಂದರೆ ಅದು ಬಲೂಚಿಸ್ತಾನ. ಹಾಗಾಗಿ ಅದೊಂದು ಇಸ್ಲಾಮಿಕ್ ರಾಷ್ಟ್ರವಾಗಿರಲಿಲ್ಲ. ಆದರೂ ಇವರು ಇಸ್ಲಾಂ ಧೇೂರಣೆಯ ಮತಿಗೆಟ್ಟ ರಾಷ್ಟ್ರದ ಅಡಿಯಲ್ಲಿ ತಮ್ಮತನವನ್ನೆಲ್ಲ ಬಿಟ್ಟು ಬದುಕ ಬೇಕಾದ ಪರಿಸ್ಥಿತಿ ಬಲೂಚಿಗರದ್ದು ಅನ್ನುವುದು ಅರಣ್ಯ ರೇೂದನ ಬದುಕು.
1972ರಲ್ಲಿ ಪಾಕಿಸ್ತಾನದಿಂದ ಬಾಂಗ್ಲಾದೇಶ ಪ್ರತ್ಯೇಕವಾದಾಗ ಕೂಡಾ ಇದೇ ಸಂದರ್ಭದಲ್ಲಿ ಬಲೂಚಿಸ್ತಾನದ ಪ್ರತ್ಯೇಕವಾದಿಗಳು ತಮ್ಮ ಹೇೂರಾಟವನ್ನು ಬಿಗಿಗೊಳಿಸಿದ್ದರು. ಅದು ಕೂಡಾ ಫಲಕಾರಿಯಾಗಲಿಲ್ಲ.
ಇತ್ತೀಚೆಗೆ ಅಂದರೆ 2025ರ ಭಾರತ ಪಾಕಿಸ್ತಾನದ ಯುದ್ಧದ ಸಂದರ್ಭದಲ್ಲಿ ಕೂಡಾ ಇದೇ ಬಲೂಚಿಸ್ತಾನದ ಪ್ರತ್ಯೇಕವಾದಿಗಳು ತೀವ್ರವಾದ ಹೇೂರಾಟವನ್ನು ಮುಂದುವರಿಸಿದ್ದಾರೆ. ಇಂದಿನ ತಮ್ಮ ಹೇೂರಾಟಕ್ಕೆ ಪಾಶ್ಚಿಮಾತ್ಯ ದೇಶಗಳಿಗಿಂತ ಭಾರತವನ್ನೇ ಹೆಚ್ಚು ನಂಬಿ ನಮ್ಮ ಬೆಂಬಲವನ್ನು ಹೆಚ್ಚು ಯಾಚಿಸಿದ್ದಾರೆ. ಆದರೆ ಭಾರತಕ್ಕಿರುವ ಸಮಸ್ಯೆ ಅಂದರೆ ಬಲೂಚಿಸ್ತಾನ ಭೌಗೋಳಿಕವಾಗಿ ಭಾರತಕ್ಕೆ ತಾಗಿಕೊಂಡಿರುವ ದೇಶವಲ್ಲ. 1971ರಲ್ಲಿ ಅದೇ ಬಾಂಗ್ಲಾದೇಶ ನಮ್ಮ ಗಡಿಗೆ ತಾಗಿಕೊಂಡಿರುವ ಕಾರಣ ಅವರ ರಕ್ಷಣೆ ಸುಲಭವಾಗಿ ನಮ್ಮದಾಗಿತ್ತು. ಹಾಗಾಗಿ ಬಲೂಚಿಸ್ತಾನಕ್ಕೆ ನಮ್ಮ ನೈತಿಕ ಬೆಂಬಲ ನೀಡುತ್ತಾ ಬಂದಿದ್ದೇವೆ. ಕಳೆದ ಬಾರಿ ಭಾರತದ ಪ್ರಧಾನಿ ಮೇೂದಿಯವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಬಲೂಚಿಸ್ತಾನದ ಬೇಡಿಕೆ ನ್ಯಾಯುತವಾಗಿದೆ ಅಂದಾಗ ಇದೇ ಪಾಕಿಸ್ತಾನ ವಿರೇೂಧ ವ್ಯಕ್ತಪಡಿಸಿದನ್ನು ಕೇಳಿದ್ದೇವೆ.
ಹಾಗಂತ ಈ ಬಲೂಚಿಗಳಿಗೆ ಅಮೇರಿಕಾದ, ಚೀನಾದವರ ಬೆಂಬಲ ಯಾಚಿಸುವ ಮನ ಸ್ಥಿತಿಯಲ್ಲಿ ಅವರಿಲ್ಲ. ಅದಕ್ಕೂ ಕಾರಣವಿದೆ. ಈ ಎರಡು ದೇಶಗಳು ತಮ್ಮ ಸ್ವಾರ್ಥವನ್ನು ಬಿಟ್ಟು ಬಲೂಚಿಸ್ತಾನದ ಬದುಕಿಗೆ ಪರವಾಗಿ ನಿಲ್ಲುವ ದೇಶಗಳಲ್ಲ ಅನ್ನುವುದು ಖಂಡಿತವಾಗಿಯೂ ಬಲೂಚಿಗರಿಗೂ ಮನವರಿಕೆಯಾಗಿದೆ.
ಅಂತೂ ಇಂದು ಬಲೂಚಿಸ್ತಾನದವರು ಒಂದು ಹೆಜ್ಜೆ ಮುಂದಿಟ್ಟು "ತಮ್ಮದು ಬಲೂಚಿಸ್ತಾನ ಸ್ವಾತಂತ್ರ್ಯ ಗಣರಾಜ್ಯ ಮಾತ್ರವಲ್ಲ ತಮ್ಮ ಆಸ್ಮೀತೆಯ ಸಂಕೇತವಾಗಿ ರಾಷ್ಟ್ರ ಧ್ವಜ ರಾಷ್ಟ್ರ ಗೀತೆ ಸಂಸದೀಯ ವ್ಯವಸ್ಥೆಯನ್ನು ಸ್ಥಾಪಿಸುತ್ತಿದ್ದೇವೆ ಅನ್ನುವ ವಿಶ್ವ ಘೇೂಷಣೆಯನ್ನು ಜಗತ್ತಿಗೆ ತಿಳಿಯುವಂತೆ ಸಾರಿ ಬಿಟ್ಟಿದ್ದಾರೆ. ಕಾದು ನೇೂಡೋಣ ಈ ಪಾಕಿಗಳ ಶಿರದ ನೈಋತ್ಯ ಭಾಗ ಯಾವಾಗ ಕಳಚಿ ಬಿದ್ದು ಬಲೂಚಿಗಳ ಬದುಕಿಗೆ ಶಾಶ್ವತ ಶಾಂತಿ ನೆಮ್ಮದಿ ಶೀಘ್ರವಾಗಿ ಪ್ರಾಪ್ತವಾಗಲಿ ಅನ್ನುವ ಶುಭ ಸಮಾಚಾರಕ್ಕಾಗಿ ನಾವೆಲ್ಲರೂ ಕಾಯೇೂಣ. ಇದುವೇ ನಮ್ಮೆಲ್ಲರ ಹಾರೈಕೆಯೂ ಹೌದು.
- ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ