ಅಬ್ಬಕ್ಕ @500 ಸ್ಮರಣಾರ್ಥ ಉಪನ್ಯಾಸ ಸರಣಿ- 3ನೇ ಕಾರ್ಯಕ್ರಮ

Upayuktha
0


ಮಂಗಳೂರು: ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘ ಮಂಗಳೂರು ವಿಶ್ವವಿದ್ಯಾಲಯ ವಿಭಾಗ ಹಾಗೂ ಮಿಲಾಗ್ರಿಸ್ ಕಾಲೇಜ್ ಮಂಗಳೂರು ಇದರ ಆಶ್ರಯದಲ್ಲಿ ಅಬ್ಬಕ್ಕ @500 ಸ್ಮರಣಾರ್ಥ ಸರಣಿ ಉಪನ್ಯಾಸ ಕಾರ್ಯಕ್ರಮದ 3ನೇ ಕಾರ್ಯಕ್ರಮ ನಡೆಯಿತು.


ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಡಾ. ಕೆ ಸಿ ಮಹಾದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಬ್ಬಕ್ಕ ರಾಣಿಯ ತ್ಯಾಗ, ಸಾಹಸ, ಶೌರ್ಯ ನಮ್ಮೆಲ್ಲರಿಗೂ ಮಾದರಿ. ಈ ಉಪನ್ಯಾಸದ ಮೂಲಕ ಅವಳನ್ನು ಮತ್ತೆ ನೆನಪಿಸುವ ಕಾರ್ಯ ನಡೆಯುತ್ತಿದೆ. ವಿದ್ಯಾರ್ಥಿಗಳು ದೇಶಪ್ರೇಮವನ್ನು ಬೆಳೆಸಿದಾಗ ಪ್ರತಿಯೊಬ್ಬರೂ ಅಬ್ಬಕ್ಕ ನಂತೆ ಸಾಹಸಿಗಳಾಗುವುದಕ್ಕೆ ಸಾಧ್ಯ ಎಂದರು.


ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ರೆ. ಫಾ ಡಾ ಮೈಕೆಲ್ ಎಲ್ ಸಾಂತೂಮಾಯೋರ್ ಶುಭಾಶಯವನ್ನು ತಿಳಿಸಿದರು.


ಕಾರ್ಯಕ್ರಮದಲ್ಲಿ ಶಿಕ್ಷಕಿ ಹಾಗೂ ಬರಹಗಾರರಾದ ವಿಜಯಲಕ್ಷ್ಮಿ ಕಟೀಲ್ ರಾಣಿ ಅಬ್ಬಕ್ಕ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯ ಸಿಂಡಿಕೇಟ್ ಸದಸ್ಯರಾದ ಡಾ ಎಸ್ ಬಿ ಎಂ ಪ್ರಸನ್ನ, ಕೆಆರ್ಎಮ್ಎಸ್ಎಸ್ ಮಂಗಳೂರು ವಿಭಾಗದ  ನಿಕಟಪೂರ್ವ ಅಧ್ಯಕ್ಷರಾದ ಸುಧಾ ಎನ್ ವೈದ್ಯ ಉಪಸ್ಥಿತರಿದ್ದರು.


ಕಾರ್ಯಕ್ರಮದಲ್ಲಿ ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥರಾದ ಪ್ರೊ. ಸೌಮ್ಯ ಕೋಟ್ಯಾನ್ ಸ್ವಾಗತಿಸಿದರು. ಉಪನ್ಯಾಸಕಿ ಮಮತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top