ಅಭಾಸಾಪ ಬೆಂಗಳೂರು: ಶ್ರೀ ವಿವೇಕಾನಂದ ಶಿಖರ- ಪ್ರಗಥಾ ಕವನದ ವಿಶೇಷ ವ್ಯಾಖ್ಯಾನ ನಾಳೆ

Upayuktha
0


ಬೆಂಗಳೂರು: ಬೇಂದ್ರೆಯವರ ನಾಕುತಂತಿ ಕೃತಿಗೆ ಷಷ್ಟಿಪೂರ್ತಿಯ ವರ್ಷವನ್ನು ಅಭಾಸಾಪ ಆಚರಿಸುತ್ತಿದೆ. ಅದರ ಪ್ರಯುಕ್ತ,ವರ್ಷಪೂರ್ತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ನಾಕುತಂತಿ ಕವನ ಸಂಕಲನದ ಕವನ ಗಾಯನ, ಕವನ ವಾಚನ ಮತ್ತು ವ್ಯಾಖ್ಯಾನಗಳನ್ನು ಒಳಗೊಂಡ ಕಾರ್ಯಕ್ರಮ ನಾಳೆ ಶನಿವಾರ ಅಭಾಸಾಪ ಮಹಿಳಾ ಘಟಕದ ಆಯೋಜನೆಯಲ್ಲಿ ನಾಗರಬಾವಿಯಲ್ಲಿ ನಡೆಯಲಿದೆ. 


ಈ ಬಾರಿ, ವಿವೇಕಾನಂದರ ಕುರಿತು ಬೇಂದ್ರೆಯವರು ರಚಿಸಿದ ಶ್ರೀ ವಿವೇಕಾನಂದ ಶಿಖರ- ಪ್ರಗಥಾ ಕವನದ ವಿಶೇಷ ವ್ಯಾಖ್ಯಾನ ಇರುತ್ತದೆ. ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಕವಿ, ಕಾದಂಬರಿಕಾರ ಡಾ. ಜಿ.ಬಿ. ಹರೀಶ ಭಾಗವಹಿಸಲಿದ್ದಾರೆ. ಹಾಸ್ಯ ಲೇಖಕ ಎಂ.ಎಸ್. ನರಸಿಂಹ ಮೂರ್ತಿ ಉಪಸ್ಥಿತರಿರುತ್ತಾರೆ ಎಂದು ಅಭಾಸಾಪ ಬೆಂಗಳೂರು ಮಹಾನಗರ ಮಹಿಳಾ ಸಮಿತಿಯ  ಪ್ರಕಟಣೆ ತಿಳಿಸಿದೆ.

ಕಾರ್ಯಕ್ರಮ ನಡೆಯುವ ಸ್ಥಳ: ಇಂದಿರಾಗಾಂಧಿ ರಾಷ್ಟ್ರೀಯ ಕಲಾಕೇಂದ್ರ, ಮಲ್ಲತ್ತಹಳ್ಳಿ ನಾಗರಬಾವಿ.

ಸಮಯ: ಸಂಜೆ: 4:30


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top