ಬೆಂಗಳೂರು: ಸನಾತನ ಸಂಸ್ಥೆಯ ಮಾಧ್ಯಮದಿಂದ ಕಳೆದ 25 ವರ್ಷಗಳಿಂದ ನಿರಂತರವಾಗಿ ಹಿಂದೂ ರಾಷ್ಟ್ರಕ್ಕಾಗಿ ಜಾಗೃತಿ ಮೂಡಿಸುತ್ತಾ ಬಂದಿರುವ ಪರಮ ಶ್ರದ್ಧೆಯ ಡಾ. ಜಯಂತ ಆಠವಲೆಯವರ ಕಾರ್ಯ ಅಲೌಕಿಕ ಮತ್ತು ಅತ್ಯಂತ ವಿನೂತನವಾಗಿದೆ. ಅವರ 83 ನೆಯ ಜನ್ಮೋತ್ಸವದ ಪ್ರಯುಕ್ತ ಗೋವಾದಲ್ಲಿ ಮೇ 17 ರಿಂದ 19 ರವರೆಗೆ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ' ಆಯೋಜಿಸಲಾಗಿದೆ.
ಇದು ಕೇವಲ ಮೊಹೋತ್ಸವವಲ್ಲ, ಭಾರತವನ್ನು ಮತ್ತೊಮ್ಮೆ ತೇಜಸ್ವಿ, ಸಾಮರ್ಥ್ಯಶಾಲಿಗೊಳಿಸಲು ಮತ್ತು ಸನಾತನ ಧರ್ಮ ಪುನರ್ಸ್ಥಾಪನೆಯ ಜಾಗೃತಿ ಯಾಗಿದೆ, ಎಂದು 'ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ನ್ಯಾಸ' ದ ಕೋಶಾಧ್ಯಕ್ಷರಾದ ಪ. ಪೂ. ಗೋವಿಂದ ದೇವಗಿರಿಜೀ ಮಹಾರಾಜ ಇವರು ಮಹೋತ್ಸವ ಕ್ಕಾಗಿ ಕಳುಹಿಸಿರುವ ಶುಭ ಸಂದೇಶದಲ್ಲಿ ಗೌರವೋದ್ಗಾರವನ್ನು ಮಾಡಿದ್ದಾರೆ.
ಪ್ರಸ್ತುತ ಭಾರತವನ್ನು ಸಮರ್ಥ ರಾಷ್ಟ್ರಗೊಳಿಸಬೇಕಿದ್ದರೆ, ಸನಾತನ ಧರ್ಮದ ಮೂಲಭೂತ ತತ್ವದ ಪುನಃಸ್ಥಾಪನೆ ಮಾಡು ವುದು ಅತ್ಯಗತ್ಯವಾಗಿದೆ; ಏಕೆಂದರೆ ಭಾರತದ ಸಾಮರ್ಥ್ಯದ ಮೇಲೆ ಜಗತ್ತಿನಲ್ಲಿ ಸಮಾನತೆ, ಬಾಂಧವ್ಯ ಮತ್ತು ನಿಜವಾದ ಸ್ವಾತಂತ್ರ್ಯ ಶಾಶ್ವತವಾಗಿ ಉಳಿಯುತ್ತದೆ. ಆದ್ದರಿಂದ ಈ ಕಾರ್ಯ ಯಾವುದೋ ವ್ಯಕ್ತಿಯ ಅಥವಾ ಯಾವುದೋ ಸಂಸ್ಥೆಯ ದಲ್ಲದೆ, ಧರ್ಮದ ಮತ್ತು ರಾಷ್ಟ್ರದ ಕಾರ್ಯವಾಗಿದೆ. ಮತ್ತು ಆದ್ದರಿಂದಲೇ ಇದು ಪ್ರತ್ಯಕ್ಷ ಭಗವಂತನ ಕಾರ್ಯ ವಾಗಿದೆ. ಆದ್ದರಿಂದ ಎಲ್ಲಾ ಧರ್ಮಪ್ರೇಮಿಗಳು, ರಾಷ್ಟ್ರನಿಷ್ಠ ಕಾರ್ಯಕರ್ತರು, ನಾಯಕರು, ಧರ್ಮಗುರುಗಳು ಮತ್ತು ಭಕ್ತರು ಈ ಮಹೋತ್ಸವದಲ್ಲಿ ಸಹಭಾಗಿಯಾಗಿ ತಮ್ಮ ಶ್ರದ್ಧೆಯ ಮತ್ತು ಸೇವಾಭಾವದ ಕೊಡುಗೆ ನೀಡಬೇಕು. ಸನಾತನ ಧರ್ಮದ ಬೇರು ಹೆಚ್ಚು ಶಕ್ತಿಶಾಲಿ ಗೊಳಿಸಲು ಮತ್ತು ಭಾರತದ ಸುಂದರ, ಸಮೃದ್ಧ ಭವಿಷ್ಯಕ್ಕಾಗಿ ಈ ಮಹೋತ್ಸವ ಒಂದು ಸುವರ್ಣ ಅವಕಾಶವಾಗಿದೆ ಎಂದು ಹೇಳಿದ್ದಾರೆ.
ಈ ಮಹಾ ಮಂಥನದಿಂದ ದೊರೆಯುವ ತೇಜಸ್ಸಿನಿಂದ ಭಾರತ ಆಕಾಶದೆತ್ತರಕ್ಕೇರಲಿದೆ ಮತ್ತು ಸನಾತನ ಧರ್ಮದ ದಿವ್ಯ ಪ್ರಕಾಶ ಸಂಪೂರ್ಣ ಜಗತ್ತಿನಲ್ಲಿ ಪಸರಿಸಲಿದೆ. ಆದ್ದರಿಂದ ನಾವೆಲ್ಲರೂ ಒಟ್ಟಾಗಿ ಸೇರಿ ಈ ದಿವ್ಯ ಕಾರ್ಯದಲ್ಲಿ ಸಹಭಾಗಿ ಆಗೋಣ ಮತ್ತು ಭಾರತಕ್ಕೆ ಅದರ ಸನಾತನ ತೇಜಸ್ಸಿನಿಂದ ಮತ್ತೊಮ್ಮೆ ಕಟ್ಟೋಣ ಎಂದು ಅವರು ಕರೆ ನೀಡಿದ್ದಾರೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ