ಬೆಂಗಳೂರು: ಶ್ರೀ ರಾಮ ನವಮಿ ಸಂಗೀತೋತ್ಸವದ ಅಂಗವಾಗಿ ಮಲ್ಲೇಶ್ವರದ ಶ್ರೀರಾಮ ಮಂದಿರದಲ್ಲಿ ಏರ್ಪಡಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕು|| ವಾಣಿಶ್ರೀ ರಾಮಕೃಷ್ಣ ಮತ್ತು ಮೈತ್ರಿ ಇವರುಗಳು ದಾಸವರೇಣ್ಯರಿಂದ ರಚಿಸಲ್ಪಟ್ಟ ಹರಿದಾಸರ ಪದಗಳನ್ನೂ, ಅನ್ನಮಾಚಾರ್ಯರ ಕೀರ್ತನೆಗಳನ್ನೂ ಹಾಗೂ ತ್ಯಾಗರಾಜರ ಕೀರ್ತನೆಗಳನ್ನೂ ಪ್ರಸ್ತುತ ಪಡಿಸಿದರು.
ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಟಿ.ಎಸ್. ರಮೇಶ್, ತಬಲಾ ವಾದನದಲ್ಲಿ ಸರ್ವೋತ್ತಮ ಸಹಕರಿಸಿದರು. ಈ ಕಾರ್ಯಕ್ರಮದಲ್ಲಿ ಅನೇಕ ಪ್ರೇಕ್ಷಕರೊಂದಿಗೆ ಶ್ರೀರಾಮ ಮಂದಿರದ ಪದಾಧಿಕಾರಿಗಳು, ಸಿಬ್ಬಂದಿಗಳು, ದಾಸವಾಣಿ ಮುಖಪುಟದ ಮುಖ್ಯಸ್ಥರಾದ ಜಯರಾಜ್ ಕುಲಕರ್ಣಿ, ನಂದಿ ವಾಹಿನಿ ಯೂಟ್ಯೂಬ್ ವಾಹಿನಿಯ ಜೀರಿಗೆ ಲೋಕೇಶ್ ಉಪಸ್ಥಿತರಿದ್ದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ