ಉಡುಪಿ: ರಾಗ ಧನ ಉಡುಪಿ ಸಂಸ್ಥೆಯ ಆಶ್ರಯದಲ್ಲಿ ಇಂದು ಸಂಜೆ 4:45ಕ್ಕೆ ಮಣಿಪಾಲದ ಅಲೆವೂರು ರಸ್ತೆಯ ಮಣಿಪಾಲ ಡಾಟ್ ನೆಟ್ ನಲ್ಲಿ ಬೆಂಗಳೂರಿನ ಕು. ಸರಸ್ವತಿ ಶುಭ್ರವೇಷ್ಠಿ ಅವರಿಂದ ಹಾಡುಗಾರಿಕೆ ಆಯೋಜಿಸಲಾಗಿದೆ.
ವಯೊಲಿನ್ ನಲ್ಲಿ ಕು.ತನ್ಮಯಿ ಉಪ್ಪಂಗಳ, ಮೃದಂಗದಲ್ಲಿ ಬಾಲಚಂದ್ರ ಭಾಗವತ್ ಉಡುಪಿ, ಸಾಥ್ ನೀಡಲಿದ್ದಾರೆ.
ಸಂಜೆ 5.50ಕ್ಕೆ ದೀಪ ಪ್ರಜ್ವಲನದ ಬಳಿಕ ಹಾಸನದ ರಾಮನಾಥಪುರದ ಸಂಪತ್ ಕುಮಾರ್ ಆರ್. ಎನ್ ಅವರಿಂದ ಹಾಡುಗಾರಿಕೆ ನಡೆಯಲಿದೆ. ವಯೊಲಿನ್ ನಲ್ಲಿ ಕು. ಮಹತೀ ಕೆ. ಕಾರ್ಕಳ, ಮೃದಂಗದಲ್ಲಿ ಸುನಾದ ಕೃಷ್ಣ ಅಮೈ ಸಹಯೋಗ ನೀಡಲಿದ್ದಾರೆ.
ಕಾರ್ಯಕ್ರಮಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರವಿದೆ. ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ ಸ್ವಾಗತವಿದೆ ಎಂದು ರಾಗ ಧನ ಸಂಸ್ಥೆಯ ಕಾರ್ಯದರ್ಶಿ ಉಮಾ ಶಂಕರಿ ತಿಳಿಸಿದ್ದಾರೆ. ಮೊಬೈಲ್ ಸಂಖ್ಯೆ: 99 64140601.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ