ಸ್ಫೂರ್ತಿ ಸೆಲೆ: ಧನಾತ್ಮಕ ಚಿಂತನೆ- ಬದುಕಿನ ಅದ್ಬುತ

Upayuktha
0


ನಾತ್ಮಕ ಚಿಂತನೆಯು ಬದುಕಿನಲ್ಲಿ ತನ್ನದೇ ಆದ ಪರಿಣಾಮವನ್ನು ಬೀರುತ್ತದೆ. ಧನಾತ್ಮಕ ಚಿಂತನೆ ಎಂದರೆ ನಮ್ಮನ್ನು ಸುತ್ತುಗಟ್ಟಿರುವ ಸಮಸ್ಯೆಗಳಲ್ಲಿಯೂ ಉತ್ತಮವಾದ ಅಂಶಗಳನ್ನು ಅನ್ವೇಷಿಸುವುದು. ಇದು ನಮ್ಮನ್ನು ಜೀವನದಲ್ಲಿ ಬೆಂಬಿಡದೆ ಬೆನ್ನು ಹತ್ತಿರುವ ತೊಂದರೆಗಳಲ್ಲಿ ಕೂಡ ನಮ್ಮನ್ನು ಮಾನಸಿಕವಾಗಿ ಬಲಿಷ್ಠ ವ್ಯಕ್ತಿಗಳನ್ನಾಗಿ ಮಾಡುತ್ತದೆ.


ಅದಕ್ಕೆ ಹೇಳುತ್ತಾರೆ:- ಬದುಕಿನಲ್ಲಿ ಓಡುವ ಪ್ರಯತ್ನ ಮಾಡು, ಓಡಲು ಆಗದಿದ್ದರೆ ನಡೆಯುವ ಪ್ರಯತ್ನವನ್ನು ಮಾಡು, ನಡೆಯಲು ಆಗದಿದ್ದರೆ ತೆವಳುವ ಪ್ರಯತ್ನವನ್ನು ಮಾಡು, ಒಟ್ಟಿನಲ್ಲಿ ಹೇಳಬೇಕೆಂದರೆ Keep moving ಅಷ್ಟೇ.


ಧನ್ಮಾತಕ ಚಿಂತನೆ ಎನ್ನುವುದು ನಮ್ಮನ್ನು ಮಾನಸಿಕ ಖಿನ್ನತೆಯತ್ತ ಹೋಗದಂತೆ ತಡೆಯುತ್ತದೆ. ಜೀವನದಲ್ಲಿ ಧನಾತ್ಮಕ ಚಿಂತನೆ ಎನ್ನುವುದು ಒಂದು ರೀತಿಯ energy booster ಇದ್ದ ಹಾಗೆ.


ಜೀವನದಲ್ಲಿ ಎಷ್ಟೇ ಅಂಧಕಾರವು ಸುತ್ತುವರೆದಿದ್ದರೂ, ನಮಗೆ ನಕ್ಷತ್ರಗಳನ್ನು ನೋಡಿ ಸಂತಸ ಪಡುವ ಮನೋ ಭಾವನೆಯನ್ನು ತುಂಬುತ್ತದೆ.

ನಮ್ಮ ಹತ್ತಿರ ಅರ್ಧ ಗ್ಲಾಸು ನೀರಿದ್ದರೂ ಅದನ್ನು ನೋಡಿ ಸಮಾಧಾನ ಪಡುವ attidue ನೀಡುತ್ತದೆ.


ಎಲ್ಲೋ ಒಂದು ಕಡೆ ಓದಿದ ನೆನಪು. "ನನ್ನ ಹರಕು ಚಪ್ಪಲಿಯನ್ನು ನೋಡಿ ಘಾಸಿಗೊಂಡಿದ್ದೆ. ಆದರೆ ಒಬ್ಬ ಕಾಲಿಲ್ಲದ ವ್ಯಕ್ತಿಯನ್ನು ನೋಡಿ  ಸಮಾಧಾನಗೊಂಡೆ". ಇದು ನಮ್ಮ ಮೇಲೆ ಧನಾತ್ಮಕ ಚಿಂತನೆಯು ಪರಿಣಾಮ ಬೀರುವ ರೀತಿ.


ನಾವು ಧನಾತ್ಮಕ ಚಿಂತನೆಯನ್ನು ಅಳವಡಿಸಿಕೊಂಡರೆ ಅದು ನಮಗೆ ನಮ್ಮ ಸೋಲಿನಲ್ಲಿ ಕೂಡ ಗೆಲುವು ಹುಡುಕುವ ರೀತಿಯನ್ನು ತೋರಿಸಿ ಕೊಡುತ್ತದೆ.

ಪಾಂಡವರು ಹನ್ನೆರಡು ವರ್ಷ ವನವಾಸದಲ್ಲಿ ಪರಿತಪಿಸುತ್ತ ಕೂಡಲಿಲ್ಲ. ಅದರ ಬದಲು ಅದನ್ನು ತಮ್ಮ ಮುಂದೆ ನಡೆಯುವ ಯುದ್ದದ ಸಿದ್ಧತೆಗೆ ಬಳಸಿಕೊಂಡರು. ಧನಾತ್ಮಕ ಚಿಂತನೆಯು ನಮ್ಮ ಮಾನಸಿಕ ನೋವು, ಸೋಲು, ಖಿನ್ನತೆಗೆ ರಾಮಬಾಣದಂತೆ ಕಾರ್ಯ ನಿರ್ವಹಿಸುತ್ತದೆ. ಇದನ್ನು ನಮ್ಮ ಜೀವನದಲ್ಲಿ ಅಳವಡಿಸಿ ತೋರಿಸೋಣ. ಏನಂತೀರಾ?


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top