ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಜೋನ್ ರೀಟಾ ಓಬ್ರಾಯೆನ್ರವರ “ರಾಪ್ ಎಂಡ್ ವೆಫ್ಟ್: ಎ ಕಂಪೇರಿಟಿವ್ ಸ್ಟಡಿ ಆನ್ ದ ಲೈವ್ಸ್ ಆಫ್ ದ ಹ್ಯಾಂಡ್ಲೂಮ್ ವೀವರ್ಸ್ ಇನ್ ಜಜಾಪುರ್ ಡಿಸ್ಟ್ರಿಕ್ಟ್, ಒಡಿಶಾ ಎಂಡ್ ಬಾಗಲ್ಕೋಟ್ ಡಿಸ್ಟ್ರಿಕ್ಟ್, ಕರ್ನಾಟಕ” ಎಂಬ ಮಹಾಪ್ರಬಂಧಕ್ಕೆ ಒಡಿಶಾದ ಬುಬನೇಶ್ವರ್ನ ಉತ್ಕಲ್ ವಿಶ್ವವಿದ್ಯಾನಿಲಯವು ಪಿಹೆಚ್.ಡಿ. ಪದವಿ ನೀಡಿ ಗೌರವಿಸಿದೆ.
ಇವರು ಒಡಿಶಾದ ಬುಬನೇಶ್ವರ್ನ ಉತ್ಕಲ್ ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಸಮಾಜಶಾಸ್ತ್ರ ವಿಭಾಗದ ಮಾಜಿ ಪ್ರೊಫೆಸರ್ ಡಾ. ಮೇರಿ ಗೇಬ್ರಿಯೆಲ್ಲಾ ಬೇಜ್ರವರ ಮಾರ್ಗದರ್ಶನದಲ್ಲಿ ಪ್ರಬಂಧವನ್ನು ಮಂಡಿಸಿದ್ದರು.
ಜೋನ್ ರೀಟಾ ಓಬ್ರಾಯೆನ್ರವರು ವೆಸ್ಟ್ ಬೆಂಗಾಲ್ನ ಅಡಮಾಸ್ ವಿಶ್ವವಿದ್ಯಾನಿಲಯದ ಮಾಜಿ ಸಹಕುಲಪತಿಗಳಾಗಿದ್ದ ದಿ| ಡಾ. ಕೋಲಿನ್ ಜೋಸೆಫ್ ಓಬ್ರಾಯೆನ್ರವರ ಸುಪುತ್ರಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ