ಮಾ.18-21; ವಿದ್ಯಾರಣ್ಯಪುರದ ಅಲಸೂರಮ್ಮ ರಾಯರ ಮಠದಲ್ಲಿ ಟಿ ಟಿ ಡಿ ಕಾರ್ಯಕ್ರಮ

Upayuktha
0



ಬೆಂಗಳೂರು: ತಿರುಮಲ ತಿರುಪತಿ ದೇವಸ್ಥಾನಗಳು ಹಿಂದೂಧರ್ಮ ಪ್ರಚಾರ ಪರಿಷತ್ ವತಿಯಿಂದ ವಿದ್ಯಾರಣ್ಯಪುರದ ಅಲಸೂರಮ್ಮ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಾರ್ಚ್ 18 ರಿಂದ 21ರ ವರೆಗೆ ಕಾರ್ಯಕ್ರಮಗಳನ್ನು ಆಯೋಜಿಸಿದ್ದು.

ಅವುಗಳ ವಿವರಗಳು ಈ ರೀತಿ ಇವೆ :

ಭಜನಾ ಕಾರ್ಯಕ್ರಮ : 

ಮಾರ್ಚ್ 18-ವಿದ್ಯಾರಣ್ಯಪುರದ ವಿಜಯ ವಿಠ್ಠಲ ಭಜನಾ ಮಂಡಳಿ, ಮಾರ್ಚ್ 19-ಜಕ್ಕೂರಿನ ವಿಜಯ ವಿಠ್ಠಲ ಭಜನಾ ಮಂಡಳಿ, ಮಾರ್ಚ್ 20-ವಿದ್ಯಾರಣ್ಯಪುರದ ಶ್ರೀ ಸುಶಮೀಂದ್ರ ಭಜನಾ ಮಂಡಳಿ.


ಪ್ರವಚನ ಕಾರ್ಯಕ್ರಮ : ಮಾರ್ಚ್ 18 ರಿಂದ 20 (ಪ್ರತಿದಿನ ಸಂಜೆ  7 ರಿಂದ 8). ಪ್ರವಚನಕಾರರು :ಚಂದ್ರಶೇಖರಾಚಾರ್ಯ, ವಿಷಯ : "ಮಹಾಭಾರತದ ಮಹಾನ್ ಸ್ತ್ರೀಯರು".


ಹರಿನಾಮ ಸಂಕೀರ್ತನೆ : ಮಾರ್ಚ್ 21, ಶುಕ್ರವಾರ ಸಂಜೆ 6-30ಕ್ಕೆ. ಕು|| ಪ್ರಣೀತಾ ಮಣ್ಣೂರ್ ಮತ್ತು ಸಂಗಡಿಗರಿಂದ "ಹರಿನಾಮ ಸಂಕೀರ್ತನೆ". ಕಾರ್ಯಕ್ರಮ ನಡೆಯುವ ಸ್ಥಳ : ಅಲಸೂರಮ್ಮ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಮುಖ್ಯರಸ್ತೆ, ಬಿಇಎಲ್ ಲೇಔಟ್, 3ನೇ ಬ್ಲಾಕ್, ವಿದ್ಯಾರಣ್ಯಪುರ, ಬೆಂಗಳೂರು-560097.


ಈ ಮೇಲಿನ ಎಲ್ಲಾ ಕಾರ್ಯಕ್ರಮಗಳಲ್ಲೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಟಿಟಿಡಿ ಹೆಚ್.ಡಿ.ಪಿ.ಪಿ. ಸಂಚಾಲಕರಾದ ಡಾ|| ಪಿ. ಭುಜಂಗರಾವ್ ವಿನಂತಿಸಿದ್ದಾರೆ.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top