ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಮಾಹಿತಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ವತಿಯಿಂದ ಆರೋಗ್ಯ ರಕ್ಷಣೆಯಲ್ಲಿ ಕೃತಕ ಬುದ್ಧಿಮತ್ತೆಯ ಕುರಿತಾಗಿ ನಡೆಸಲಾದ ಅಂತರರಾಷ್ಟ್ರೀಯ ಸಮ್ಮೇಳನ ICAIH 2025 ಅನ್ನು ಇಂದು (ಮಾ.20) ಅಲೋಶಿಯಸ್ AIMIT ಕ್ಯಾಂಪಸ್ನಲ್ಲಿ ಉದ್ಘಾಟಿಸಲಾಯಿತು. ಆರೋಗ್ಯ ರಕ್ಷಣೆಯಲ್ಲಿ AI ನ ಪರಿವರ್ತನಾ ಪಾತ್ರವನ್ನು ಅನ್ವೇಷಿಸಲು ಪ್ರಪಂಚದಾದ್ಯಂತದ ಸಂಶೋಧಕರು, ಆರೋಗ್ಯ ವೃತ್ತಿಪರರು ಮತ್ತು AI ತಜ್ಞರು ಈ ಸಮ್ಮೇಳನದಲ್ಲಿ ಪಾಲ್ಗೊಂಡರು.
ಪ್ರಮುಖ ಭಾಷಣಕಾರರಾಗಿ ಟೋಕಿಯೊದ ಸೋಫಿಯಾ ವಿಶ್ವವಿದ್ಯಾಲಯದ ಪ್ರತಿಷ್ಠಿತ ಪ್ರಾಧ್ಯಾಪಕ ಪ್ರೊ. ಟಾಡ್ ಗೊನ್ಸಾಲ್ವಿಸ್ ಮತ್ತು ಮೂಡುಬಿದಿರೆಯ ಮ್ಯಾಂಗಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಎಂಡ್ ಇಂಜಿನಿಯರಿಂಗ್ನ ಪ್ರೊಫೆಸರ್ ಡಾ. ಶ್ರೀಕುಮಾರ್ ಆಗಮಿಸಿದ್ದರು, ಅಲೋಶಿಯಸ್ ವಿವಿಯ ಕುಲಸಚಿವ ಡಾ. ರೊನಾಲ್ಡ್ ನಜರೆತ್, AIMIT ಕ್ಯಾಂಪಸ್ನ ನಿರ್ದೇಶಕರಾದ ವಂ. ಡಾ. ಕಿರಣ್ ಕೋತ್, ಎಸ್ಜೆ, ಪ್ರಾಧ್ಯಾಪಕರಾದ ಡಾ. ರಾಕೇಶ್ ಕುಮಾರ್, ಮುಂತಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರೊ. ಟಾಡ್ ಗೊನ್ಸಾಲ್ವೆಸ್, ಆರೋಗ್ಯ ರಕ್ಷಣೆಯಲ್ಲಿ AI ನ ನೈತಿಕ ಜವಾಬ್ದಾರಿಗಳ ಕುರಿತು ಮಾತನಾಡಿದರು, AI- ಚಾಲಿತ ಪರಿಹಾರಗಳಲ್ಲಿ ನ್ಯಾಯಸಮ್ಮತತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ಪ್ರತಿಪಾದಿಸಿದರು. ಡಾ. ಶ್ರೀಕುಮಾರ್ ಜ್ಞಾನ ಹಂಚಿಕೆಯ ಮಹತ್ವವನ್ನು ಒತ್ತಿ ಹೇಳಿದರು ಮತ್ತು ಕಾರ್ಯಕ್ರಮವನ್ನು ಆನ್ಲೈನ್ ಸ್ವರೂಪಕ್ಕೆ ಪರಿವರ್ತಿಸುವುದನ್ನು ತೋರಿಸಿದರು.
ಸಮ್ಮೇಳನದಲ್ಲಿ ಫಾದರ್ ಡಾ. ಕಿರಣ್ ಕೋತ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಸಮ್ಮೇಳನದ ಒಳನೋಟವನ್ನು ಪ್ರಸ್ತುತ ಪಡಿಸಿದರು. ಅಲ್ಲದೆ, ಅವರು ಆರಂಭಿಕ ರೋಗ ಪತ್ತೆಯಲ್ಲಿ AI ಯ ಪಾತ್ರವನ್ನು ಒತ್ತಿ ಹೇಳಿದರು. AI-ಚಾಲಿತ ಆರೋಗ್ಯ ರಕ್ಷಣಾ ಪರಿಹಾರಗಳಲ್ಲಿ ಸಹಯೋಗದ ಸಂಶೋಧನೆಗೆ ಕರೆ ನೀಡಿದರು.
ಡಾ. ರೊನಾಲ್ಡ್ ನಜರೆತ್ ಮಾತನಾಡಿ, ಅಂತರಶಿಸ್ತೀಯ ಸಹಯೋಗದ ಮೂಲಕ ಆರೋಗ್ಯ ರಕ್ಷಣೆಯಲ್ಲಿ ಕ್ರಾಂತಿಕಾರಕ AI ಯ ಸಾಮರ್ಥ್ಯವನ್ನು ಮತ್ತಷ್ಟು ಒತ್ತಿ ಹೇಳಿದರು.
ಸಮ್ಮೇಳನದ ನಡಾವಳಿಗಳ ಅಧಿಕೃತ ಬಿಡುಗಡೆಯನ್ನು ಡಾ. ಸಂತೋಷ್ ಬಿ. ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಉತ್ತಮ ಗುಣಮಟ್ಟದ ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು. ಐಟಿ ವಿಭಾಗದ ಡೀನ್ ಡಾ. ಹೇಮಲತಾ ಎನ್. ಸ್ವಾಗತಿಸಿದರು. ಡಾ. ರಾಕೇಶ್ ಕುಮಾರ್ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ