ಸಂತ-ಮಹಂತರು, ಸಚಿವರೊಂದಿಗೆ 20 ಸಾವಿರಕ್ಕೂ ಹೆಚ್ಚಿನ ಸಾಧಕರು-ಧರ್ಮನಿಷ್ಠರು ಉಪಸ್ಥಿತರಿರಲಿದ್ದಾರೆ.
ಪಣಜಿ (ಗೋವಾ): ಸಮಸ್ತ ಮಾನವಜಾತಿಯ ಪರಮ ಕಲ್ಯಾಣಕ್ಕಾಗಿ, ಹಾಗೆಯೇ ರಾಮರಾಜ್ಯದ ಸ್ಥಾಪನೆಗಾಗಿ ಕಾರ್ಯನಿರತವಿರುವ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ 83 ನೆಯ ಜನ್ಮೋತ್ಸವ ಸಮಾರಂಭ ಮತ್ತು ಸನಾತನ ಸಂಸ್ಥೆಯ ರಜತ(ಬೆಳ್ಳಿ ಹಬ್ಬ)ಮಹೋತ್ಸವ ವರ್ಷದ ಪ್ರಯುಕ್ತ ಗೋವಾದಲ್ಲಿ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ವನ್ನು ಭವ್ಯ ಸ್ವರೂಪದಲ್ಲಿ ಆಚರಿಸಲಾಗುವುದು. ಈ ಮಹೋತ್ಸವವು ಮೇ 17 ರಿಂದ 19, 2025 ರವರೆಗೆ, ಮೂರು ದಿನಗಳ ಕಾಲಾವಧಿಯಲ್ಲಿ ಪೊಂಡಾದ ಫಾರ್ಮಾಗುಡಿಯಲ್ಲಿರುವ ಗೋವಾ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಡೆಯಲಿದೆ.
ಈ ಭವ್ಯ ಮಹೋತ್ಸವಕ್ಕಾಗಿ ದೇಶಾದ್ಯಂತ ಅನೇಕ ಸಂತ-ಮಹಂತರು, ಮುಖ್ಯಮಂತ್ರಿಗಳು, ಕೇಂದ್ರ ಮತ್ತು ರಾಜ್ಯ ಸರಕಾರದಲ್ಲಿನ ಸಚಿವರು, ಪ್ರಖರ ಹಿಂದುತ್ವನಿಷ್ಠರು, ವಿಚಾರವಂತರು, ನ್ಯಾಯವಾದಿಗಳು, ಉದ್ಯಮಿಗಳು, ಸಂಪಾದಕರು ಮುಂತಾದ ಗಣ್ಯರೊಂದಿಗೆ 20 ಸಾವಿರಕ್ಕಿಂತಲೂ ಹೆಚ್ಚಿನ ಸಾಧಕರು, ಧರ್ಮಪ್ರೇಮಿ ಹಿಂದೂಗಳು ಉಪಸ್ಥಿತರಿರಲಿದ್ದಾರೆ, ಎಂಬ ಮಾಹಿತಿಯನ್ನು ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ ರಾಜಹಂಸರವರು ಪತ್ರಿಕಾ ಪರಿಷತ್ತಿನಲ್ಲಿ ನೀಡಿದರು.
ಪಣಜಿಯ ಹೋಟೆಲ್ ಮನೋಶಾಂತಿಯಲ್ಲಿ ನಡೆದಿರುವ ಈ ಪತ್ರಿಕಾ ಪರಿಷತ್ತಿನಲ್ಲಿ ಆರ್ಟ್ ಆಫ್ ಲಿವಿಂಗ್ ನ ಸಂತೋಷ ಘೋಡಗೆ, ಸಾಂಸ್ಕೃತಿಕ ಟ್ರಸ್ಟನ ಜಯಂತ ಮಿರಿಂಗಕರ, ಭಾರತ ಸ್ವಾಭಿಮಾನದ ಕಮಲೇಶ ಬಾಂದೇಕರ, ಬ್ರಾಹ್ಮಣ ಮಹಾಸಂಘ ಗೋವಾದ ರಾಜ ಶರ್ಮಾ, ಗೋಮಂತಕ ಮಂದಿರ ಮಹಾಸಂಘದ ಜಯೇಶ ಥಳಿ, ಕುಂಡಯಿ ತಪೋಭೂಮಿಯಲ್ಲಿನ ಪದ್ಮನಾಭ ಸಂಪ್ರದಾಯದ ಸುಜನ ನಾಯಿಕ, ಜಗದ್ಗುರು ಸ್ವಾಮಿ ನರೇಂದ್ರಾಚಾರ್ಯ ಮಹಾರಾಜರ ಅನುಯಾಯಿಗಳಾದ ಅನಿಲ ನಾಯಿಕ, ಹಾಗೆಯೇ ಉದ್ಯಮಿ ರಾಘವ ಶೆಟ್ಟಿ ಮತ್ತು ಕದಂಬದ ಮಾಜಿ ಮಹಾವ್ಯವಸ್ಥಾಪಕರಾದ ಸಂಜಯ ಘಾಟೆಯವರು ಉಪಸ್ಥಿತರಿದ್ದರು.
ಈ ಪತ್ರಿಕಾ ಪರಿಷತ್ತಿನಲ್ಲಿ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ದ ಲೋಗೋ ಮತ್ತು 'ಧರ್ಮೇಣ ಜಯತೇ ರಾಷ್ಟ್ರಮ್ |' ಎಂಬ ಘೋಷವಾಕ್ಯದ (ಟ್ಯಾಗಲೈನ್) ಅನಾವರಣವಾಯಿತು.
ಮಹೋತ್ಸವದ ಬಗ್ಗೆ ಮಾಹಿತಿ ನೀಡುವಾಗ ಚೇತನ ರಾಜಹಂಸರವರು ಮಾತನಾಡಿ, ಸನಾತನ ಸಂಸ್ಥೆಯು ಕಳೆದ 25 ವರ್ಷಗಳಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಗೋಮಂತಕದ ಪವಿತ್ರ ಭೂಮಿಯಿಂದ, ಆದರ್ಶ ಮತ್ತು ಸಂಸ್ಕಾರಯುತ ಪೀಳಿಗೆಯನ್ನು ರೂಪಿಸಲು ನಿರಂತರವಾಗಿ ಪ್ರಯತ್ನಿಸುತ್ತಿದೆ.
ಈ ರಜತ ಮಹೋತ್ಸವದ ಸಂದರ್ಭದಲ್ಲಿ ರಾಮರಾಜ್ಯ-ಸ್ವರೂಪ ಆದರ್ಶ ರಾಷ್ಟ್ರವನ್ನು ನಿರ್ಮಿಸಲು ಸಾಮೂಹಿಕ ಸಂಕಲ್ಪ ಮಾಡಲಾಗುವುದು. ಈ ಮೂಲಕ ಎಲ್ಲ ಆಧ್ಯಾತ್ಮಿಕ ಸಂಸ್ಥೆಗಳು ಮತ್ತು ಹಿಂದೂ ಸಂಘಟನೆಗಳ ನಡುವಿನ ಧರ್ಮಬಂಧುತ್ವ ಇನ್ನಷ್ಟು ದೃಢವಾಗುವುದು. ಭಾರತದ ಎದುರಿನಲ್ಲಿರುವ ಸವಾಲುಗಳನ್ನು ನೋಡಿದರೆ, ಸನಾತನ ಧರ್ಮದವರ ಅಸ್ತಿತ್ವ ಮತ್ತು ಸನಾತನ ಧರ್ಮದ ಸಂರಕ್ಷಣೆಯು ಅತ್ಯಂತ ಮಹತ್ವದ್ದಾಗಿದೆ; ಆದ್ದರಿಂದ ರಾಷ್ಟ್ರದ ಸನಾತನತೆಯನ್ನು ಉಳಿಸುವುದು ಮತ್ತು ಸನಾತನದ ಗೌರವ ಶಿಖರಗಳಾದ ಗೋವು, ಗಂಗೆ, ಗಾಯತ್ರಿ, ದೇವಸ್ಥಾನಗಳು, ವೇದಾದಿ ಧರ್ಮಗ್ರಂಥಗಳಿಗೆ ಪುನರ್ವೈಭವವನ್ನು ದೊರಕಿಸಿಕೊಡಲು ಈ 'ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ'ವನ್ನು ಆಯೋಜಿಸಲಾಗಿದೆ.
ಗೋವಾದಲ್ಲಿ ಮೊದಲ ಬಾರಿ ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ಮೂರು ದಿನಗಳಿಗಾಗಿ ಸಂತ-ಮಹಂತರು, ಹಿಂದುತ್ವನಿಷ್ಠರು, ಗಣ್ಯರು ಮತ್ತು ಪ್ರತಿಷ್ಠಿತರೊಂದಿಗೆ 20 ಸಾವಿರಕ್ಕಿಂತಲೂ ಹೆಚ್ಚಿನ ಸಾಧಕರು ಮತ್ತು ಧರ್ಮನಿಷ್ಠರು ಒಂದೆಡೆ ಸೇರುತ್ತಿದ್ದಾರೆ. ಇದು ಗೋಮಂತಕ ಭೂಮಿಯಲ್ಲಿನ ಸನಾತನ ಧರ್ಮದವರ ಭವ್ಯ ಕುಂಭಮೇಳವೇ ಆಗಿದ್ದು ಇಲ್ಲಿ ಧರ್ಮ ಮತ್ತು ಆಧ್ಯಾತ್ಮದ ದಿವ್ಯ ಜ್ಞಾನ ಗಂಗೆ ಪ್ರವಹಿಸಲಿದೆ, ಎಂದು ಹೇಳಿದರು.
ಈ ಮಹೋತ್ಸವದಲ್ಲಿ ದೇಶಾದ್ಯಂತದಿಂದ ಬರುವ ಸಂತರು, ಮಹಂತರು ಹಾಗೂ ಧರ್ಮಗುರುಗಳ ಸಂತಸಭೆಯನ್ನು ಆಯೋಜಿಸಲಾಗಿದೆ. ರಾಷ್ಟ್ರ, ಧರ್ಮ, ಸಂಸ್ಕೃತಿ, ಮತ್ತು ಹಿಂದೂ ಸಮಾಜಕ್ಕೆ ಪುನರ್ವೈಭವ ದೊರಕಿಸಲು ಅವರು ತಮ್ಮ ತೇಜಸ್ವಿ ವಾಣಿಯಿಂದ ಮಾರ್ಗದರ್ಶನ ಮಾಡಲಿದ್ದಾರೆ. ಈ ಸಮಯದಲ್ಲಿ ಗಣ್ಯ ವಕ್ತಾರರ ಮಾರ್ಗದರ್ಶನವೂ ಇರಲಿದೆ.
ಮಹೋತ್ಸವಕ್ಕೆ ಆಮಂತ್ರಿತ ಸಂತ-ಮಹಂತರು ಮತ್ತು ವಿಶೇಷ ಗಣ್ಯರು :
'ಆರ್ಟ್ ಆಫ್ ಲಿವಿಂಗ್'ನ ಸಂಸ್ಥಾಪಕರಾದ ಗುರುದೇವ ಶ್ರೀ ರವಿಶಂಕರಜೀ, ಪತಂಜಲಿ ಯೋಗಪೀಠದ ಸಂಸ್ಥಾಪಕರಾದ ಪ.ಪೂ. ಯೋಗಋಷಿ ಸ್ವಾಮಿ ರಾಮದೇವಜೀ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಶಾಧ್ಯಕ್ಷರಾದ ಪ.ಪೂ. ಸ್ವಾಮಿ ಗೋವಿಂದದೇವ ಗಿರೀಜೀ ಮತ್ತು ನ್ಯಾಸದ ಮಹಾಸಚಿವರಾದ ಚಂಪತ ರಾಯಜೀ, ಅಖಿಲ ಭಾರತೀಯ ಅಖಾಡ ಪರಿಷತ್ತಿನ ಅಧ್ಯಕ್ಷರಾದ ಪೂ. ಮಹಂತ ರವೀಂದ್ರ ಪುರಿಜೀ ಮಹಾರಾಜರು.
ಅಯೋಧ್ಯಾ ಹನುಮಾನಗಢಿಯ ಪೂ. ಮಹಂತ ರಾಜು ದಾಸರು, ಶ್ರೀ ಕ್ಷೇತ್ರ ತಪೋಭೂಮಿ (ಕುಂಡಯಿ, ಗೋವಾ) ಪೀಠಾಧೀಶ್ವರ ಪದ್ಮಶ್ರೀ ಸದ್ಗುರು ಬ್ರಹ್ಮೇಶಾನಂದಾಚಾರ್ಯ ಸ್ವಾಮೀಜಿ, 'ಸನಾತನ ಬೋರ್ಡ್' ಸಿದ್ಧಹಸ್ತರಾದ ಪೂಜ್ಯಶ್ರೀ ದೇವಕೀನಂದನ ಠಾಕೂರಜೀ ಮಹಾರಾಜರು, ಕೇಂದ್ರ ವಿದ್ಯುತ್ ರಾಜ್ಯಸಚಿವರಾದ ಶ್ರೀಪಾದಜೀ ನಾಯಕ, ಗೋವಾದ ಮುಖ್ಯಮಂತ್ರಿಗಳಾದ ಡಾ. ಪ್ರಮೋದಜೀ ಸಾವಂತ, ಮಹಾರಾಷ್ಟ್ರ ರಾಜ್ಯದ ಮುಖ್ಯಮಂತ್ರಿಗಳಾದ ದೇವೇಂದ್ರಜೀ ಫಡಣವೀಸ, ಉಪಮುಖ್ಯಮಂತ್ರಿಗಳಾದ ಏಕನಾಥ ಶಿಂದೆ, ತೆಲಂಗಾಣದ ಭಾಜಪದ ಶಾಸಕರಾದ ಟಿ. ರಾಜಾಸಿಂಹ, ಮಾಜಿ ಕೇಂದ್ರ ಮಾಹಿತಿ ಆಯುಕ್ತರಾದ ಉದಯ ಮಾಹುರಕರ, ಹಾಗೆಯೇ ಕಾಶಿ-ಮಥುರಾದಲ್ಲಿನ ದೇವಸ್ಥಾನಗಳ ಮೊಕದ್ದಮೆಗಳನ್ನು ನಡೆಸುತ್ತಿರುವ ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯವಾದಿಗಳಾದ ವಿಷ್ಣು ಶಂಕರ ಜೈನ ಮುಂತಾದ ಅನೇಕ ಗಣ್ಯರನ್ನು ಈ ಕಾರ್ಯಕ್ರಮಕ್ಕೆ ಆಮಂತ್ರಿಸಲಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ