ಶ್ರೀರಾಮುಲು ರಾಜ್ಯದ ಬಜೆಟ್ ಮೇಲೆ ಅಸಮಾಧಾನ

Upayuktha
0

 


ಬಳ್ಳಾರಿ: ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ 16ನೇ ಬಜೆಟ್ ವಿಚಾರವಾಗಿ ಶ್ರೀ ರಾಮುಲು ಬಳ್ಳಾರಿಯ  ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿಯನ್ನು ಕರೆಯಲಾಗಿತ್ತು, ಆದರೆ ಎರಡು ದೋಣಿಯಿಂದ ಬಜೆಟ್ ಮೇಲೆ ಸಮಾಧಾನ,ಅಸಮಾಧಾನ ವ್ಯಕ್ತಪಡಿಸಿದರು. ಜನರ ಮೇಲೆ ಸಾಲದ ಭಾರ ಹೆಚ್ಚಾಗಿದೆ ಎಂದು ಮಾತನಾಡಿದ ಅವರು ಅಸಮಾಧಾನ ವ್ಯಕ್ತಪಡಿಸಿದರು.


ಶ್ರೀರಾಮುಲು ಈಗಾಗಲೇ ಪಕ್ಷದ ಮುಖಂಡರಾಗಿರುವಂತ ವಿರೋಧ ಪಕ್ಷದ ನಾಯಕ ಆರ್,ಅಶೋಕ್ ಅವರು ಇದು ಅಲ್ಪಸಂಖ್ಯಾತರ ಬಜೆಟ್ ಎಂದು ಹಲಾಲ್ ಬಜೆಟ್ ಎಂದು ರಾಜ್ಯ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೆ ಉತ್ತರ ನೀಡಿದ ಶ್ರೀರಾಮುಲು ಪಕ್ಷದ ಚೌಕಟ್ಟಿನಲ್ಲಿ ಹೋರಾಟ ಮಾಡತಕ್ಕಂತದ್ದಕೇ ನನ್ನ ಬೆಂಬಲವಿದೆ ಎಂದರು.


ಇದು ಭಾರತ ಎಲ್ಲ ಸಮುದಾಯದವರಿಗೆ ಸಿಗತಕ್ಕಂತದ್ದೇ ಎಂದು ಬಜೆಟ್ ವಿಚಾರವಾಗಿ ಸಮಾಧಾನ ವ್ಯಕ್ತಪಡಿಸಿದರು. ಇಲ್ಲಿ ಯಾವುದೇ ಜಾತಿ ಲೆಕ್ಕಾಚಾರವಿಲ್ಲವೆಂದರು , ಆದರೆ ಹೈದರಾಬಾದ್ ಕರ್ನಾಟಕಕ್ಕೆ ಆದ್ಯತೆ ಇಲ್ಲ ಮತ್ತು ಮೀಸಲಾತಿ ಹಣವನ್ನು ಗ್ಯಾರಂಟಿಗೆಳು ಗೆ ಬಳಿಕ ಮಾಡಿದ್ದೂ ತಪ್ಪು ಎಂದ್ರೂ  ಕಾನೂನು ಚೌಕಟ್ಟಿನಲ್ಲಿ ಇಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. 


ಈ ಭಾಗದ ಜನರ ನಾಡಿ ಆಗಿರುವ ತುಂಗಭದ್ರಾ ಜಲಾಶಯದ ಗೆಟ್ ಗಳು ನಿರ್ಮಾಣ ವಿಚಾರದಲ್ಲಿ ಸರ್ಕಾರ ಯೋಚನೆ ಮಾಡಿಲ್ಲ,ಆರೋಗ್ಯ ವಿಚಾರದಲ್ಲಿ ಯೋಚನೆ ಮಾಡಿಲ್ಲ, ಕೃಷಿ, ಶಿಕ್ಷಣ ಆಸ್ಪತ್ರೆ ಮುಂತಾದ್ರಿ ವಿಚಾರಗಳಲ್ಲಿ,ದೊಡ್ಡದಾಗಿ ಬಜೆಟ್ ಮಾಡಿದ ಸರ್ಕಾರ ಗಮನಹರಿಸಲಿಲ್ಲವೆಂದು ಇದು ಒಂದು ರೀತಿಯಲ್ಲಿ ಅಸಮಾಧಾನ ಆಗಿದೆ ಎಂದು ತಿಳಿಸಿದರು. 


ಗ್ಯಾರೆಂಟಿ ಯೋಜನೆಗಳಿಗೆ ಹಣವನ್ನು ಬಳಕೆ ಮಾಡಿದ್ದರೆ,ಸಾರಿಗೆ ಇಲಾಖೆ ಪರಿಸ್ಥಿತಿ ಗುಜರಿ ಯಾಗಿದೆ ಎಂದು ಸ್ಕ್ರಾಪ್ ವಾಹನಗಳನ್ನು ಓಡಿಸುತಾರೆ ಎಂದ್ರು 900 ಕೋಟಿಯಷ್ಟು ಸಾರಿಗೆ ನಿಗಮಗಳಿಗೆ ಪಿಎಫ್ ಸಂಬಳ ಡೀಸೆಲ್ ಮುಂತಾದವುಗಳಿಗೆ ಹಣ ಇಲ್ಲದಂತಾಗಿದೆ ಎಂದು ತಿಳಿಸಿದರು ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಮುಖ್ಯ ಯೋಜನೆಗಳು ಎಂದು ಭಾವಿಸಿದ್ದು ನೋವಿನ ವಿಚಾರ ಎಂದರು ಜಿಲ್ಲೆಯಲ್ಲಿ ಸಚಿವರು ಇಲ್ಲದ ಕಾರಣ ಈ ಭಾಗದ ಸಮಸ್ಯೆಗಳು ಬೆಳಿತಾ ಇದ್ದಾವೆ ಎಂದು ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.


ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ ಕೇವಲ ಹಂಪಿ ಉತ್ಸವದಲ್ಲಿ ಸೀನಿ ಸೆಲೆಬ್ರಿಟಿಸ್ ಬಂದ ಸಮಯದಲ್ಲಿ ಮಾತ್ರ ವೇದಿಕೆ ಮೇಲೆ ಕಾಣಿಸಿಕೊಂಡು ಆಮೇಲೆ ಮಾಯ ಆಗಿದ್ದಾರೆ ಎಂದು ಲೇವೇಡಿ ಮಾಡಿದರು, ಮತ್ತು ಗ್ರಾಮೀಣ ಪ್ರದೇಶದ ಒಬ್ಬ ಶಾಸಕ ಸಚಿವರು ಆಗಿಯೇ ಬಳ್ಳಾರಿಗೆ ಬರ್ತೀನಿ ಎಂದು ಮಾತಾಡ್ತಿದ್ದಾರೆ ಎಂದು ನನಗೆ ತಿಳಿದು ಬಂದಿದೆ ಎಂದು ,ಅಪಹಸ್ಯ ಮಾಡಿದರು. 


ಶ್ರೀರಾಮುಲು ಅವರು ಮನೆಯಲ್ಲಿ ಮಾಡುವ ಸಂದರ್ಭದಲ್ಲಿ ಬಿಜೆಪಿಯ ಪಕ್ಷದ ವತಿಯಿಂದ ಬಜೆಟ್ ವಿಚಾರವಾಗಿ ಚಿಪ್ಪು ತೋರಿಸಿ ಪ್ರತಿಭಟನೆ ಮಾಡುತ್ತಿದ್ದು ಮಾಡುವಂತದ್ದು ಗಮನಕ್ಕೆ ಇದ್ದರು ಸಾಹೇಬರು ಮಾತ್ರ ಹೋಗದೆ ಮನೆಯಲ್ಲಿ ಪ್ರೆಸ್ ಮೀಟ್ ಮಾಡುತ್ತಾ ನನ್ನ ಬೆಂಬಲವಿದೆ ಅವರಿಗೆ ಎಂದು ಹೇಳಿದ್ದು ಅಚ್ಚರಿ ಮೂಡಿಸಿದೆ. 


ಇದೇ ಸಂದರ್ಭದಲ್ಲಿ ಈ ಹಿಂದೆ ಕೆಲ ಪಕ್ಷದ ಅಂತರಿಕ ವಿಚಾರಗಳಲ್ಲಿ ರಾಮುಲು ಅಮಿತ್ ಶಾ ಅವರನ್ನು ಭೇಟಿ ಮಾಡುತ್ತೀನಿ ಎಂದು ಹೇಳಿದ್ದು ಭೇಟಿ ಮಾಡಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಇನ್ನೂ ಅವಕಾಶ ಸಿಕ್ಕಿಲ್ಲ ಸಮಯ ಬಂದಾಗ ಭೇಟಿ ಮಾಡ್ತೀನಿ ಎಂದು ಉತ್ತರ ನೀಡಿದರು. ಪಾಲಿಕೆ ಸದಸ್ಯ ಗೋವಿಂದ ರಾಜುಲು ಪಾಲಿಕೆ ಅನುದಾನ ವಿಚಾರದಲ್ಲಿ ಹೋರಾಟ ಮಾಡಿದ್ದು ಮುಖ್ಯಮಂತ್ರಿಗಳ ಗಮನಕ್ಕೆ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳಿದರು ಅಭಿವೃದ್ಧಿ ವಿಚಾರದಲ್ಲಿ ಎಲ್ಲರವನ್ನು ಸಮಾನವಾಗಿ ನೋಡಬೇಕು ಇದು ಒಬ್ಬರಿಬ್ಬರ ವಾರ್ಡ್ ಅಲ್ಲ ಪ್ರಜಾಡಳಿತ ಸರ್ಕಾರವೆಂದು ಬಿಸಿ ಮುಟ್ಟಿಸಿದರು. ಈ ಸಂದರ್ಭದಲ್ಲಿ ಮಾಜಿ ಬುಡಾ ಅಧ್ಯಕ್ಷ ಪಾಲಣ್ಣ ಮತ್ತಿತರರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top