ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ವಿಜ್ಞಾನದ ನಡೆ ಶಾಲೆ,ಕಾಲೇಜುಗಳ ಕಡೆ

Upayuktha
0



ಬಳ್ಳಾರಿ: ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತು (ರಿ) ಬಳ್ಳಾರಿ ಜಿಲ್ಲಾ ಘಟಕ ರಾಷ್ಟ್ರೀಯ ವಿಜ್ಞಾನ ದಿನಾಚರಣೆ 2025  ರನ್ವಯ ಬಳ್ಳಾರಿ ಜಿಲ್ಲೆಯಾದ್ಯಂತ ಶಾಲೆ ಕಾಲೇಜುಗಳಲ್ಲಿ ವಿಜ್ಞಾನ ಜಾಗೃತಿ ಮೂಡುವ ಕಾರ್ಯಕ್ರಮವನ್ನು  ಅಯೋಜಿಸಿದ್ದು  ಸಂಜಯಗಾಂದಿ ಪಾಲಿಟೆಕ್ನಿಕ್ ಕಾಲೇಜುನಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ನಡೆಸಲಾಯಿತು. 


(1)  ಶ್ರೀ ಸದ್ಗುರು ಮಹಾದೇವತಾತ ನವರ ಪ್ರಾಥಮಿಕ ಶಾಲೆ , ಅಲ್ಲಿಪುರ ಬಳ್ಳಾರಿ (2) ವುಂಕಿಮರಿಸಿದ್ಧಮ್ಮ ಆಂಗ್ಲಮಾಧ್ಯಮ  ಶಾಲೆ, (3) ರಾಣಿ ಚನ್ನಮ್ಮ ಬಾಲಕಿಯರ ಪ್ರೌಢಶಾಲೆ, (4)  ಹೀರದ ಸೂಗಮ್ಮ ಆಂಗ್ಲಮಾಧ್ಯಮ ಪ್ರೌಢಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ನಡೆಸುತ್ತ ವಿಜ್ಞಾನ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ವಿಜ್ಞಾನ ಗೀತೆಗಳನ್ನು ಶಾಲೆಗಳಲ್ಲಿ ವಿದ್ಯಾರ್ಥಿಗಳಿಂದ ಹಾಡಿಸುವುದು, ಸಿ.ವಿ.ರಾಮನ್ ರವರ ಬೆಳಕಿನ ಚದುರುವಿಕೆ, ಬಗ್ಗೆ ಮಾಹಿತಿ ನೀಡಲಾಯಿತು.  


ಅಲ್ಲದೆ ಡಾ.ಯು. ಶ್ರೀನಿವಾಸ ಮೂರ್ತಿ ಉಪನ್ಯಾಸಕರು ವಿಜ್ಞಾನ ಸಾಹಿತ್ಯ ಲೇಖಕರು, ಸರ್ಕಾರಿ ಪಧವಿ ಪೂರ್ವ ಕಾಲೇಜು (ಬಾಲಕಿಯರ) ಇವರಿಂದ ಪವಾಡ ಬಯಲು ಮೂಲಕ ಮೂಢನಂಬಿಕೆ ಮತ್ತು ವೈಜ್ಞಾನಿಕ ಮನೋಭಾ ಚಿಂತನೆ ಮೂಡಿಸುವ ಜಾಗೃತಿಯನ್ನು ಏರ್ಪಡಿಲಾಗಿತ್ತು.


ಅಲ್ಲೀಪುರದ ಮಹದೇವ ತಾತನ ಸನ್ನಿಧಿಯಲ್ಲಿ ಜ್ಞಾನ ರಥವನ್ನು ಎಳೆಯುವ ಮೂಲಕ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಜಿಲ್ಲಾ ಘಟಕವು ವಿಜ್ಞಾನ ದಿನಾಚರಣೆ ಆಚರಿಸಲಾಯಿತು.


ಸಂಜಯಗಾಂಧಿ ಪಾಲಿಟೆಕ್ನಿಕ್ ನಲ್ಲಿ ರಾಷ್ಟ್ರೀ ವಿಜ್ಞಾನ ದಿನಾಚರಣೆ:-ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಬಳ್ಳಾರಿ ನಗರದ ಸಂಜಯ್ ಗಾಂಧಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ಬಳ್ಳಾರಿ ಜಿಲ್ಲಾ ಘಟಕದಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು.


ಈ ಸಂದರ್ಭದಲ್ಲಿ ಕಿಸ್ಕಿಂದ ವಿಶ್ವವಿದ್ಯಾಲಯದ ಡೀನ್ ಎಸ್.ಮಂಜುನಾಥ ತಮಟೆ ಬಾರಿಸಿ ಉದ್ಘಾಟಿಸಿ ಮಾತನಾಡುತ್ತಾ ವಿದ್ಯಾರ್ಥಿ ದೆಸೆಯಲ್ಲಿ ಯಾವುದೇ ವಿಷಯದಲ್ಲಾದರೂ ಆಸಕ್ತಿ ಬೆಳೆಸಿಕೊಳ್ಳಬೇಕು ಅಧ್ಯಯನ ಸಂಶೋಧನೆ ಪ್ರಯೋಗ ಶೀಲತೆ ಮನೋಭಾವ ಕ್ರಿಯಾಶೀಲತೆ ಚತುರತೆ ಸಂಶೋಧನೆ ಹೊಂದಿದವರಾದರೆ ಅಂತಹ ವ್ಯಕ್ತಿ ಶಕ್ತಿಯಾಗಿ ಸಾಧಕರಾಗಿ ವಿಶ್ವದಲ್ಲಿ ಮೇಲೆತ್ತರದಲ್ಲಿ ಬೆಳೆಯುತ್ತಾರೆ ಹೆಸರುವಾಸಿಯಾಗುತ್ತಾರೆ ಎಂದರು.


ಡಾಕ್ಟರ್ ಹೆಚ್. ನರಸಿಂಹಯ್ಯನವರ ಜೀವನ ಸಾಧನೆ ಬದುಕು ಬವಣೆ, ಯಾವುದನ್ನು ಸುಲಭವಾಗಿ ಒಪ್ಪಿಕೊಳ್ಳಬೇಡ ಎಂಬ ಅವರ ಪ್ರಶ್ನಾರ್ಥಕ ಚಿಹ್ನೆಯ ಸೂಚನೆ ಚಿತ್ರಅವರ ಮನೆ ಗೋಡೆಯ ಮೇಲೆ ರಾರಾಜಿಸುತ್ತಿತ್ತು.ಸರ್ ಸಿ ವಿ ರಾಮನ್ ಅವರ ಬೆಳಕಿನ ಚದುರುವಿಕೆ ಸಂಶೋಧನೆ ಕುರಿತಾದ ಹಿನ್ನೆಲೆಯನ್ನು ಮತ್ತು ನೋಬೆಲ್ ಪಾರಿತೋಷಕ ಪಡೆದ ಬಗೆಗಿನ ವಿವರಣೆಯನ್ನು ತಿಳಿಸಿದರು ತಮ್ಮ ವಿದ್ಯಾಭ್ಯಾಸ ದ ಪರಿ ಶ್ರಮ ಪ್ರಯೋಗಗಳ ವಿಧಾನ ಪುಸ್ತಕಗಳ ರಚನೆ ಕುರಿತಾಗಿ ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಬಗೆಗಿನ ಅಭಿಪ್ರಾಯಗಳನ್ನು ಹಂಚಿಕೊಂಡರು.


ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸರ್ಕಾರಿ ಪದವಿಪೂರ್ವ ಬಾಲಕಿಯರ ಕಾಲೇಜಿನ ಉಪನ್ಯಾಸಕರಾದ ಡಾ.ಯು ಶ್ರೀನಿವಾಸಮೂರ್ತಿ ತಮ್ಮ ಉಪನ್ಯಾಸದಲ್ಲಿ ಇಂದಿನ ಆಧುನಿಕ ಜಗತ್ತಿನಲ್ಲಿ ವೈಜ್ಞಾನಿಕ ಪ್ರಯೋಗಗಳು ವೈಜ್ಞಾನಿಕ ಚಿಂತನೆಗಳು ವೈಚಾರಿಕತೆಗಳು ಸಂಶೋಧನೆಗಳು ದಿನ ದಿನಕ್ಕೆ ಮಾನವನ ಅಗತ್ಯತೆಗಳಿಗೆ ತಕ್ಕಂತೆ ಬದಲಾಗುತ್ತಾ ಹೋಗುತ್ತಿದೆ ಶಿಕ್ಷಕರು ಪಾಠ ಪ್ರಯೋಗ ಮಾತ್ರ ಮಾಡುತ್ತಾರೆ,


ವಿದ್ಯಾರ್ಥಿಗಳೇ ಅದರಲ್ಲಿ ಹೊಸತನವನ್ನು ಕಂಡು ತಮ್ಮದೇ ರೀತಿಯ ಪ್ರಯೋಗ ಶೀಲತೆಯನ್ನು ಮೆರೆಯುವುದಾದಲ್ಲಿ ಆ ಪಾಠಕ್ಕೊಂದು ಅರ್ಥ ವೈಶಿಷ್ಟ್ಯತೆ ಜ್ಞಾನ ಸಂವರ್ಧನೆ ಹೆಚ್ಚಾಗುತ್ತದೆ ವಿದ್ಯಾರ್ಥಿಗಳು ಕೇವಲ ಪಾಠಗಳನ್ನು ಮಾತ್ರ ಆಲಿಸದೆ ಪಾಠಕ್ಕೆ ಪೂರಕವಾದ ಇತರೆ ಪುಸ್ತಕಗಳ ಅಧ್ಯಯನದಿಂದ ಸಫಲತೆ ಕಾಣಬಹುದಾಗಿದೆ. 


ಸಿವಿ ರಾಮನ್ ಜಾಣ ವಿದ್ಯಾರ್ಥಿಯಾಗಿದ್ದು ಎಲ್ಲಾ ಪರೀಕ್ಷೆಗಳಲ್ಲೂ ಉನ್ನತ ಶ್ರೇಣಿ ಪಡೆದು ಉತ್ತೀರ್ಣರಾಗಿರುತ್ತಾರೆ ಸಾಹಿತ್ಯ ಸಂಗೀತ ಸಂಶೋಧನೆ ಮೆಚ್ಚಿನ ಕ್ಷೇತ್ರವಾಗಿದ್ದವು ಎಂದರಲ್ಲದೆ ಸಿವಿ ರಾಮನ್ ರವರ ವ್ಯಕ್ತಿತ್ವ ಸಾಧನೆಯ ಛಲ ನೋಬೆಲ್ ಪ್ರಶಸ್ತಿಗೆ ಪೂರಕವಾಗಿದ್ದವು ಎಂದು ವಿದ್ಯಾರ್ಥಿಗಳಿಗೆ ಸಾಧಿಸುವ ಮನೋಭಾವ ಬೆಳೆಸಿಕೊಳ್ಳಲು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾದ ಆರ್ ಎಚ್ ಎಮ್ ಚನ್ನಬಸವ ಸ್ವಾಮಿ ಮಾತನಾಡಿ ಮೌಡ್ಯತೆ ಅಳಿಯಲಿ ವಿಜ್ಞಾನ ಬೆಳೆಯಲಿ ಎಂಬ ಘೋಷ ವಾಕ್ಯದೊಂದಿಗೆ ಮೂಢನಂಬಿಕೆಗಳನ್ನು ನಂಬದೇ ಮೂಲ ನಂಬಿಕೆಯನ್ನು ಹೊಂದೋಣ ಮಾಟ ಮಂತ್ರಗಳನ್ನು ನಂಬಬೇಡಿ ಜೀವನೋವನ್ನುತ್ಸಾಹ ದಿಂದ ಉತ್ತಮ ಶಿಕ್ಷಣವನ್ನು ಪಡೆದು ನಾಡಿಗೆ ಕೀರ್ತಿ ತನ್ನಿರಿ ಎಂದರು. 


ಇದಕ್ಕೂ ಮುನ್ನ ಅಲ್ಲಿಪುರದ ಮಹದೇವ ತಾತ ಅವರ ಮಠದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಆಚರಿಸಲಾಯಿತು ಮಕ್ಕಳಲ್ಲಿ ವಿಜ್ಞಾನಿಗಳ ಪರಿಚಯ ಅವರ ಸಂಶೋಧನೆಗಳ ಬಗ್ಗೆ ತಿಳಿಸಲಾಯಿತು  ಸಂಜಯ ಗಾಂಧಿ ಪಾಲಿಟೆಕ್ನಿಕ್ ನ ಪ್ರಾಚಾರ್ಯರಾದ ಗೌರಿಶಂಕರ ಹಿರೇಮಠ    ಮಾತನಾಡಿ ಮಕ್ಕಳಲ್ಲಿ ಸಂಶೋಧನಾ ಗುಣ ವಿದ್ಯಾಭ್ಯಾಸದಲ್ಲಿ ತನ್ಮಯತೆ ಶಿಸ್ತು ಬೆಳೆಸಿಕೊಂಡಲ್ಲಿ ಜೀವನದಲ್ಲಿ ಸಾಧಕರಾಗಿ ಬೆಳೆಯಬಲ್ಲರು. ಮಕ್ಕಳು ಸದಾ ಅಧ್ಯಯನ ಶೀಲರಾಗಬೇಕು ಎಂದರಲ್ಲದೆ  ಮುಖ್ಯ ಅತಿಥಿಗಳ ಉಪನ್ಯಾಸಕರನ್ನು ಪರಿಚಯಿಸಿದರು.


ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಪ್ರಧಾನ ಕಾರ್ಯದರ್ಶಿಗಳಾದ ಯು ರಮೇಶ್ ಹಾಗೂ ಸದಸ್ಯರಾದ ಸಿರುಗುಪ್ಪದ ರಂಗ ಸ್ವಾಮಿ, ಇಂಜಿನಿಯರ್ ಬಾಣಾಪುರದ ಮಹೇಶ  ಹಾಗೂ ಸಂಜಯಗಾಂಧಿ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕರು, ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ಸಿ.ಯಂ.ಗಂಗಾಧರಯ್ಯ,   ವಿದ್ಯಾರ್ಥಿಗಳು ಭಾಗವಹಿಸಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top