ಡಿಕೆಶಿ ಬಾರಿಸಿದ ಡಮರು ರಾಜ್ಯ ರಾಜಕಾರಣಕ್ಕೆ ಹೊಸ ಕಮರು

Upayuktha
0




ರಾಜ್ಯದ ಪ್ರಭಾವಿ ಕಾಂಗ್ರೆಸ್ ನಾಯಕ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಹಾಶಿವರಾತ್ರಿ ಕಾಲದಲ್ಲಿಯೇ ಬಾರಿಸಿದ ಡಮರು ಕಾಂಗ್ರೆಸ್ ಮತ್ತು ಬಿಜೆಪಿ ಪಾಳ್ಯದಲ್ಲಿ ಸಾಕಷ್ಟು ಕಮರು ಘಾಟಿನ ವಾಸನೆಯ ಮಾತುಗಳಿಗೆ ಗ್ರಾಸವಾಗಿರುವುದಂತೂ ನಿಜ.


ಪ್ರಯಾಗ್ ರಾಜ್ ಕುಂಭಮೇಳದಲ್ಲಿ ಗಂಗಾ ಯಮುನಾ ಸರಸ್ವತಿ ತ್ರಿವೇಣಿ ಸಂಗಮದಲ್ಲಿ ಡಿಕೆ ಶಿವಕುಮಾರ್ ಮುಳುಗಿ ಎದ್ದಾಗಲೇ ಇವರ ರಾಜಕೀಯ ನಡೆಯ ಮೇಲೆ ಹೊಸದೊಂದು ವ್ಯಾಖ್ಯಾನ ಬರೆಯಲು ಬಿಜೆಪಿಯ ಹಿಂದುತ್ವದ ಮನಸ್ಸುಗಳು ಪುಟ ತಿರುಗಿಸಿದ್ದಂತೂ ಸತ್ಯ.


ಮಹಾಶಿವರಾತ್ರಿಯ ಶುಭರಾತ್ರಿಯ ಕಾಲದಲ್ಲಿ ಡಿ.ಕೆ ಶಿವಕುಮಾರ್ ಸದ್ಗುರು "ಶಿವ"ರಾತ್ರಿಯಲ್ಲಿ ಶಾ ರವರ ನಡುವೆ ವೇದಿಕೆ ಹಂಚಿಕೊಂಡ ಮೇಲಂತೂ ಡಿಕೆಶಿಯವರ ಮುಂದಿನ ರಾಜಕೀಯದ ನಡೆಯ ಬಗ್ಗೆ ಸ್ವತಃ ಡಿಕೆಶಿಯವರೇ ಊಹಿಸದಷ್ಟು ಮುಂದಕ್ಕೆ ರಾಜಕೀಯ ಭವಿಷ್ಯವನ್ನು ಬರೆಯಲು ಕೆಲ ಬಿಜೆಪಿ ನಾಯಕರ ಹೊರ ಮನಸ್ಸು ಮತ್ತು ಕೆಲ ಕಾಂಗ್ರೆಸ್ ನಾಯಕರ ಒಳ ಮನಸ್ಸು ಚಿಂತೆಗೆ ಒಳಗಾಗಿದಂತೂ ಸತ್ಯ. ಇದಕ್ಕೆಲ್ಲ ಒಂದಿಷ್ಟು ಗರಂ ಮಸಾಲೆ ಅರೆದು ಕಮರು (ಸು)ವಾಸನೆ ಮೂಗಿಗೆ ಬಡಿಯುವಂತೆ ಬಡಿಸಿದ್ದು ನಮ್ಮ ಮಾಧ್ಯಮಗಳು.


ಸ್ವತಃ ಶಿವಕುಮಾರ್ ಹೇಳುತ್ತಾರೆ- "ಕುಂಭ ಮೇಳ, ಗಂಗಾ ಸ್ನಾನ, ಶಿವರಾತ್ರಿ, ನವರಾತ್ರಿ ಇದೆಲ್ಲವೂ ನನ್ನ ರಾಜಕೀಯ ಮೀರಿದ ವೈಯುಕ್ತಿಕ ಬದುಕು. ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ". ಇದು ಕೂಡಾ ಸತ್ಯನೇ. ಒಂದು ವೇಳೆ ಶಿವಕುಮಾರ್ ರ ಈ ನಡೆಯನ್ನು ಕಾಂಗ್ರೆಸ್ ಪ್ರಶ್ನಿಸಿದರೆ ಟೀಕಿಸಿದರೆ ಕಾಂಗ್ರೆಸ್ ಹಿಂದು ಆಚರಣೆಗಳಿಗೆ ವಿರೇೂಧಿಗಳು ಅನ್ನುವುದನ್ನು ಅವರೇ ಮುಂದೆ ನಿಂತು ಸಾಬೀತು ಪಡಿಸಿದಂತೆ ಆಗುತ್ತದೆ. ಮೊದಲೇ ಕಾಂಗ್ರೆಸ್ ಮೇಲೆ ಈ ಹಿಂದುತ್ವದ "Anti ಕಲರ್" ಬಳಿದಾಗಿದೆ. ಮತ್ತೆ ಅದನ್ನು ಅವರೇ ಒಪ್ಪಿಕೊಂಡಂತೆ ಸರಿ. ಹಾಗಾಗಿ ಕಾಂಗ್ರೆಸ್ ನಾಯಕರು ಡಿಕೆಶಿಯವರ ಈ ನಡೆಯ ಮೇಲೆ ಮಾತನಾಡದೇ ಮೌನವಾಗಿರುವುದು ಲೇಸು.


ಇನ್ನು ಬಿಜೆಪಿ ಹಿರಿಯ ನಾಯಕರೊಬ್ಬರ ಹೇಳಿಕೆ. "ಮಹಾರಾಷ್ಟ್ರದ ಶಿಂದೆಯ ಪಾತ್ರದ ತರದಲ್ಲಿಯೇ ಕನಾ೯ಟಕದಲ್ಲಿ ಡಿಕೆಶಿ ಮಿಂಚಲಿದ್ದಾರೆ. ಹಾಗಾದರೆ ಬಿಜೆಪಿಯ ಬಣ ಡಿಕೆಶಿಯವರನ್ನು ರಾಜ್ಯದಲ್ಲಿ ಮುಖ್ಯಮಂತ್ರಿ ಮಾಡಲು ಸಿದ್ಧವಾಗುತ್ತಿದೆಯಾ ಅನ್ನುವ ಗೂಡಾರ್ಥವೂ ಈ ಮಾತಿನಲ್ಲಿಯೇ ಅಡಕವಾಗಿದೆ. ಇದು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯ ಒಳಗೆ ಇನ್ನೊಂದು ಸಂಚಲನ ಮೂಡಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ.


ಈ ಎಲ್ಲಾ ಡಿಕೆಶಿಯವರ ಕುರಿತಾಗಿ ಬರುವ ಪರ, ವಿರೇೂಧ ರಾಜಕೀಯ ಹೇಳಿಕೆಗಳು ಒಂದರ್ಥದಲ್ಲಿ ಡಿಕೆಶಿಯವರೇ ಒಂದೇ ಬತ್ತಳಿಕೆಯಲ್ಲಿ ಎರಡು ಬಾಣಗಳನ್ನು ಹಿಡಿದ ಮಿಲಿಯಂ ಟೆಲ್ನ್ ಕಥೆಯ ಪಾತ್ರದಲ್ಲಿ ಮಿಂಚುವ ಸೂತ್ರಧಾರಿಯಾ ಅನ್ನುವ ಸಂಶಯವೂ ಮೂಡುವಂತಿದೆ. ಒಂದು ಬಾಣ ತಪ್ಪಿದರೆ ಇನ್ನೊಂದು ಬಾಣದಿಂದ ರಾಜನ ತಲೆಯನ್ನೇ ತೆಗೆದು ಬಿಡುತ್ತೇನೆ ಅನ್ನುವ ಎಚ್ಚರಿಕೆಯ ನಡೆಯೂ ಇರಬಹುದಾ?


ಹಾಗಾಗಿಯೇ ನಮ್ಮ ರಾಜಕೀಯ ಚರ್ಚೆಯಲ್ಲಿ ಒಂದು ಮಾತಿದೆ. "Politics & Sex are the interesting topics but unending subjects" ಕನಾ೯ಟಕದ ಸದ್ಯದ ರಾಜಕೀಯ ವಿದ್ಯಮಾನವಂತೂ ಈ ಮಾತಿಗೆ ಇನ್ನಷ್ಟು ಪುಷ್ಟಿ ನೀಡುವಂತಿದೆ ಅನ್ನುವುದು ಅಷ್ಟೇ ಸತ್ಯ.


ವಿಶ್ಲೇಷಣೆ: ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top