ಬ್ರಾಹ್ಮಣ ವಿದ್ಯಾರ್ಥಿ ನಿಲಯದ ಹಳೆಯ ಸಹಪಾಠಿ ಗಳ ಪುನರ್ಮಿಲನ

Upayuktha
0



ಶಿವಮೊಗ್ಗ: ವಸತಿನಿಲಯದ ಹಳೆಯ ಸಹಪಾಠಿ ಗಳ ಪುನರ್ಮಿಲನ ಕಾರ್ಯಕ್ರಮ . ಭಾಗವಹಿಸಿದ ಎಲ್ಲರೂ 75 ದಾಟಿದವರು, ವಿವಿಧ ಹುದ್ದೆಗಳಲ್ಲಿದ್ದು ನಿವೃತ್ತರು. ತಾವಿದ್ದ ಕೊಠಡಿಗಳನ್ನು ನೋಡಿ ಸಂಭ್ರಮಿಸಿದರು.


ಅರವತ್ತು ವರ್ಷಗಳ ಹಿಂದಿನ ತಮ್ಮ ಗೆಳೆಯರನ್ನು ನೋಡಿ ಗುರುತಿಸಿ ಏಕವಚನ ಪ್ರಯೋಗಕ್ಕೆ ಇಳಿದವರು. ಎರಡೂ ದಿನ ಅಲ್ಲಿಯೇ ವಾಸ್ತವ್ಯ ಮಾಡಿದರು . ನೆನಪುಗಳನ್ನು, ಬದುಕು ತಂದ ತಿರುವುಗಳನ್ನು ಹಂಚಿಕೊಂಡರು. 


ಕೆಲವರು ಸಪತ್ನೀಕರಾಗಿ ಆಗಮಿಸಿದ್ದರು. ಇದೆಲ್ಲ ನಡೆದದ್ದು ಶಿವಮೊಗ್ಗ ದ 106 ವರ್ಷ ಹಳೆಯ ಬ್ರಾಹ್ಮಣ ವಿದ್ಯಾರ್ಥಿ ನಿಲಯ ದಲ್ಲಿ.

 

ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಅಶೋಕ್ ಹಾರನಹಳ್ಳಿ, ಜಿಲ್ಲಾ ಅಧ್ಯಕ್ಷ ನಟರಾಜ ಭಾಗವತ್ ಅತಿಥಿ ಗಳನ್ನು ಕುರಿತು ಸಮುದಾಯದ ಹೊಣೆಗಾರಿಕೆ ಕುರಿತು ಮಾತನಾಡಿದರು. ಹೆಚ್.ಎನ್. ಶ್ಯಾಮ ಸುಂದರ ಮತ್ತು ಮಂಜುನಾಥ ಶಾಸ್ತ್ರಿ ಕಾರ್ಯಕ್ರಮ ನಿರ್ವಹಣೆ ನಡೆಸಿಕೊಟ್ಟರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top