ಮಂಗಳೂರು: ಸೋಮವಾರ ನಡೆದ ಸಾಮಾನ್ಯ ಸಭೆಯಲ್ಲಿ, ಮಂಗಳೂರು ವಿಶ್ವವಿದ್ಯಾಲಯ ಪದವಿ ಕನ್ನಡ ಅಧ್ಯಾಪಕರ ಸಂಘ (ವಿಕಾಸ) ದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಡಾ. ಚಿನ್ನಸ್ವಾಮಿ ಎನ್. ಅಧ್ಯಕ್ಷರಾಗಿ, ಡಾ. ಮಾಧವ ಎಂ.ಕೆ. ಕಾರ್ಯದರ್ಶಿಯಾಗಿ, ಶ್ರೀಮತಿ ಮಲ್ಲಿಕಾ ಖಜಾಂಚಿಯಾಗಿ, ಡಾ. ಸತೀಶ್ ಚಿತ್ರಾಪು ಉಪಾಧ್ಯಕ್ಷರಾಗಿ, ಹಾಗೂ ಡಾ. ಅನುರಾಧ ಕುರುಂಜಿ ಸಹ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುತ್ತಾರೆ.
ಈ ತಂಡ ಮುಂದಿನ ಎರಡು ವರ್ಷಗಳ ವರಗೆ ಕಾರ್ಯ ನಿರ್ವಹಿಸಲಿದ್ದು, ಕನ್ನಡ ಸಾಹಿತ್ಯ, ಅಧ್ಯಾಪನ, ಪಠ್ಯಗಳ ಕುರಿತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ. ಜೊತೆಗೆ, ಮಂಗಳೂರು ವಿ.ವಿ ಮಟ್ಟದ ಕನ್ನಡ ಅಧ್ಯಾಪಕರ ಕುಂದು ಕೊರತೆಗಳನ್ನು ಪರಿಹರಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ