ಪರಶಿವನ ಒಲುಮೆಗೆ
ಪಾರ್ವತಿ ವಲ್ಲಭನಿಗೆ
ಉಮಾಮಹೇಶ್ವರನಿಗೆ
ಕರಮುಗಿವೆ ಪರಶುಹಸ್ತನಿಗೆ//
ಶಿವರಾತ್ರಿಯಂದು ಬೇಗನೇ ಎದ್ದು
ದಿನಪೂರ್ತಿ ನಿಟ್ಟುಪವಾಸವಿದ್ದು
ರುದ್ರಾಭಿಷೇಕಕೆ ಬೇಲದಹಣ್ಣ ತಂದು
ಸಹಸ್ರನಾಮಕೆ ಬಿಲ್ವಪತ್ರೆಯ ಕೋಯ್ದು//
ಹಾಲಿನಅಭಿಷೇಕ ಚಂದ್ರಮೌಳಿಗೆ
ಪಂಚಾಮೃತವು ಪಾಲನೇತ್ರನಿಗೆ
ವಿಧವಿಧ ಪುಷ್ಪಾರ್ಚನೆ ನೀಲಲೋಚನಿಗೆ
ಧೂಪದೀಪದ ಆರತಿ ಗಂಗಾಧರನಿಗೆ//
ತುಪ್ಪದ ಆರತಿ ಶ್ರೀಕಂಠನಿಗೆ
ತಂಬಿಟ್ಟು ಉಂಡೆ ಗಂಗಾಧರನಿಗೆ
ಜಾಗರಣೆಯಲಿ ಭಜನೆ ಗೌರೀಶನಿಗೆ
ಭಕ್ತಿಭಾವವು ಅರ್ಪಿತ ಸರ್ವೇಶ್ವರನಿಗೆ//
- ಸಾವಿತ್ರಮ್ಮಓಂ ಅರಸೀಕೆರೆ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ