ಹಸ್ತಿನಾಪುರದ ಚುನಾವಣಾ ರಾಜಕೀಯ ಪುರಾಣ

Upayuktha
0


ಸೇೂತವರು ಯಾರು? ಗೆದ್ದವರು ಯಾರು? ಇಂದು ಭಾರತದ ರಾಜಧಾನಿ ಎಂದೇ ಕರೆಯಲ್ಪಡುವ ನವದೆಹಲಿ. ಅದುಪ್ರಾಚೀನ ಪುರಾಣ ಕಾಲದಲ್ಲಿ ಹಸ್ತಿನಾಪುರವೆಂತಲೂ ಖ್ಯಾತಿ ಪಡೆದ ನಮ್ಮ ರಾಷ್ಟ್ರದ ಐತಿಹ್ಯ ತಾಣ. ಸ್ವಾತಂತ್ರ್ಯ ಗಳಿಸಿದ ಅನಂತರದಲ್ಲಿ ರಾಜ್ಯದ ಸ್ಥಾನ ಮಾನಗಳಿಸಿಕೊಂಡ ನವ ದೆಹಲಿ. ಇದುವರೆಗೆ ಬಹುಮುಖ್ಯವಾಗಿ ಮೂರು ಪಕ್ಷಗಳ ಆಡಳಿತದ ರುಚಿಯನ್ನು ಅನುಭವಿಸಿದ ರಾಷ್ಟ್ರದ ಕೇಂದ್ರ ಸ್ಥಾನವೆನ್ನಿಸಿಕೊಂಡಿದೆ. ಮೂರು ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಆಪ್ ಪಕ್ಷಗಳ ಆಡಳಿತದ ರುಚಿಯನ್ನು ಅನುಭವಿಸಿದ ರಾಜಧಾನಿ ಎಂದೇ ಖ್ಯಾತಿ ಪಡೆದಿದೆ.


ಇಲ್ಲಿ ನಾವು ವಿಶೇಷವಾಗಿ ಗಮನಿಸುವ ಸಂಗತಿ ಅಂದರೆ ಈ ಮೂರು ಪಕ್ಷಗಳಿಗೂ ಸುದೀರ್ಘ ಕಾಲ ಆಡಳಿತ ನಡೆಸಲು ಅನುವು ಮಾಡಿಕೊಟ್ಟಿದ್ದು ಮಾತ್ರವಲ್ಲ ಅನಂತರದಲ್ಲಿ ಅಧಿಕಾರದಿಂದ ಕಿತ್ತು ಬಿಸಾಡಿದ ಕೀರ್ತಿ ಹಸ್ತಿನಾಪುರ ಪ್ರಬುದ್ಧ ಮತದಾರರು ಅನ್ನುವ ಕೀರ್ತಿ ಇವರಿಗೆ ಸಲ್ಲಲೇ ಬೇಕು.

ಹಸ್ತಿನಾಪುರ ರಾಜ್ಯವನ್ನು ಸುದೀರ್ಘ ಕಾಲ ಆಳ ಬೇಕಾದರೆ ಒಂದು ಮಾತನ್ನು ನೆನಪಿಸಿಕೊಳ್ಳಲೇಬೇಕು. ಅದೇನೆಂದರೆ "ಅಧಿಕಾರ ಹಿಡಿಯಲು ಯೇೂಗ ಬೇಕು. ಅದನ್ನು ಉಳಿಸಿಕೊಳ್ಳಲು ಯೇೂಗ್ಯತೆ ಬೇಕು.ಈ ಯೇೂಗ ಎಲ್ಲರಿಗೂ ಬರಬಹುದು ಆದರೆ ಯೇೂಗ್ಯತೆ ಮಾತ್ರ ಎಲ್ಲರಿಗೂ ಬರುತ್ತದೆ  ಅನ್ನುವುದನ್ನು ಹೇಳಲು ಸಾಧ್ಯವಿಲ್ಲ. ಈ ಕಾರಣದಿಂದಲೇ ಬಿಜೆಪಿ, ಕಾಂಗ್ರೆಸ್, ಆಪ್ ಈ ಮೂರು ಪಕ್ಷಗಳು ಕಾಲಕ್ರಮೇಣ ಅಧಿಕಾರವನ್ನು ಕಳೆದುಕೊಳ್ಳುತ್ತಾ ಬಂದಿದ್ದಾವೆ ಅನ್ನುವುದು ಈ ಹಸ್ತಿನಾಪುರದ ಚುನಾವಣಾ ಫಲಿತಾಂಶವೇ ಸಾಕ್ಷೀಕರಿಸುತ್ತದೆ.


ಇಂದು ಬಿಜೆಪಿ ಗೆದ್ದಿದೆ ಅಂದರೆ ಅದು ಬಿಜೆಪಿ ಗೆಲುವು ಅನ್ನುವುದಕ್ಕಿಂತಲೂ ಆಪ್ ನಾಯಕ ಕೇಜ್ರಿವಾಲ್‌ರ ಅಧಿಕಾರ ಭ್ರಷ್ಟಾಚಾರದ "ಕ್ರೇಜಿ"ತನವೇ ಅವರನ್ನು ಜನ ತಿರಸ್ಕರಿಸುವಂತೆ ಮಾಡಿದೆ. ಭ್ರಷ್ಟಾಚಾರ ವಿರೇೂಧಿ ಆಂದೇೂಲನದ ಕೂಸಾಗಿ ಹುಟ್ಟಿಕೊಂಡ ಇದೇ ಅರವಿಂದ ಅಧಿಕಾರದ ಮದದಲ್ಲಿ ಭ್ರಷ್ಟಾಚಾರದ ಪಾದಾರವಿಂದಗಳಿಗೆ ದಾಸರಾಗಿ ಬಿಟ್ಟರು. ಇದೇ ಅವರನ್ನು ಮುಳುಗಿಸಿ ಬಿಟ್ಟಿತು ಅಂದರೂ ತಪ್ಪಾಗಲಾರದು.


ಕಾಂಗ್ರೆಸಿನ ಸ್ಥಿತಿ ಏನು? ಬಹು ಚಿಂತಾಜನಕ ಪರಿಸ್ಥಿತಿ. ಮೂರು ಅವಧಿಯ ಸರಣಿ ಪಂದ್ಯದಲ್ಲಿಯೂ ಶೂನ್ಯ ಸಂಪಾದನೆ. ಆದರೂ ಬುದ್ಧಿ ಕಲಿತಿಲ್ಲ. ಕಾಂಗ್ರೆಸ್ ಪರಿಸ್ಥಿತಿ ಏನಾಗಿದೆ ಅಂದರೆ ಯಾವ ಪ್ರಾದೇಶಿಕ ಪಕ್ಷಗಳು ಕೂಡಾ ಇವರ ಜೊತೆ ಕೈಜೇೂಡಿಸಲು ಸಿದ್ಧರಿಲ್ಲ. ಯಾಕೆಂದರೆ ಹಸ್ತಿನಾಪುರದಲ್ಲಿ ಕಾಂಗ್ರೆಸ್ ಮುಳುಗುವ ಹಡಗು ಅನ್ನುವುದನ್ನು ಅಥ೯ಮಾಡಿಕೊಂಡ ನಮ್ಮ ಕೇಜ್ರಿವಾಲ್ ರು ಇವರನ್ನು ದೂರ ಮಾಡಿದಷ್ಟು ಜಾಸ್ತಿ ಸೀಟು ಗಳಿಸಿಕೊಳ್ಳ ಬಹುದೆಂಬ ಲೆಕ್ಕಾಚಾರ ಅವರದ್ದು. ಇದು ಒಂದು ಲೆಕ್ಕದಲ್ಲಿ ಸರಿಯೇ ಈಜು ಬಾರದವನ್ನು ನದಿಯಲ್ಲಿ ಮುಳುಗುತ್ತಿರುವಾಗ ನಾವು ಅವನ ಕೈ ಹಿಡಿದರೆ ನಮಗೂ ಅದೇ ಗತಿ ಬರಬಹುದು. ಹಾಗಾಗಿ ಆಪ್ ಈ ನಿಟ್ಟಿನಲ್ಲಿ ಸ್ವಲ್ಪ ಬುದ್ಧಿವಂತಿಕೆ ತೇೂರಿದೆ. ಅದೇ ತಾನು ಸೇೂತರೂ ತೊಂದರೆ ಇಲ್ಲ ಈ ಅರವಿಂದನು ನಮ್ಮ ಜೊತೆ ಮುಳುಗಿಸಿ ಬಿಡಬೇಕು ಅನ್ನುವ ತರದಲ್ಲಿ ಮುಳುಗಿಸಿ ಬಿಟ್ಟರು ಇದೇ ಕಾಂಗ್ರೆಸಿಗರು.


ಅಂದರೆ ಬಿಜೆಪಿ ಮತ್ತು ಆಪ್ ಗಳಿಸಿಕೊಂಡ ಶೇಕಡಾ ಮತದಾನದ ಪ್ರಮಾಣ ಅದೇ ರೀತಿಯಲ್ಲಿ ಕಾಂಗ್ರೆಸ್ ಪಡೆದ ಮತದಾನದ ಪ್ರಮಾಣ ನೇೂಡುವಾಗ ಈ ತ್ರಿಕೋನ ಸ್ಪಧೆ೯ಯಲ್ಲಿ ಬಿಜೆಪಿಗೆ ಹೆಚ್ಚಿನ ಸೀಟು ಗಳಿಸಲು ಸಾಧ್ಯವಾಗಿದೆ ಅನ್ನುವುದು ಸ್ವಷ್ಟವಾಗಿ ಕಾಣುತ್ತದೆ. ಬಿಜೆಪಿ 47%, ಆಪ್ 42% ಮತ್ತು ಕಾಂಗ್ರೆಸ್ 6%. ಇದು ಮತಗಳಿಕೆಯ ಸರಳ ಲೆಕ್ಕಾಚಾರ.


ಅಂತೂ ಇಂಡಿಯಾ ಕೂಟದಲ್ಲಿ ಕಾಂಗ್ರೆಸ್ ಎಲ್ಲಾ ಪ್ರಾದೇಶಿಕ ಪಕ್ಷಗಳಿಗೆ ನುಂಗಲಾರದ ತುತ್ತು. ಇವರ ಜೊತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡರೆ ತಮ್ಮ ಗೆಲುವಿಗೆ ಕುತ್ತು ತರಬಹುದೆಂಬ ಲೆಕ್ಕಾಚಾರವೇ ಇಂಡಿಯಾ ಕೂಟಕ್ಕೆ ಅತಿ ದೊಡ್ಡ ಸಂಕಟ. ಬಿಜೆಪಿಯ ಪರಿಸ್ಥಿತಿ ಹಾಗಲ್ಲ. ಬಿಜೆಪಿ ಜೊತೆ ಚುನಾವಣೆ ಹೊಂದಾಣಿಕೆ ಮಾಡಿಕೊಂಡು ಸೇರಿಕೊಂಡರೆ ತಮ್ಮನ್ನೇ ಮುಳುಗಿಸಿ ಬಿಟ್ಟಾರು ಅನ್ನುವ ಭಯ ಎನ್‌ಡಿಎ ಕೂಟವನ್ನು ಕಾಡುವಂತಿದೆ. ಏನೇ ಆಗಲಿ ಸುಮಾರು ಇಪ್ಪತ್ತೇಳು ಸಂವತ್ಸರಗಳ ಅನಂತರದಲ್ಲಿ ಅಧಿಕಾರ ಹಿಡಿಯುವ ಸುಯೇೂಗ ಬಿಜೆಪಿಗರಿಗೆ ಕೂಡಿ ಬಂದಿದೆ ಆದರೆ ಯೇೂಗ್ಯತೆಯನ್ನು ಎಷ್ಟು ಕಾಲ ಕಾಪಾಡಿಕೊಂಡು ಬರುತ್ತಾರೆ ಅನ್ನುವುದನ್ನು ಕಾದು ನೇೂಡ ಬೇಕಾಗಿದೆ.


ವಿಶ್ಲೇಷಣೆ: ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top