ಬಳ್ಳಾರಿ: ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಚೈತನ್ಯ ಟೆಕ್ನೋ ಶಾಲೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ರಾಷ್ಟ್ರೀಯ ವಿಜ್ಞಾನ ದಿನ ನಿಮಿತ್ತವಾಗಿ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಫೆ 28 ರಂದು ಬೆಳಿಗ್ಗೆ 9:30ಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಖ್ಯಾತ ವೈದ್ಯರಾದ ಡಾ|| ವಸಂತ ಶೇಠ್ ಯುರೋ ತಜ್ಞರಿಂದ ಉದ್ಘಾಟಿಸಲಾಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಮುಖ್ಯ ಅತಿಥಿಗಳು ಪ್ರಸ್ತುತ ಸಮಾಜಕ್ಕೆ ಜೀವನಕ್ಕೆ ವಿಜ್ಞಾನದ ಆವಿಷ್ಕಾರಗಳ ಉಪಯುಕ್ತತೆ ಮತ್ತು ವಿದ್ಯಾರ್ಥಿಗಳಲ್ಲಿ ಅಡಗಿರುವ ಕೌಶಲ್ಯ ಮತ್ತು ಪ್ರತಿಭೆಗಳನ್ನು ಹೊರ ತರಲು ಉತ್ತಮವಾದ ವೇದಿಕೆಯನ್ನು ಸಿದ್ಧಪಡಿಸಿ ಕಾರ್ಯ ಪ್ರವೃತ್ತ ಆಗುವಂತೆ ಮಾಡಿದೆ ಎಂದು ಚೈತನ್ಯ ಟೆಕ್ನೋ ಶಾಲೆಯ ಆಡಳಿತ ಮಂಡಳಿಯನ್ನು ಕೊಂಡಾಡಿದರು. ಮತ್ತು ಮಕ್ಕಳು ಮಾಡಿದ ಪ್ರಯೋಗಗಳು, ಚಟುವಟಿಕೆಗಳನ್ನು ಕಂಡ ವೈದ್ಯರು ಬೆರಗಾದರು.
ಅದರಲ್ಲಿ ಹಳ್ಳಿಗಳಲ್ಲಿ ಮಾಡುವ ಚಟುವಟಿಕೆಗಳನ್ನು ಕಣ್ಣಿಗೆ ಕಟ್ಟಿದಂತೆ ಮಾಡಿ ನೋಡಿಸಿದ ವಿದ್ಯಾರ್ಥಿಗಳನ್ನು ಪೋಷಕರು ಮೆಚ್ಚಿಕೊಂಡರು. ಒಟ್ಟಾರೆ ಎಲ್ಲಾ ವಿಜ್ಞಾನ ವಸ್ತು ಪ್ರದರ್ಶನ ಮೆಚ್ಚಿಕೊಳ್ಳುವಂತೆ ಪ್ರದರ್ಶನ ಮಾಡಿದ್ದರು.
ಚೈತನ್ಯ ಟೆಕ್ಕೋ ಶಾಲೆಯಲ್ಲಿ ಪೂರ್ವ ಪ್ರಾಥಮಿಕ ವಿದ್ಯಾರ್ಥಿಗಳಿಂದ 9ನೇ ತರಗತಿಯ ವಿದ್ಯಾರ್ಥಿಗಳವರೆಗೆ ತಯಾರಿಸಿದ ಗಮನಾರ್ಹವಾದ ಆಕರ್ಷಣೀಯವಾದ ವಿಜ್ಞಾನಕ್ಕೆ ಸಂಬಂಧಿಸಿದಂತೆ ಭೌತಾಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ, ಗಣಿತಶಾಸ್ತ್ರ, ಸಮಾಜ ವಿಜ್ಞಾನ ಮತ್ತು ಕನ್ನಡ ಸಾಹಿತ್ಯದಲ್ಲಿ ಜ್ಞಾನಪೀಠ ಪ್ರಶಸ್ತಿ ಪಡೆದ ಹಂಪಿಯ ಗತವೈಭವವನ್ನು ಸಾರುವ ಹಂಪಿ ಉತ್ಸವ.
ಚೈತನ್ಯ ಗ್ರಾಮ ಜೀವನದ ಹಳೆಯ ಕಾಲದ ವಸ್ತುಗಳ ಬಳಕೆ, ಗಣಿತ ವಿಷಯದಲ್ಲಿ ಬಂದ ಪೋಷಕರಿಗೆ ಅತಿಥಿಗಳಿಗೆ ಸ್ಪರ್ಧೆಯನ್ನು ಒಡ್ಡಿ ವಿಜೇತರಾದವರಿಗೆ ತಲಾ ಒಂದು ಸಸಿ ನೀಡುವ ಕಾರ್ಯಕ್ರಮ, ಮಾದರಿಗಳು, ಭಾವಚಿತ್ರಗಳು, ಪ್ರಾಯೋಗಿಕ ಚಟುವಟಿಕೆಗಳು ಶಿಕ್ಷಕರು ಮತ್ತು ಪೋಷಕರ ಮಾರ್ಗದರ್ಶನದಂತೆ ವಿದ್ಯಾರ್ಥಿಗಳು ನಿರರ್ಗಳವಾಗಿ ವಿವರಿಸಿ ವಿಷಯ ವಿಶ್ಲೇಷಣೆಯು ವಿದ್ಯಾರ್ಥಿಗಳ ಪ್ರತಿಭೆ, ಜ್ಞಾನಾರ್ಜನೆ, ಕೌಶಲ್ಯಗಳೆಲ್ಲವೂ ವಿಜಯವಾಡ ಚೈತನ್ಯ ಕಾಲೇಜಿನ ಉಪನ್ಯಾಸಕರು ತೀರ್ಪುಗಾರರಾಗಿ ಆಗಮಿಸಿ ಪ್ರತಿಯೊಂದನ್ನು ವೀಕ್ಷಿಸಿ ತೀರ್ಪನ್ನು ನೀಡಿದರು.
ಚೈತನ್ಯ ಟೆಕ್ಕೋ ಶಾಲೆಯ ಆಡಳಿತ ಮಂಡಳಿ ನಿರ್ದೇಶಕ ಟಿ.ನಾಗೇಂದ್ರ ಅವರು, ಕರ್ನಾಟಕ ರಾಜ್ಯದ ಸಿ.ಇ.ಒ ಆದ ಜಿ.ಸುನಿಲ್ ಕುಮಾರ್ ಅವರು, ಕರ್ನಾಟಕ ವಲಯದ ಎ.ಜಿ.ಎಮ್ ಆದ ಹರಿಕೃಷ್ಣ ರವರು, ಪ್ರಾಂಶುಪಾಲರಾದ ಲಕ್ಷ್ಮಿ ರವರು, ಉಪಪ್ರಾಂಶುಪಾಲರಾದ ಮೇರಿ ರವರು, ಜೋನಲ್ ಡೀನ್ ಮಹೇಶ್, ಡೀನ್ ಆದ ಸಾಲಯ್ಯ, ಸಿ-ಬ್ಯಾಚ್ ಇಂಚಾರ್ಜ್ ಆದ ಚಂದ್ರಶೇಖರ್ , ಪ್ರಾಥಮಿಕ ವಿಭಾಗದ ವಲಯ ಮುಖ್ಯಸ್ಥರಾದ ನಿನಿಷಾ,ಸಾಫ್ಟ್ ಸ್ಕಿಲ್ಸ್ ಸಂಪನ್ಮೂಲ ವ್ಯಕ್ತಿಗಳಾದ ಯೂನಸ್, ಶಾಲೆಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯವರ ಪರಿಶ್ರಮ ಪೋಷಕರ ವಿಶೇಷ ಕಾಳಜಿ ಬೆಂಬಲ ಮತ್ತು ಪ್ರೋತ್ಸಾಹ ಇದರೊಂದಿಗೆ ಅಸಂಖ್ಯಾತ ಸಂಖ್ಯೆಯಲ್ಲಿ ಪೋಷಕರು ಭಾಗವಹಿಸಿ ರಾಷ್ಟ್ರೀಯ ವಿಜ್ಞಾನ ದಿನವನ್ನು ಯಶಸ್ವಿಗೊಳಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ