ರಾಜ್ಯ ಬಿಜೆಪಿಗೆ ಇತಿಹಾಸದಲ್ಲೇ ಕಂಡರಿಯದ ಸಾಂಕ್ರಾಮಿಕ ರೇೂಗ ಬಂದಿರುವುದಂತೂ ಸತ್ಯ. ದಿನ ನಿತ್ಯವೂ ಒಬ್ಬೊಬ್ಬರು ಸೆಟೆದು ನಿಂತು ಪರಸ್ಪರ ಬೈದುಕೊಳ್ಳವುದನ್ನು ನೇೂಡಿದರೆ ಇವರಿಗೆ ಹೇಳುವವರು ಕೇಳುವವರು ಯಾರು ಇಲ್ವಾ ಅನ್ನಿಸುತ್ತದೆ.
ಅಧಿಕಾರವೇ ಇಲ್ಲದ ಕಾಲದಲ್ಲಿ ಅತ್ಯಂತ ಶಿಸ್ತು ಸಂಯಮ ಸಿದ್ಧಾಂತವನ್ನೇ ದಿನ ನಿತ್ಯವೂ ಜಪಿಸುತ್ತಿದ್ದ ಬಿಜೆಪಿಯ ನಾಯಕರು ಒಮ್ಮೆ ಅಧಿಕಾರ ಸಿಕ್ಕಿದ ಮೇಲೆ ಇದನ್ನೆಲ್ಲಾ ಸಂಪೂರ್ಣವಾಗಿ ಕಳಚಿಕೊಂಡು ಅಧಿಕಾರವೇ ನಮ್ಮ ಉಸಿರು ಇಲ್ಲವಾದರೆ ಪ್ರಾಣ ಬಿಡುವುದೇ ವಾಸಿ ಅನ್ನುವ ತರದಲ್ಲಿ ರಾಜ್ಯ ಬಿಜೆಪಿ ನಾಯಕರು ವರ್ತಿಸುವುತ್ತಿರುವುದನ್ನು ನೇೂಡಿ ಜನಸಾಮಾನ್ಯರು ರೇೂಸಿ ಹೇೂಗುವ ಪರಿಸ್ಥಿತಿಗೆ ಬಂದಿರುವುದಂತು ಸತ್ಯ.
ಇದಕ್ಕೆಲ್ಲ ಮುಖ್ಯ ಕಾರಣ ಅಂದು ಕ್ಷಣಿಕ ಸುಖಕ್ಕಾಗಿ ಅಡ್ಡ ದಾರಿಯಲ್ಲಿ ಸರ್ಕಾರ ಕಟ್ಟಿದ ಯಡಿಯೂರಪ್ಪನವರು ಮೊದಲು ಮುಖ್ಯಮಂತ್ರಿಗಳಾದರು ನೇೂಡಿ ಇದು ಪಕ್ಷದ ಅವನತಿಗೆ ಇಟ್ಟ ಮೊದಲ ಹೆಜ್ಜೆ. ಅಂದು ಅಧಿಕಾರಕ್ಕಾಗಿ ಮಂತ್ರಿ ಪದವಿ; ಹಣದ ಆಸೆ ಒಡ್ಧಿ ಕದ್ದು ತಂದ ಗಿರಾಕಿಗಳೇ ಇಂದು ಬಿಜೆಪಿಗೆ ಬಹುದೊಡ್ಡ ಮಗ್ಗುಲ ಮುಳುವಾಗಿ ಪರಿಣಮಿಸಿದ್ದಾರೆ. ಈಗ ಪರಸ್ಪರ ಬೈದುಕೊಳ್ಳುವ ಭರಾಟೆಯಲ್ಲಿ ಬಿಜೆಪಿಗರ ಬಾಯಿಂದಲೇ ಒಂದೊಂದೇ ಪ್ರಕರಣಗಳು ಹಗರಣಗಳು ಬಟ್ಟಂಬಯಲಾಗುತ್ತಿದೆ. ಸರ್ಕಾರ ಇದರ ತನಿಖೆಗಾಗಿ ಇನ್ನೊಂದು ಆಯೇೂಗ ಮಾಡ ಬೇಕಾಗಿಲ್ಲ. ನೇರವಾಗಿ ತನಿಖೆಯನ್ನೇ ಶುರು ಮಾಡಬಹುದು!?
ಇಲ್ಲಿ ಬಿಜೆಪಿಯ ಹಿರಿಯ ನಾಯಕರು ಅನ್ನಿಸಿಕೊಂಡ ಯಡಿಯೂರಪ್ಪನವರ ಜವಾಬ್ದಾರಿಯೂ ಇದೆ. ವಯಸ್ಸಾಗುತ್ತಾ ಬಂದಂತೆ ಯಡಿಯೂರಪ್ಪನವರು ಎಲ್ಲೊ ಒಂದು ಕಡೆ ಪುತ್ರರ ವ್ಯಾಮೋಹಕ್ಕೆ ಒಳಗಾದರೂ ಅನ್ನಿಸುತ್ತದೆ. ಇದಾಗಲೇ ಅವರ ಓರ್ವ ಮಗ ಸಂಸದರು ಆಗಿರುವಾಗ ಇನ್ನೊಬ್ಬರನ್ನು ಶಾಸಕರು ಮಾಡಿದರು. ಅದು ಸಾಲದಂತೆ ಅವರನ್ನು ರಾಜ್ಯದಲ್ಲಿ ತಮ್ಮ ಉತ್ತರಾಧಿಕಾರಿ ಅನ್ನುವ ತರದಲ್ಲಿ ಅಧ್ಯಕ್ಷರನ್ನಾಗಿ ಕೂರಿಸಿಯೇ ಬಿಟ್ಟರು. ಅದು ಕೂಡಾ ಅತಿ ಸಣ್ಣ ಪ್ರಾಯದಲ್ಲಿ. ಇದು ಕೇಂದ್ರ ಮತ್ತು ರಾಜ್ಯದ ಹಿರಿಯ ನಾಯಕರಲ್ಲಿ ಇರಿಸು ಮುರಿಸು ಮಾಡಿದಂತೂ ನಿಜ. ಇದಕ್ಕೆ ಸರಿಯಾಗಿ ಎಲ್ಲೊ ಸಣ್ಣಪುಟ್ಟ ಸಂಕುಚಿತವಾದ ರೀತಿಯಲ್ಲಿ ನಿಣ೯ಯ ತೆಗೆದುಕೊಂಡರು, ಮಾತ್ರವಲ್ಲ ಕೆಲವೊಂದು ಹಿಂಬಾಲಕರ ಬಾಯಿಯಿಂದ ಬೇಕು ಬೇಡವಾದ ರೀತಿಯಲ್ಲಿ ಮಾತುಗಳು ಸ್ಪೇೂಟವಾದವು. ಇದು ಮತ್ತಷ್ಟು ಬಿಜೆಪಿಯ ಮನೆಯ ಬಾಗಿಲನ್ನು ಒಡೆಯುವಂತೆ ಮಾಡಿದ್ದು ಸತ್ಯ.
ಇಷ್ಟೆಲ್ಲಾ ಜಗಳ ಬಿಜೆಪಿಯ ಒಳಗಾದರೂ ಕೂಡಾ ಅಂತೂ ಎರಡು ಕಡೆಯವರು ಬಿಜೆಪಿಯ ರಾಷ್ಟ್ರ ಗಣ ನಾಯಕರಾದ ಮೇೂದಿ ಅಮಿತ್ ಶಾರ ಹೆಸರನ್ನು ಸ್ಮರಿಸಲು ಮರೆಯುವುದಿಲ್ಲ.
ಕುತೂಹಲ ಇರುವುದೇ ಇಲ್ಲಿ. ರಾಜ್ಯದ ಬಿಜೆಪಿನಾಯುಕರು ಇಷ್ಟೊಂದು ಅಸಹ್ಯವಾಗಿ ಪರಸ್ಪರವಾಗಿ ಬಿಜೆಪಿಗೆ ಡ್ಯಾಮೇಜ್ ಬರುವ ತರದಲ್ಲಿ ಬೈದುಕೊಳ್ಳುತ್ತಿದ್ದರು ಮೋದಿ ಬಳಗ ಯಾಕೆ ಮೂಕಪ್ರೇಕ್ಷಕರಾಗಿ ಕೂತಿದ್ದಾರೆ ಅನ್ನುವುದು ಎಲ್ಲರನ್ನೂ ಕಾಡುವ ಬಹು ದೊಡ್ಡ ಪ್ರಶ್ನೆ. ಬಹುಶಃ ಇದಕ್ಕೂ ಒಂದು ಕಾರಣವಿದೆ. ರಾಜ್ಯದಲ್ಲಿ ಸುಲಭವಾಗಿ ಯಡಿಯೂರಪ್ಪ ನವರನ್ನು ನೇರವಾಗಿ ಕಟ್ಟಿ ಹಾಕುವುದು ಸುಲಭದ ಕೆಲಸ ಅಲ್ಲ. ಹಾಗೇ ಸುಮ್ಮನೆ ಮುಟ್ಟಿ ಬಿಟ್ಟರೆ ಅವರು ಇಡೀ ಪಕ್ಷವನ್ನು ಮುಳುಗಿಸಿ ಬಿಟ್ಟರೂ ಆಶ್ಚರ್ಯವಿಲ್ಲ. ಯಾಕೆಂದರೆ ಅವರ ಹಿಂದಿನ ಇತಿಹಾಸವೂ ಇದೆ. ಹಾಗಾಗಿ ರಾಜ್ಯದಲ್ಲಿಯೇ ಅವರು ಬೆಳೆಸಿದ ದಂಡ ಪಿಂಡ ನಾಯಕರಿಂದಲೇ ಅವರ ವಂಶಾವಳಿಯ ರಾಜಕೀಯವನ್ನು ತುಳಿಸಿ ಬದಿಗೆ ಸರಿಸಿ ಬಿಟ್ಟರೆ ಮುಂದೆ ರಾಜ್ಯದಲ್ಲಿ ಜಾತಿ ಮೀರಿದ ರಾಜಕಾರಣಕ್ಕೊಂದು ಅಡಿಗಲ್ಲು ಹಾಕ ಬಹುದು ಅನ್ನುವ ಚಾಣಾಕ್ಷತನವೂ ಅಡಗಿರಬಹುದು?
ಆದರೆ ಬಿಜೆಪಿ ಇಲ್ಲಿ ಒಂದು ಎಚ್ಚರಿಕೆ ವಹಿಸಲೇ ಬೇಕಾಗಿದೆ. ಇದೇ ಕಾಯಿಲೆ ರಾಷ್ಟ್ರ ವ್ಯಾಪಿಯಾಗಿ ಹರಡದಂತೆ ಎಚ್ಚರಿಕೆ ವಹಿಸಲೇಬೇಕಾಗಿದೆ. ಬರೇ ಮೇೂದಿ ಮತ್ತು ಶಾ ರವರ ಹೆಸರು ವರ್ಚಸ್ಸಿನಲ್ಲಿಯೇ ಪಕ್ಷವನ್ನು ಕಟ್ಟುತ್ತೇವೆ ಅನ್ನುವುದು ಪಕ್ಷದ ಮುಂದಿನ ಬೆಳವಣಿಗೆಯ ದೃಷ್ಟಿಯಿಂದ ಹೆಚ್ಚು ಅಪಾಯಕಾರಿ ಸಂಕೇತವೂ ಹೌದು. ಪ್ರತಿ ನಾಯಕರಲ್ಲೂ ಸ್ವಯಂ ತಾಕತ್ತು ಶಿಸ್ತು ಸಂಸ್ಕಾರ ಬೆಳೆಸುವುದರ ಮೂಲಕ ಪಕ್ಷಕ್ಕೆ ಅವರು ಶಕ್ತಿಯಾಗಿ ರೂಪಗೊಂಡಾಗ ಮಾತ್ರ ರಾಜ್ಯ ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ರಾಜಕೀಯ ಪಯಾ೯ಯ ಶಕ್ತಿಯಾಗಿ ಬೆಳೆಯಬಹುದು. ಬರೇ ಪಕ್ಷದ ಹೆಸರಿನಲ್ಲಿ ಒಂದಿಷ್ಟು ಕೇೂಟಿಗಟ್ಟಲೆ ಸಂಪತ್ತು ಸಂಗ್ರಹಿಸಿ ಕೂಡಿಟ್ಟರೆ ಪಕ್ಷ ಬೆಳೆಯಲಾರದು ಅನ್ನುವುದು ಅಷ್ಟೇ ಸತ್ಯ.
- ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಉಡುಪಿ.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ