ಉಜಿರೆ ಎಸ್.ಡಿ.ಎಂ. ಕಾಲೇಜಿನಲ್ಲಿ ‘ಇಂಕ್ಸ್ಪೈರ್ 2025’ ಅಂತರ್ ತರಗತಿ ಸ್ಪರ್ಧೆ

Upayuktha
0

ಜೀವನದಲ್ಲಿ ಆದ್ಯತೆ ಅರಿತುಕೊಂಡು ಕೌಶಲಗಳೊಂದಿಗೆ ಮುಂದುವರಿಯಿರಿ: ಕೃತಿಕಾರಾಣಿ ಯಲ್ಲಾಪುರ

 



ಉಜಿರೆ: ವಿದ್ಯಾರ್ಥಿಗಳು ಭವಿಷ್ಯದ ಜೀವನದಲ್ಲಿ ತಮ್ಮ ಆದ್ಯತೆ ಏನೆಂಬುದನ್ನು ಅರಿತುಕೊಂಡು ಅದಕ್ಕೆ ಪೂರಕ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ಮುಂದುವರಿಯಬೇಕು ಎಂದು ಉಜಿರೆಯ ಎಸ್.ಡಿ.ಎಂ. ಕಾಲೇಜಿನ ಹಿರಿಯ ವಿದ್ಯಾರ್ಥಿನಿ, ಕಿರುತೆರೆ ಧಾರಾವಾಹಿ ಸಂಭಾಷಣೆ ಬರಹಗಾರ್ತಿ ಕೃತಿಕಾರಾಣಿ ಯಲ್ಲಾಪುರ ಹೇಳಿದರು.


ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ  ಆಯೋಜಿಸಿದ್ದ ಒಂದು ದಿನದ ಅಂತರ್ ತರಗತಿ ಸ್ಪರ್ಧೆ ‘ಇಂಕ್ಸ್ಪೈರ್ 2025 InkSPire 2K25 ಉದ್ಘಾಟಿಸಿ ಅವರು ಮಾತನಾಡಿದರು.


ಪದವಿ ವಿದ್ಯಾರ್ಥಿಗಳಿಗೆ ಆರಂಭದಲ್ಲಿ ಗೊಂದಲಗಳು ಇರುವುದು ಸಾಮಾನ್ಯವಾದರೂ ಸ್ನಾತಕೋತ್ತರ ಅಧ್ಯಯನ ಸಂದರ್ಭದಲ್ಲಿ ಆರಾಮ ವಲಯ (ಕಂಫರ್ಟ್ ಝೋನ್) ಬಿಟ್ಟು ಹೊರಹೋಗುವುದು ಅಗತ್ಯವಾಗುತ್ತದೆ. ಇದೇ ವೇಳೆ, ಮುಂದಿನ ಜೀವನದಲ್ಲಿ ತಮ್ಮ ಗುರಿಯನ್ನು ನಿರ್ಧರಿಸಿಕೊಂಡು ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಬೇಕು ಎಂದು ಅವರು ತಿಳಿಸಿದರು.


“ಕನ್ಫ್ಯೂಷನ್ ನಿಂದ ಕಂಫರ್ಟ್ ಝೋನ್ ಮತ್ತು ಅಲ್ಲಿಂದ ಸಾಧನೆಯ ದಾರಿಗೆ ಹೊರಳುವಾಗ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದರೆ, ವೈಯಕ್ತಿಕ ಬೆಳವಣಿಗೆಗೆ ಅದು ಅಗತ್ಯವಾಗಿರುತ್ತದೆ. ಜೀವನದಲ್ಲಿ ಖುಷಿಯಾಗಿರಲು ನಿಮಗೆ ಏನು ಮುಖ್ಯ ಎಂಬುದನ್ನು ಅರ್ಥ ಮಾಡಿಕೊಳ್ಳಿ. ಆನಂದವೋ, ಖ್ಯಾತಿಯೋ, ಹಣವೋ ಏನು ಆದ್ಯತೆ ಎಂದು ಅರಿತುಕೊಳ್ಳಿ. ಅದಕ್ಕೆ ಬೇಕಾದ ಕೌಶಲ ಅಭಿವೃದ್ಧಿಪಡಿಸಿಕೊಳ್ಳಿ. ಕೌಶಲವನ್ನು ಉದ್ಯೋಗವಾಗಿ ಹೇಗೆ ತೊಡಗಿಸಿಕೊಳ್ಳಬಹುದೆಂದು ಯೋಚಿಸಿ. ಹೊಸತನ್ನು ಕಲಿಯಲು ಪ್ರಯತ್ನಿಸಿ” ಎಂದು ಅವರು ಸಲಹೆ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಬಿ. ಎ. ಕುಮಾರ ಹೆಗ್ಡೆ ಟ್ರೋಫಿ ಅನಾವರಣಗೊಳಿಸಿದರು. ಅವರು ಮಾತನಾಡಿ, ಉತ್ತಮ ಬರವಣಿಗೆ ಅಥವಾ ಸಂವಹನಕ್ಕೆ ಉತ್ತಮ ಜನಾಂಗವನ್ನು ರೂಪಿಸುವ ಶಕ್ತಿಯಿದೆ. ಜನಾಂಗವನ್ನು ಬದಲಾಯಿಸುವ, ಅದರ ಮೇಲೆ ವಿಶಿಷ್ಟ ಪ್ರಭಾವ ಬೀರುವ, ಕುಗ್ಗಿಸುವ ಅಥವಾ ಹಿಗ್ಗಿಸುವ, ಸಕಾರಾತ್ಮಕ, ನಕಾರಾತ್ಮಕ ಪರಿಣಾಮ ಬೀರುವ ಶಕ್ತಿಯೂ ಅದಕ್ಕಿದೆ ಎಂದು ಅಭಿಪ್ರಾಯಪಟ್ಟರು.


“ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಕಂಡುಕೊಂಡು, ಅನಾವರಣಗೊಳಿಸಿ ಅಭಿವೃದ್ಧಿಪಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ನಮ್ಮ ಕಾಲೇಜಿನಲ್ಲಿ ನಿರಂತರವಾಗಿ ವಿದ್ಯಾರ್ಥಿಕೇಂದ್ರಿತ ಚಟುವಟಿಕೆಗಳನ್ನು ಆಯೋಜಿಸಲಾಗುತ್ತಿದೆ. ಇಂತಹ ಕಾರ್ಯಕ್ರಮಗಳನ್ನು ವಿದ್ಯಾರ್ಥಿಗಳು ಒಟ್ಟು ಸೇರಿ ಆಯೋಜಿಸುವಾಗ, ಪಾಲ್ಗೊಳ್ಳುವಾಗ ಮತ್ತು ಪಾಲ್ಗೊಂಡ ನಂತರ ಆತ್ಮಾವಲೋಕನ ಮಾಡಿಕೊಂಡಾಗ ನಿಜ ಜೀವನದ ಸವಾಲುಗಳನ್ನು ಎದುರಿಸಲು ಬೇಕಾದ ಪಾಠಗಳು ಮತ್ತು ಅನುಭವಗಳು ಲಭ್ಯವಾಗುತ್ತವೆ” ಎಂದರು.


ಪ್ರಸ್ತಾವಿಸಿದ ಪತ್ರಿಕೋದ್ಯಮ ವಿಭಾಗ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ, “ಕಾಲೇಜಿನ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಕಡೆಗೂ ಗಮನ ಹರಿಸುವುದು ವಿದ್ಯಾರ್ಥಿ ನೆಲೆಯಲ್ಲಿ ಅಗತ್ಯ. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ, ಕಾರ್ಯಕ್ರಮ ನಿರ್ವಹಣೆಯಂತಹ ಕೌಶಲಗಳ ಅಭಿವೃದ್ಧಿ ಆಗುತ್ತದೆ” ಎಂದರು.


ಪತ್ರಿಕೋದ್ಯಮ ವಿಭಾಗದ ದ್ವಿತೀಯ ವರ್ಷದ ವಿದ್ಯಾರ್ಥಿ ಪ್ರತಿನಿಧಿ ತನುಶ್ರೀ, ಪ್ರಥಮ ವರ್ಷದ ವಿದ್ಯಾರ್ಥಿ ಪ್ರತಿನಿಧಿ ಪವನ್ ಉಪಸ್ಥಿತರಿದ್ದರು. ತೃತೀಯ ವರ್ಷದ ವಿದ್ಯಾರ್ಥಿ ಪ್ರತಿನಿಧಿ ಮಾನಸಾ ಪಿ. ಅಗ್ನಿಹೋತ್ರಿ ವಂದಿಸಿದರು. ವಿದ್ಯಾರ್ಥಿಗಳಾದ ಮನೀಷ್ ಶೆಟ್ಟಿ ಮತ್ತು ಸಿಂಚನ ಕಲ್ಲೂರಾಯ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top