ಲೇಖಾ ಲೋಕ-30: ನಟಸಾರ್ವಭೌಮ ಡಾ॥ ರಾಜ್ ಕುಮಾರ್

Upayuktha
0


ಲನಚಿತ್ರ ಇತಿಹಾಸದಲ್ಲಿ ಮೇರು ನಟನಾಗಿ, ಅಭಿಮಾನಿಗಳಿಂದ ಅಣ್ಣಾವ್ರು ಎಂದು ಸಂಬೋಧಿಸಿ ಕೊಂಡು ಕನ್ನಡ ನಾಡಿನ ಜನಪ್ರಿಯ ನಾಯಕರಲ್ಲಿ ಒಬ್ಬರಾದ ನಟ ಡಾ॥ ರಾಜ್ ಕುಮಾರ್ ನಾಡಿನ ಅನರ್ಘ್ಯ ರತ್ನ. ರಂಗಭೂಮಿ ಮತ್ತು ಚಲನಚಿತ್ರಗಳಲ್ಲಿ ತಮ್ಮದೇ ಆದ ಛಾಪನ್ನು ಬೀರಿದ ಅದ್ಭುತ ನಟ, ಗಾಯಕ. ವರನಟ, ನಟಸಾರ್ವಭೌಮ, ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ ಪಡೆದ ಡಾ. ರಾಜ್ ಕುಮಾರ್ ತಮ್ಮ  ಅದ್ಭುತ ನಟನೆ, ಸುಮಧುರ ಹಾಡುಗಳು, ಸ್ಪಷ್ಟ ಸಂಭಾಷಣೆ, ಹಾವ ಭಾವದಿಂದ ಜನರನ್ನು  ರಂಜಿಸಿ, ದಾಖಲೆಯ ಚಿತ್ರಗಳನ್ನು ನಾಡಿಗೆ ನೀಡಿ ಜನಪ್ರಿಯ ವ್ಯಕ್ತಿಯಾಗಿ ಮೆರೆದ ಮಹನೀಯರು. ಸಾಮಾಜಿಕ, ಚಾರಿತ್ರಿಕ ಪೌರಾಣಿಕ, ಹಾಸ್ಯ, ಬಾಂಡ್ ಶೈಲಿಯ ಚಿತ್ರ, ಯಾವುದೇ ಇರಲಿ, ಸರಾಗವಾಗಿ ಅಭಿನಯಿಸಿ, ಪ್ರೇಕ್ಷಕರ ಮನಸೂರೆಗೊಂಡ ಮಹಾನ್ ಕಲಾವಿದರು.


ಭಾರತೀಯ ಚಿತ್ರರಂಗ ನೂರು ವಷ೯ ಪೂರೈಸಿದ ಸಂಧರ್ಭದಲ್ಲಿ ಪೋಬ್ಸ್ ಪತ್ರಿಕೆಯ ಪ್ರಕಾರ 25 ಅತ್ಯದ್ಭುತ ನಟನೆಗಳ ಪಟ್ಟಿಯಲ್ಲಿ ಇವರು ನಟಿಸಿದ, "ಬಂಗಾರದ ಮನುಷ್ಯ" ಚಿತ್ರದ ನಟನೆಯೂ ಒಂದಾಗಿರುವುದು ವಿಶೇಷ. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಹಂಪಿ ವಿಶ್ವ ವಿದ್ಯಾಲಯದ ನಾಡೋಜ ಪ್ರಶಸ್ತಿ, ಎನ್‌ಟಿಆರ್ ಪ್ರಶಸ್ತಿ ಹಾಗೂ ಅನೇಕ ಪ್ರಶಸ್ತಿಗಳಿಗೆ ಪುರಸೃತರಾದ ಗೌರವಾನ್ವಿತ ನಟ, ಗಾಯಕರು.


ನಟಸಾರ್ವಭೌಮ, ವರನಟ, ಕರ್ನಾಟಕ ರತ್ನ, ಅಣ್ಣಾವ್ರು ಬಿರುದು ಪಡೆದ ಮಹಾನ್ ನಟ. ಪೌರಾಣಿಕ ಚಿತ್ರಗಳಲ್ಲಿ ಇವರ ಅದ್ಭುತ ನಟನೆ, ಗಾಯನ ಅಸಾಮಾನ್ಯ ಅವರ್ಣನೀಯ. ಪ್ರಪ್ರಥಮ ಚಿತ್ರ, ಬೇಡರ ಕಣ್ಣಪ್ಪ ಇವರಿಗೆ ಹೊಸ ಅಧ್ಯಾಯವನ್ನು ತೆರೆಯಲು ಸಹಾಯವಾಯಿತು. ರಂಗಭೂಮಿಯ ನಟನೆ ನೋಡಿ ಗುಬ್ಬಿ ಕಂಪನಿಯವರು ಕೈ ಬೀಸಿ ಕರೆದರು. ಭಕ್ತ ವಿಜಯ, ಹರಿಭಕ್ತ, ಒಹಿಲೇಶ್ವರ, ಭೂ ಕೈಲಾಸ, ಶ್ರೀ ಕೃಷ್ಣ ಗಾರುಡಿ, ಮಂತ್ರಾಲಯ ಮಹಾತ್ಮೆ, ಮಹಿಷಾಸುರ ಮರ್ದಿನಿ, ಶ್ರೀ ಶೈಲ ಮಹಾತ್ಮೆ, ಭಕ್ತ ಕನಕದಾಸ ನವಕೋಟಿ ನಾರಾಯಣ, ಸರ್ವಜ್ಞಮೂರ್ತಿ, ಮಹಾಸತಿ ಅನಸೂಯ, ಗಂಗೆ ಗೌರಿ, ಶ್ರೀನಿವಾಸ ಕಲ್ಯಾಣ ಭಕ್ತ ಪ್ರಹ್ಲಾದ, ಬಬ್ರುವಾಹನ, ಭಕ್ತಕುಂಬಾರ, ಚಾರಿತ್ರಿಕ ಚಿತ್ರಗಳಲ್ಲಿ, ಕಿತ್ತೂರು ಚೆನ್ನಮ್ಮ, ಕವಿರತ್ನ ಕಾಳಿದಾಸ, ರಣಧೀರ ಕಂಠೀರವ, ಮಹಾತ್ಮಾ ಕಬೀರ್, ಸಂತ ತುಕಾರಾಮ, ಭಕ್ತ ಕುಂಬಾರ, ಸತ್ಯ ಹರಿಶ್ಚಂದ್ರ, ಇಮ್ಮಡಿ ಪುಲಿಕೇಶಿ, ಮಯೂರ, ಶ್ರೀ ಕೃಷ್ಣದೇವರಾಯ, ಚಂದ್ರಹಾಸ, ಮಂತಾದವು ಪ್ರದರ್ಶನಗೊಂಡು ದಾಖಲೆ ಗಳಿಸಿದವು.

ಇವರೊಂದಿಗೆ ನರಸಿಂಹರಾಜು, ಬಾಲಕೃಷ್ಣ, ದ್ವಾರಕೀಶ್, ಅಶ್ವಥ್, ತೂಗುದೀಪ ಶ್ರೀನಿವಾಸ್, ಎಂ.ಪಿ ಶಂಕರ್ ಅಭಿನಯಿಸಿದ ಚಿತ್ರಗಳು ಹಲವಾರು. ಸಾಮಾಜಿಕ ಚಿತ್ರದ ಹೆಸರುಗಳು ಅನೇಕ. ರಾಯರ ಸೊಸೆ, ಕಣ್ತೆರದು ನೋಡು, ಭೂದಾನ, ನಂದಾ ದೀಪ, ಗೌರಿ, ಮನ ಮೆಚ್ಚಿದ ಮಡದಿ, ಕಸ್ತೂರಿ ನಿವಾಸ, ಎರಡು ಕನಸು, ಇದೇ ಮಹಾ ಸುದಿನ, ಮಣ್ಣಿನ ಮಗ, ಉಯ್ಯಾಲೆ, ಮೇಯರ್ ಮುತ್ತ,ಣ್ಣ, ಬಿಡುಗಡೆ ಬಂಗಾರದ ಮನುಷ್ಯ, ಸಂಪತ್ತಿಗೆ ಸವಾಲ್, ಸನಾದಿ ಅಪ್ಪಣ್ಣ, ಶಂಕರ್ ಗುರು ಭಾಗ್ಯವಂತರು, ನೀ ನನ್ನ ಗೆಲ್ಲಲಾರೆ, ಚಲಿಸುವ ಮೋಡಗಳು, ಶ್ರಾವಣಬಂತು, ಜೀವನಚೈತ್ರ, ಆಕಸ್ಮಿಕ, ಶಬ್ದವೇದಿ  ಗಂಧದ ಗುಡಿ, ಗುರಿ, ಮಂತಾದವುಗಳು ಜನಮನಸೂರೆಗೊಂಡವು.


ಸುಮಾರು 205 ಚಿತ್ರಗಳಲ್ಲಿ ಅಭಿನಯಿಸಿದ ಮಹಾನ್ ನಟಸಾವ೯ಭೌಮ ಡಾ॥ರಾಜ್ ಕುಮಾರ್ ನಾಡಿಗೆ ದೊರೆತ ಅಪರೂಪದ ನಟ, ಗಾಯಕ. ಗಾಯಕರಾಗಿ, ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಹಾಡಿ, ಪ್ರಸಿದ್ಧರಾದರು. ಅನೇಕ ಕ್ಯಾಸೆಟ್, ಸಿ ಡಿ ಇವರ ಭಕ್ತಿ ಗೀತೆಗಳು, ಚಿತ್ರಗೀತೆಗಳು ಹೊರಬಂದವು. ಅನೇಕ ಕವಿಗಳ ಕವನಗಳನ್ನು ಹಾಡಿನ ರೂಪದಲ್ಲಿ ಹಾಡಿ ಜನ ಮನ ರಂಜಿಸಿದ ಮಹನೀಯರು.     


ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜು (ರಾಜ್ ಕುಮಾರ್) ಮೈಸೂರು ಹತ್ತಿರ ಗಾಜನೂರಿನಲ್ಲಿ ತಾ॥24-4-1929 ರಂದು ಜನಿಸಿದರು. ಗೋಕಾಕ್ ಚಳುವಳಿಯಲ್ಲಿ ನೇತೃತ್ವ ವಹಿಸಿ, ಕನ್ನಡ ಭಾಷೆಗೆ ಒತ್ತು ನೀಡಿ ರಾಜ್ಯಾದ್ಯಂತ ಪ್ರವಾಸ ಮಾಡಿ, ಜನರನ್ನು ಕನ್ನಡ ಅಭಿಯಾನಕ್ಕೆ ಮನಸ್ಸು ಮಾಡಲು ಪ್ರೇರೇಪಿಸಿ, ಕಾರಣರಾದರು. ಇವರ ಪತ್ನಿ ಪಾರ್ವತಮ್ಮ ರಾಜ್ ಕುಮಾರ್ ಅವರು ಮತ್ತು ಪುತ್ರರು ರಾಘವೇಂದ್ರ ರಾಜ್ ಕುಮಾರ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಪೂರ್ಣಿಮಾ, ಲಕ್ಷ್ಮೀ.


ಡಾ॥ ರಾಜ್ ಕುಮಾರ್ ಅವರು ದಂತಚೋರ ವೀರಪ್ಪನಿಂದ ಅಪಹರಣವಾಗಿದ್ದು ಅಭಿಮಾನಿಗಳಿಗೆ ಅತಿ ದುಃಖದ ವಿಷಯವಾಗಿ, 108 ದಿನಗಳ ನಂತರ ಬಿಡುಗಡೆಗೊಂಡರು. ಚಿತ್ರರಂಗದ ದಂತಕ ಥೆಯಾಗಿ, ಚಲನಚಿತ್ರಗಳಲ್ಲಿ ಅದ್ಭುತ ಅಭಿನಯ ನೀಡಿ ಡಾ॥ ರಾಜ್ ಕುಮಾರ್ ಅವರು ತಾ॥ 12-4-2006 ರಂದು ಕನ್ನಡ ನಾಡನ್ನು ಅಗಲಿರಾದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 



Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top