ನಕ್ಸಲ್ ಶರಣಾಗತಿ ವಿಚಾರದಲ್ಲಿ ಸರಕಾರದ ತಪ್ಪು ನಡೆ: ಡಾ. ಭರತ್ ಶೆಟ್ಟಿ ವೈ

Upayuktha
0

ನ್ಯಾಯಾಂಗದ ಮುಂದೆ ಶರಣಾಗಲು ಸೂಚನೆ ನೀಡಬೇಕಿತ್ತು


ಸುರತ್ಕಲ್: ಮಾವೋವಾದಿ ಎಡಚಿಂತನೆ ಮೈಗೂಡಿಸಿಕೊಂಡು ಬಡವರಿಗೆ ನ್ಯಾಯ ಕೊಡುವ ನೆಪ ಹೇಳಿಕೊಂಡು ಕಾನೂನು ಧಿಕ್ಕರಿಸಿ ಕಾಡಿನಲ್ಲಿ ಉಳಿದು ಗೆರಿಲ್ಲಾ ಯುದ್ಧ ನಡೆಸುವ ನಕ್ಸಲರಿಗೆ ತಪ್ಪಿನ ಅರಿವಾಗಿದ್ದರೆ ನ್ಯಾಯಾಂಗದ ಮುಂದೆ ಶರಣಾಗಲು ಸರಕಾರ ಸೂಚಿಸಬೇಕೆ ಹೊರತು ಹಣದ ಆಮಿಷ ಒಡ್ಡಿರುವುದು ತಪ್ಪು ನಿರ್ಧಾರ. ಪೊಲೀಸರು ಸಂಪೂರ್ಣ ನಿರ್ಮೂಲನೆಯತ್ತಾ ಹೆಜ್ಜೆ ಇಡುವಾಗಲೇ ಕಾಂಗ್ರೆಸ್ ಸರಕಾರ ಯಾರದೋ ಒತ್ತಡಕ್ಕೆ ಮಣಿದು 

ನಕ್ಸಲರಿಗೆ ರಾಜಮರ್ಯಾದೆ ನೀಡಲು ಮುಂದಾಗಿದೆ. ಸರಕಾರದ ನಿರ್ಧಾರ ತಪ್ಪು ಸಂದೇಶ ನೀಡುತ್ತಿದೆ ಎಂದು ನಕ್ಸಲ್ ಶರಣಾಗತಿ ವಿಚಾರದಲ್ಲಿ ಶಾಸಕ ಡಾ.ಭರತ್ ಶೆಟ್ಟಿ ವೈ ಹೇಳಿದರು.


ಕಾನೂನು, ನ್ಯಾಯಾಲಯಕ್ಕೆ ಗೌರವ ನೀಡಿ ಶರಣಾಗುವ ಬದಲು ಸರಕಾರಕ್ಕೆ ತಮ್ಮ ಬೆದರಿಕೆಯ ಬೇಡಿಕೆ ಇಟ್ಟು ಅದನ್ನು ಪೂರೈಸಿಕೊಳ್ಳುತ್ತಿದ್ದಾರೆ. ಸರಕಾರ ನೀಡುವ ಶರಣಾಗತಿ ಪ್ಯಾಕೇಜ್ ಭವಿಷ್ಯದಲ್ಲಿ ನಗರದಲ್ಲಿ ಹೊಸ ಆಂದೋಲನ ಉಂಟು ಮಾಡಲು ಬಳಸದಂತೆ ಕಟ್ಟು ನಿಟ್ಟಿನ ಎಚ್ಚರಿಕೆ ವಹಿಸುತ್ತದೆಯೆ? ಎಂಬುದನ್ನು ಪ್ರಶ್ನಿಸಿದರು.


ದೇಶದ ಕಾನೂನಿಗೆ ಗೌರವ ನೀಡಿ ನಿಶ್ಯರ್ತವಾಗಿ ಬಂದು ಶರಣಾಗಿ ಇತರರಂತೆ ಸಾಮಾನ್ಯರಾಗಿ ಜೀವನ ನಡೆಸಲು ಮುಂದಾದಲ್ಲಿ ಮಾನವೀಯ ನೆರವು ನೀಡುವುದರಲ್ಲಿ ತಪ್ಪಿಲ್ಲ. ಆದರೆ ಪ್ರಸ್ತುತ ಸಿದ್ದರಾಮಯ್ಯ ಅವರು ನಕ್ಸಲರ ಎಲ್ಲಾ ಶರತ್ತುಗಳಿಗೆ ಒಪ್ಪಿ ಎಡಚಿಂತನೆಗೆ ಶರಣಾಗಿರುವಂತೆ ಕಾಣುತ್ತಿದೆ. ಬೃಹತ್ ಪ್ಯಾಕೇಜ್ ಪಡೆಯಲು ಇತರ ಕ್ರಿಮಿನಲ್ ಚಟುವಟಿಕೆಗ ನಡೆಸುವ ತಂಡಗಳು ಶರಣಾಗತಿಗೆ ಬೇಡಿಕೆ ಇಡಬಹುದು ಎಂದು ಶಾಸಕ ಡಾ. ಭರತ್ ಶೆಟ್ಟಿ ವೈ ಟೀಕಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top