ಸಮಸ್ತ ಗೋಮಂತಕೀಯ ವೈದಿಕ, ಅರ್ಚಕರು, ಪುರೋಹಿತರ ಸಮ್ಮೇಳನ

Upayuktha
0


ಪಣಜಿ: ಕುಟುಂಬ ರಕ್ಷಣೆ ಹಾಗೂ ಸಮಾಜ ಕಲ್ಯಾಣ ಉದ್ದೇಶದಿಂದ ಧಾರ್ಮಿಕ ಕಾರ್ಯಕ್ರಮಗಳ್ನು ಮಾಡುತ್ತಿರುವ ಸಮಸ್ತ ಗೋಮಂತಕೀಯ ವೈದಿಕ, ಅರ್ಚಕರು, ಪುರೋಹಿತರ ಒಂದು ದಿನದ ಸಮ್ಮೇಳನವನ್ನು ಜನವರಿ 19 ರಂದು ಶ್ರೀ ಸಂಸ್ಥಾನ ಗೌಡಪಾದಾಚಾರ್ಯ ಮಠ ಕವಳೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಆಯೋಜಿಸಲಾಗಿತ್ತು.


ಪರಮಪೂಜ್ಯ ಶ್ರೀ ವಿದ್ಯಾನರಸಿಂಹ ಭಾರತೀ ಸ್ವಾಮೀಜಿ ಕರವೀರ ಪೀಠ ರವರ ದಿವ್ಯ ಸಾನಿಧ್ಯದಲ್ಲಿ ಪುರೋಹಿತ ಬ್ರಾಹ್ಮಣ ಸಂಘ ಮತ್ತು ದ್ರಾವಿಡ ಬ್ರಾಹ್ಮಣ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಈ ಬೃಹತ್ ಸಮ್ಮೇಳನ ಜರುಗಿತು.


ಈ ಸಮ್ಮೇಳನದಂದು. ಗುರುಪೂಜನ, ಪುರೋಹಿತ ಸತ್ಕಾರ ಸಮಾರಂಭ ಜರುಗಿತು. ಗೋವಾದ ವಿವಿದೆಡೆ ನೆಲೆಸಿರುವ ವೈದಿಕರು, ಅರ್ಚಕರು, ಪುರೋಹಿತರು ಈ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.


ಈ ಸಮ್ಮೇಳನದಲ್ಲಿ ವಿವಿಧ ನಿರ್ಣಯಗಳನ್ನು ಸರ್ವಾನುಮತದಿಂದ ಅಂಗೀಕರಿಸಲಾಯಿತು.


1). ಗೋವಾ ಪರಶುರಾಮನ ನಾಡು, ಪರಶುರಾಮನ ಜನ್ಮ ದಿನಾರಣೆಯನ್ನ ಸರ್ಕಾರದ ಮಟ್ಟದಲ್ಲಿ ಸಾರ್ವತ್ರಿಕವಾಗಿ ಆಚರಿಸುವುದು.

2). ಗೋವಿನ ಹೆಸರಿನ ನಂತರ ಗೋಮಂತಕ ಎಂದು ಕರೆಯಲ್ಪಡುವ ಗೋವಿನ ತಳಿಗಳನ್ನು ರಕ್ಷಿಸಲು ಗೋವಿಗೆ ರಾಜ್ಯ ಮಾತಾ ಸ್ಥಾನ ಮಾನ ನೀಡಬೇಕು.

3). ವಿದ್ಯಾರ್ಥಿಗಳಿಗೆ ಮಾತೃಭಾಷೆಯ ಮೂಲಕ ಪ್ರಾಥಮಿಕ ಶಿಕ್ಷಣ ನೀಡಬೇಕು.

4).ದೇವಾಲಯಗಳ ಆವರಣದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಅಡಿಯಲ್ಲಿ ಅಗತ್ಯ ಸೌಲಭ್ಯಗಳನ್ನು ಒದಗಿಸಬೇಕು.

5). ಗೋವಾದ ಅರ್ಚಕರ (ಎಲ್ಲಾ ದೇವಸ್ಥಾನಗಳಲ್ಲಿ) ಹಕ್ಕುಗಳನ್ನು ರಕ್ಷಿಸುವುದು. ಅರ್ಚಕರ ರಕ್ಷಣೆಗೆ ಕಾನೂನು ಜಾರಿಯಾಗಬೇಕು.

6). ಪೋರ್ಚುಗೀಸರು ಕೆಡವಿದ ದೇವಾಲಯಗಳನ್ನು ಪುನಃ ಸ್ಥಾಪಿಸಬೇಕು.

7). ದೇವಾಲಯಗಳ ಹಣವನ್ನು (ಧರ್ಮಕ್ಕಾಗಿ ಭಕ್ತರು ಅರ್ಪಿಸಿದ ಹಣ) ಧರ್ಮ ಪ್ರಚಾರದ ಕೆಲಸಕ್ಕೆ ಬಳಸಬೇಕು. ಇದಕ್ಕಾಗಿ ದೇವಾಲಯಗಳಿಗೆ ಅನುಮತಿ ನೀಡಬೇಕು.


ಈ ಎಲ್ಲಾ ನಿರ್ಣಯಗಳನ್ನು ಸಮ್ಮೇಳನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top