ಉಜಿರೆ ಕಾಲೇಜಿನಿಂದ ವಿದ್ಯುಚ್ಛಕ್ತಿಯ ಸಂರಕ್ಷಣಾ ಕಾರ್ಯಾಗಾರ

Upayuktha
0




ಉಜಿರೆ : ಎಸ್. ಡಿ. ಎಮ್. ಕಾಲೇಜಿನ‌ ಸಾಮಾಜಿಕ ಜವಾಬ್ದಾರಿ ಉಪಕ್ರಮಗಳ ಸಮಿತಿಯಿಂದ‌ ವಿದ್ಯುಚ್ಛಕ್ತಿಯ ಸಂರಕ್ಷಣಾ ಕಾರ್ಯಾಗಾರ ಬೆಳ್ತಂಗಡಿಯ ಚರ್ಚ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಸುಮಾರು ೧೫೦ ವಿದ್ಯಾರ್ಥಿಗಳು ಶಕ್ತಿ ಸಂರಕ್ಷಣೆಯ ಮಹತ್ವವನ್ನು ಅರಿತುಕೊಂಡರು.


ಕಾರ್ಯಕ್ರಮದಲ್ಲಿ ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿಯರಾದ ಪೂರ್ವಿಕ, ಪ್ರಿಯಾಂಕ ಹಾಗೂ ನಯನಾ ವಿದ್ಯಾರ್ಥಿ ಸಮೂಹದೊಂದಿಗೆ ಸಂವಹನ ನಡೆಸಿ ಮಾಹಿತಿ ರವಾನಿಸಿದರು. 


ಶಾಲೆಯ ಶಿಕ್ಷಕಿಯರಾದ  ರೆನ್ನಿ ವಾಸ್ ಹಾಗೂ ಹೆಲೆನ್ ತಾವ್ರೋ ತಮ್ಮ‌ ಪೂರ್ಣ ಸಹಕಾರವನ್ನು ನೀಡಿದರು.


ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಭಿಲಾಷ್ ಕೆ. ಎಸ್. ಇವರು ಸಂಪೂರ್ಣ ಕಾರ್ಯಕ್ರಮವನ್ನು ಸಂಯೋಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


Post a Comment

0 Comments
Post a Comment (0)
Manodvi Motors- Fabulous Feruary offers
Manodvi Motors- Fabulous Feruary offers
To Top