ನಿಟ್ಟೆ: 5ಜಿ ವಯರ್ಲೆಸ್ ನೆಟ್ವರ್ಕ್ ಕುರಿತು ಅಧ್ಯಾಪಕರಿಗೆ ತರಬೇತಿ ಕಾರ್ಯಕ್ರಮ

Upayuktha
0

 



ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗವು ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಸಹಯೋಗದೊಂದಿಗೆ "ಹ್ಯಾಂಡ್-ಆನ್ ಸೆಷನ್ ಆನ್ 5ಜಿ ವಯರ್ಲೆಸ್ ನೆಟ್ವರ್ಕ್ ಯುಸಿಂಗ್ ಎನ್ಎಸ್ 3 ಮತ್ತು ಟೆಟ್ಕೋಸ್ ಟೂಲ್" ಎಂಬ ವಿಷಯದ ಕುರಿತು 5 ದಿನಗಳ ಬೋಧಕ ಅಭಿವೃದ್ಧಿ ಕಾರ್ಯಕ್ರಮವನ್ನು ಇತ್ತೀಚೆಗೆ ಆಯೋಜಿಸಿತ್ತು.


5 ಜಿ ನೆಟ್ವರ್ಕ್ ಸಿಮ್ಯುಲೇಶನ್‌ನ ಪ್ರಾಯೋಗಿಕ ಜ್ಞಾನವನ್ನು ಪಡೆಯಲು, 5 ಜಿ ನೆಟ್ವರ್ಕ್ ಕಾರ್ಯಕ್ಷಮತೆಯನ್ನು ವಿಶ್ಲೇಷಿಸುವಲ್ಲಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಲು ಮತ್ತು 5 ಜಿಯ ಸಂಶೋಧನೆ ಮತ್ತು ನೈಜ-ಪ್ರಪಂಚದ ಅನ್ವಯಿಕೆಗಳನ್ನು ಅನ್ವೇಷಿಸಲು ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.


ಸುರತ್ಕಲ್ ಎನ್ ಐಟಿಕೆ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಮೋಹಿತ್ ಪಿ.ತಹಿಲಿಯಾನಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಿಟ್ಟೆ ತಾಂತ್ರಿಕ ಕಾಲೇಜಿನ ಉಪಪ್ರಾಂಶುಪಾಲ ಮತ್ತು ಡೀನ್ (ಅಕಾಡೆಮಿಕ್ಸ್) ಡಾ.ಐ.ರಮೇಶ್ ಮಿತ್ತಂತಾಯ ಅಧ್ಯಕ್ಷತೆ ವಹಿಸಿದ್ದರು. ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ.ರಾಧಾಕೃಷ್ಣ ಸ್ವಾಗತಿಸಿ, 5 ದಿನಗಳ ಎಫ್ ಡಿಪಿಯ ಒಳನೋಟವನ್ನು ನೀಡಿದರು.


ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹಪ್ರಾಧ್ಯಾಪಕ ಡಾ.ಆಶಿಶ್ ಸಿಂಗ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ ವೈಷ್ಣವಿ ಭಟ್ ವಂದಿಸಿದರು. 7 ನೇ ಸೆಮಿಸ್ಟರ್ ವಿದ್ಯಾರ್ಥಿನಿ ದೀಪ್ತಿ ಕಾರ್ಯಕ್ರಮ ನಿರೂಪಿಸಿದರು.


ಎಫ್ ಡಿಪಿಯನ್ನು ಸಹಪ್ರಾಧ್ಯಾಪಕ ಡಾ.ಆಶಿಶ್ ಸಿಂಗ್, ಸಹಾಯಕ ಪ್ರಾಧ್ಯಾಪಕ ಮಂಜುನಾಥ ಎ.ಎಸ್ ಮತ್ತು ಶ್ರೀನಿವಾಸ ಸಂಯೋಜಿಸಿದರು. ಫ್ಯಾಕಲ್ಟಿ ಡೆವಲಪ್ಮೆಂಟ್ ಪ್ರೋಗ್ರಾಂಗೆ ಒಟ್ಟು 51 ಮಂದಿ ನೋಂದಾಯಿಸಿದ್ದರು.


ಎಫ್ ಡಿಪಿಯ ಮೊದಲ ದಿನದಂದು, ಡಾ. ಮೋಹಿತ್ ಪಿ. ತಹಿಲಿಯಾನಿ ಮಾದರಿ ಕೋಡ್ ಗಳ ಮೂಲಕ ನೆಟ್ ವರ್ಕ್ ಸಿಮ್ಯುಲೇಶನ್ 3 ಗೆ ಪರಿಚಯಿಸಿದರು. ಎಫ್ ಡಿಪಿಯ ಎರಡನೇ ದಿನವನ್ನು ಟೆಟ್ಕೋಸ್ ನ ಹಿರಿಯ ಗ್ರಾಹಕ ಎಂಜಿನಿಯರ್ ವಿಶಾಲ್ ಭಟ್ ನಡೆಸಿಕೊಟ್ಟರು. ಅವರು ನೆಟ್ಸಿಮ್ ಉಪಕರಣದ ಸಂಪೂರ್ಣ ಒಳನೋಟವನ್ನು ನೀಡಿದರು ಮತ್ತು ನೆಟ್ವರ್ಕ್ ವಿನ್ಯಾಸಗಳಲ್ಲಿ ಸಾಧನವನ್ನು ಹೇಗೆ ಬಳಸಬಹುದು ಎಂಬುದನ್ನು ವಿವರಿಸಿದರು.

ಎಫ್ ಡಿಪಿಯ ಮೂರನೇ ಮತ್ತು ನಾಲ್ಕನೇ ದಿನವನ್ನು ವೆಲ್ಲೂರಿನ ವಿಐಟಿಯ ಪ್ರಾಧ್ಯಾಪಕ ಡಾ.ಪ್ರದೀಪ್ ಕುಮಾರ್ ನಡೆಸಿದರು. ಅವರು ಎನ್ಎಸ್ 3 ನೆಟ್ವರ್ಕ್ ಆರ್ಕಿಟೆಕ್ಚರ್, 5 ಜಿ ನೆಟ್ವರ್ಕ್ ಮತ್ತು 6 ಜಿ ನೆಟ್ವರ್ಕ್ ವಿನ್ಯಾಸಗಳನ್ನು ಪ್ರಾತ್ಯಕ್ಷಿಕೆಯೊಂದಿಗೆ ವಿವರಿಸಿದರು.


ಕೊನೆಯ ದಿನದ ಅಧಿವೇಶನವನ್ನು ಬೆಂಗಳೂರಿನ ಸಾಸ್ಕೆನ್ ಟೆಕ್ನಾಲಜೀಸ್ ನ ಗುರುರಾಜ್ ರಾವ್ ಅವರು ನಡೆಸಿಕೊಟ್ಟರು. ನೆಟ್ವರ್ಕ್ ಸಿಮ್ಯುಲೇಶನ್ಗಾಗಿ ಬಳಸಬಹುದಾದ ಎಸ್ಎಸ್ಆರ್ ಆರ್.ಎ.ಎನ್ ಉಪಕರಣಗಳ ಬಗ್ಗೆ ಅವರು ವಿವರಿಸಿದರು. ಕಂಪ್ಯೂಟರ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜ್ಯೋತಿ ಪ್ರಸಾದ್ ಸಮಾರೋಪ ಕಾರ್ಯಕ್ರಮವನ್ನು ಸಂಯೋಜಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top