'ಕರಿಯಾ ಐ ಲವ್ ಯೂ ಕರುನಾಡು ನೀನಾದೆ.......
ಅಂತ ಡುಮ್ಯಾ ಹಾಡ್ಕೊಂತ ಬಂದ
'ಯಾಕಲೇ ಡುಮ್ಯಾ ಕರಿಯಾನ್ನ ಈಗ ನೆನಸಾಕಂತಿದಿ? ಕ್ಯಾ ಹೈ ಬಾತ್?' ಕೇಳಿದ ಬಾಶಾ
'ಬಾತನೂ ಇಲ್ಲಾ ಬಿರ್ಯಾನಿನೂ ಇಲ್ಲ, ಎಲ್ಲಾ ಖತಂ!' ಎಂದ ಧಡಂಧುಡಕಿ
'ಯಾಕ ಏನಾತು?' ಕೇಳಿದಳು ರಾಣಿ
'ಕರಿಯಾನೂ ಹೋದಾ, ಬಿಳಿಯಾ ಅದೇ ಅಮೀರ ಅಂವಾ ಹಾಸನದಾಗ ಟಗರು ಕುಣಸಾಕ ಹೊಂಟ ಹೋದ!' ಎಂದು ನಕ್ಕ ಗಾಳ್ಯಾ
'ಇಂವಾ ಯಾವಲೇ ತಮ್ಮಾ, ಗಾಳಿ ಬಿಟ್ರs ಹಾರಿ ಹೋಗಂಗದಾನ?' ಕೇಳ್ದ ಕಾಕಾ
'ಇವನ ಹೆಸರು ಖರೇನೇ ಗಾಳ್ಯಾ ಅಂತ ಅದ ಕಾಕಾ' ಎಂದ ಟುಮ್ಯಾ
'ಏನ ಗಾಳ್ಯಾನೋ ಏನು ಹುಲಿನೋ ಒಂದು ತಿಳಿವಲ್ತು' ಎಂದ ಗುಡುಮ್ಯಾ
'ಈ ಗಾಳ್ಯಾ ಬಿಗ್ ಬಾಸ್ ಕ್ಕ ಹೋಗಿದ್ನೇನೂ?' ಕೇಳಿದ ಕಾಳ್ಯಾ
'ಯಾಕ? ಅಲ್ಲಿಂದ ತಪ್ಪಿಸಕೊಂಡು ಯಾರು ಓಡಿ ಬಂದಾರೇನು?' ಕೇಳಿದ ಟುಮ್ಯಾ
'ಆ ಹನುಮಂತ ಹೇಳಿದಂಗ ನೀ ನನ್ನ ತಲ್ಯಾಗ ಹುಳಾ ಬಿಟ್ಟು ತಣ್ಣಗ ಕುಂತಿದಿ ನೋಡು' ಎಂದ ಕಾಳ್ಯಾ
'ಈ ಹಿಂದುಲಿ ಮತ್ತs ಮರಿಸಿಟ್ಟೂರಪ್ಪನ ಕಾಳಗ ಭಾಳ ಭಾರಿ ನಡದೈತಿ ಕರನಾಟಕದಾಗ' ಎಂದ ಗುಡುಮ್ಯಾ
'ನೋಟೀಸ ಕೊಟ್ರಂತ ಹಿಂದುಲಿಗಿ?' ಕೇಳಿದ ಕಾಕಾ
'ಏ ಈ ನೋಟೀಸ ನಕಲಿ ಅದನೋ ಅಸಲಿ ಅದನೋ ನೋಡಬೇಕು ಅಂತ ಹಿಂದುಲಿ ಅಬ್ಬರಸೇತಿ!' ಎಂದ ಕಾಳ್ಯಾ
'ಯಾಕ ಹಂಗ ಅಂದತಿ ಹಿಂದುಲಿ?' ಕೇಳಿದಳು ರಾಣಿ
'ಏನಿಲ್ಲಾ, ಹಿಂದ್ಕs ಇಂವಾ ಸಿಟ್ಟೂರಪ್ಪಂದು ಸಹಿನೇ ಡುಪ್ಲಿಕೇಟ್ ಮಾಡಿದ್ದ, ಬೇಕಾದ್ರs ಆ ಹರಿತಾ ಇರೋ ಪ್ರಸಾದಗ ಕೇಳ್ರಿ, ಅಂಥಾವ ಈಗ ನಕಲಿ ಮಾಡಿಸಿ ಕೊಟ್ಟಿದ್ನಂದ್ರ? ಅಂತ ಹಿಂದುಲಿ ಕೆರಳೈತಿ' ಎಂದ ಕಾಳ್ಯಾ
'ವಕ್ಖದಿಂದ ಶುರು ಆದ ಇವರ ಆಟಾಟೋಪ ಈಗ ದಿಲ್ಲಿಗಿ ಶಿಪ್ಟ್ ಆಗೇತಿ' ಎಂದ ಕಾಳ್ಯಾ
'ಈ ಮರಿಗೆ ಬಂಡೆ ಇದ್ರs ನಿನ್ನ ಗೆಲುವು ನಾವು ಹಾಕಿದ ಭಿಕ್ಷೆ ಅಂತ ಆವಾಜ್ ಹಾಕಿದ್ದನ್ನೇ, ಈ ಹಿಂದುಲಿ ಗಪ್ಪನೇ ಹಿಡ್ಕೊಂಡೈತಿ' ಎಂದಳು ರಾಶಿ.
'ಈ ಹಿಂದುಲಿ ಜೋಡಿ ಆ ಗೋಕಾಕ ಕರದಂಟು, ಸೊರಬದ ಬಂ ಕುಮಾರ, ಲಿಂಬೆಹಣ್ಣು, ಮೈಸೂರ ಸಿಂಹ...... ಎಲ್ಲಾ ಸೇರ್ಕೊಂಡಾರು' ಎಂದ ಧಡಂಧುಡಕಿ.
'ಎಲ್ಲಾ 'ಅಸಂತೋಸ' ನ ಟೋಳಿ ಕಾಣ್ತತಿ ಇವು' ಕೇಳಿದ ಸ್ಪೀಡ ಬ್ರೇಕರ
'ಆ ಹಾಸನದ ಪ್ರಯೋಗ ಬಂಡೆಗ ಅಪ್ಪಳಿಸೇದ, ಈ ಕಡೆ ಕಮಲ ವಿಲಿವಿಲಿ ಅನ್ನಾಕತೈತಿ' ಎಂದ ಡುಮ್ಯಾ
'ಇವರನೆಲ್ಲಾ ಒಯ್ದು ಥ್ಯಾಡೆ ದಿವ್ಸ ಬಿಗ್ ಬಾಸ್ ಗೆ ಒಯ್ದು ಬಿಡಬೇಕು ನೋಡು, ಅಂದ್ರsಜರಾ ಶುದ್ಧ ಆಕ್ಕಾವು' ಎಂದಳು ರಾಶಿ
' ಅಲ್ಲೇನು ಬಿಗ್ಬಾಸದಾಗ ಅವ್ನು ಮನಗಂಡ ಚೀರಾಡ್ತಾವು, ಹಾರ್ಯಾಡ್ತಾವು, ಲವ್ ಮಾಡ್ತಾವು..... ಅಲ್ಲಿ ಇವರಿಗೆ ಮಸ್ತ ಆಕೈತಿ ತಗಿ ನೀ' ಎಂದ ಡುಮ್ಯಾ
'ಅಲ್ಲಿ ರಾಜನ ಗೆಟ್ಪದಾಗ ಮಂಜು ಅಬ್ಬರಿಸ್ಯಾನು, ಗೌತಮಿ 'ಸತ್ಯ' ಪಾಜಿಟಿವ್ ಗೆಟಪ್, ಶೋಭಾ ಹೈದ್ರಾಬಾದಿಗಿ ರಿಟರ್ನ್, ರಜತನ ಡ್ಯಾನ್ಸ್ ನೋಡಿ ಎಲ್ಲಾರೂ ನಕ್ಕು ನರಳಿ ಹೊರಳಾಡ್ಯಾರು, ಚೈತ್ರಾ ಊಸರವಳ್ಳಿ ಭಾಷಣ, ವಿಕ್ರಮ 'ಗೀತಾ'ಭವ್ಯ ಜಿಲೇಬಿ ಚಾಕ್ಲೇಟ್ ಅಟ್ಯಾಚ್ಮೆಂಟ್, ಮೋಕ್ಷಿತಾ ಫೌಂವ್ ಫೌಂವ್! ಈಗ ಹೊರಗ ಹೋದ ಧರ್ಮ ಅನುಷಾ ಅಮರ ಚಪಾತಿ ಪ್ರೇಮ, ಧನರಾಜ ಹುಲಿ ಟಿಂಟಿಂ, ಹಾಡಿನ ಹನುಮಂತನ ಬೆರಗು......ಎಲ್ಲಾ ನೋಡಿದ್ರs ಭಾಳ ಮಜಾ ಐತಿ ಅಲ್ಲಿ' ಎಂದ ಕಾಳ್ಯಾ
'ಸುದೀಪನೂ ಶನಿವಾರ ಬಂದು ಅಬ್ಬರಿಸಿದ್ದು ನೋಡಿರಿಲ್ಲ?' ಎಂದ ಕಾಕಾ
'ಏ ಖರೇ ಕಿಚ್ಚನ ತಾಳ್ಮೆ ಮೆಚ್ಚಬೇಕು' ಎಂದಳು ರಾಶಿ
'ಅವರ ತಾಯಿ ದವಾಖಾನ್ಯಾಗ ಸಿರಿಯಸ್ ಇದ್ರೂನೂ ಕಿಚ್ಚ ತನ್ನ ಕರ್ತವ್ಯ ಪ್ರಜ್ಞೆ ಮರಿಲಿಲ್ಲ ನೋಡು' ಎಂದಳು ರಾಣಿ
'ಹನುಮಂತ ಹೊಡಿಯುವ ಡೈಲಾಗ್ ಭಾಳ ಭಾರಿ ಇರ್ತಾವು' ಎಂದ ಕಾಕಾ
'ಅಂವಾ ಏನೋ ಮಾರಾಯಾ, ಮೈ ತುಂಬ ಬಂಗಾರ ಹಾಕೊಂಡ ಅಡ್ಯಾಡ್ತಾನಲಾ?' ಕೇಳಿದ ಡುಮ್ಯಾ
'ಏ ಅಂವಾ ಗೋಲ್ಡ್ ಸುರೇಶ, ನಮ್ಮ ಹನ್ಮಂತ ಮಾವಾ ಮಾವಾ ಅಂತ ಕರಿತಾನು ಸುರೀಗಿ' ಎಂದ ಕಾಳ್ಯಾ
'ಅಂವಾ ಬಿಗ್ಬಾಸ್ ಮನಿಗೆ ಮಾವಾ ಆಗ್ಯಾನು!' ಎಂದು ನಕ್ಕ ಕಾಕಾ
'ಅಲ್ಲಿಗಿ ಒಯ್ದ ಈ ನಮ್ಮ 'ಜನಸೇವಕ'ರನ್ನು ಬಿಟ್ರs ಹ್ಯಾಂಗ ಆಕೈತಿ?' ಕೇಳಿದ ಧಡಂಧುಡಕಿ
'ಮತ್ತs ಇಲ್ಲಿ ಹೊರಗ ಡ್ರಾಮಾ ಮಾಡವ್ರು ಯಾರು?' ಕೇಳಿದ ಕಾಳ್ಯಾ
'ಈಗ ಹಿಂದುಲಿ ಯಾವ ಬಿಗ್ಬಾಸ್ನ ಭೆಟ್ಟಿ ಆಗಾಕ ಹೋಗೈತಿ?' ಕೇಳಿದಳು ನಗುತ್ತ ರಾಶಿ
'ನಾ ಅಂಜುವ ಮಗಾನೇ ಅಲ್ಲ ತೆಗಿ, ನಾ ಯಾಕ ಯಾರ್ನ ಭೇಟಿಯಾಗಬೇಕು?' ಅಂತ ಗುಟುರು ಹಾಕೇತಿ ಹಿಂದುಲಿ' ಎಂದ ಸ್ಪೀಡ ಬ್ರೇಕರ್
'ಮತ್ತ ಆ ಕಿಸ್ ಕಿಂಗ್ ಏನೋ ಅಂದೈತಲಾ?' ಕೇಳಿದ ಕಾಳ್ಯಾ
'ಏ ಲಪುಟರಿಗಿ ಎಲ್ಲಾ ನಾ ಉತ್ರಾ ಕೊಡಂಗಿಲ್ಲ' ಅಂತ ಹಿಂಹುಲಿ ಕೈ ಜಾಡಸೇತಿ' ಎಂದ ಡುಮ್ಯಾ
'ಮತ್ತs 'ಭಾಯಿಯೋ ಔರ್ ಬೆಹನೋ 'ಬಿಗ್ ಬಾಸ್ ಸುಮ್ನೆ ಕುಂತಾನಲಾ?' ವ್ಯಂಗವಾಗಿ ಕೇಳಿದ ಗಾಳ್ಯಾ
'ಏ ಆ ಪಿತಾಮಹ ಬಾಂಬೆ ಮಹಾ ಸರ್ಕಾರ ರಚಿಸುದ್ರಾಗ ಬೀಜಿ ಆಗ್ಯಾನು' ಎಂದ ಡುಮ್ಯಾ
'ನಡ್ರಿ ಎಲ್ಲಾರೂ ಒಂದ ಸಿಂಗಲ್ ಚಾ ಕುಡಿದು, ಟಂಟಂ ದಾಗ ಕುಂತು ಬಿಗ್ ಬಾಸ್ ಮನೆಗೆ ಹೋಗಿ ಬಂಡೆ ಬಂಡೆ ಟಗರು ಹಿಂದುಲಿ ಅಂತ ಹಾಡಿ ಬರೋಣ ಬರ್ರಿ' ಅಂತ ಟಕಳು ಎಲ್ಲಾರನೂ ಕಕೊ೯ಂಡ ಹೊಂಟ!
-ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ