ಕರಾಟೆ ಚಾಂಪಿಯನ್‌ಶಿಪ್‌: ಫಿಲೋಮಿನಾ ಪಿಯು ವಿದ್ಯಾರ್ಥಿ ಸೃಧನ ಆಳ್ವಗೆ ಪ್ರಶಸ್ತಿ

Chandrashekhara Kulamarva
0





ಪುತ್ತೂರು: ಇನ್‌ಸ್ಟಿಟ್ಯೂಟ್ ಆಫ್ ಕರಾಟೆ ಮತ್ತು ಅಲೈಡ್ ಆರ್ಟ್ಸ್, ಪುತ್ತೂರು ಇದರ ಆಶ್ರಯದಲ್ಲಿ  ಪುತ್ತೂರಿನ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಇತ್ತೀಚೆಗೆ ನಡೆದ 42ನೇ ಬಿ.ಕೆ.ಐ ರಾಷ್ಟ್ರೀಯ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ  16-18 ವರ್ಷದ ಪುರುಷ ವಿಭಾಗದ ವೈಯಕ್ತಿಕ ಕಟಾ ಮತ್ತು 50+ಕೆ.ಜಿ ವಿಭಾಗದ ವೈಯಕ್ತಿಕ ಕುಮಿಟೆ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಸೃಧನ ಆಳ್ವ ಕೆ. ಅವರು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.

 


ಇವರು ನಾರಾಯಣ ಆಳ್ವ ಕೆ ಮತ್ತು  ಸುಲೋಚನಾ ದಂಪತಿಗಳ ಪುತ್ರ. ನಾರಾಯಣ ಆಚಾರ್ಯ ತರಬೇತಿ ನೀಡುತ್ತಾರೆ. ಪ್ರಾಂಶುಪಾಲರಾದ ರೆ.ಫಾ. ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ದೈಹಿಕ ಶಿಕ್ಷಣ ನಿರ್ದೇಶಕರಾದ ಕಾಲೇಜಿನ  ಡಾ. ಏಲಿಯಾಸ್ ಪಿಂಟೋ ಹಾಗೂ ರಾಜೇಶ್ ಮೂಲ್ಯ ಉಪಸ್ಥಿತರಿದ್ದರು.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 







إرسال تعليق

0 تعليقات
إرسال تعليق (0)
To Top