ಡಾ.ರಂಜನ್ ಪೇಜಾವರ ರವರ ಅನುವಾದಿತ ಕಾದಂಬರಿ ‘ಸ್ವರ್ಗ ನಾ ಕಂಡಂತೆ’ ಲೋಕಾರ್ಪಣೆ

Upayuktha
0




 ಬೆಂಗಳೂರು: ಸ್ನೇಹ ಬುಕ್ ಹೌಸ್ ಪ್ರಕಟಿಸಿರುವ  ಡಾ. ರಂಜನ್ ಪೇಜಾವರ್ ಅವರ ಮೊತ್ತಮೊದಲ ಕಾದಂಬರಿ ʼದ ಹೆವೆನ್ ಆಸ್ ಐ ಸಾʼ ನ ಕನ್ನಡ ಅನುವಾದ ʼಸ್ವರ್ಗ ನಾ ಕಂಡಂತೆʼ,   , ಬೆಂಗಳೂರಿನ ನೃಪತುಂಗ ರಸ್ತೆಯ ʼಮಿಥಿಕ್ ಸೊಸೈಟಿ ಶತಮಾನೋತ್ಸವ ಸಭಾಂಗಣʼದಲ್ಲಿ ನಿಮ್ಹಾನ್ಸ್ ನ ನಿವೃತ್ತ ಹಿರಿಯ ಪ್ರಾಧ್ಯಾಪಕ, ಖ್ಯಾತ ಮನೋವೈದ್ಯ ಹಾಗೂ ಲೇಖಕ ಡಾ.ಸಿ. ಆರ್.ಚಂದ್ರಶೇಖರ್  ಮತ್ತು ʼ ಥಟ್ ಅಂತ ಹೇಳಿʼ ಖ್ಯಾತಿಯ ಸುಪ್ರಸಿದ್ಧ ಕ್ವಿಜ್ ಮಾಸ್ಟರ್, ಟವಿ ನಿರೂಪಕ ಹಾಗೂ ಲೇಖಕ ಡಾ. ನಾ.ಸೋಮೇಶ್ವರರು ಮುಖ್ಯ ಅತಿಥಿಗಳಾಗಿ ಲೋಕಾರ್ಪಣೆಗೊಳಿಸಿದರು.


ಸ್ನೇಹ ಬುಕ್ ಹೌಸ್ ನ ಪ್ರಕಾಶಕ ಪರಶಿವಪ್ಪ ವೇದಿಕೆಯಲ್ಲಿ ಉಪಸ್ಥಿತರಿದ್ದರು . ಟಿವಿ ಮಾಧ್ಯಮಕ್ಕೆ ಚಿರಪರಿಚಿತರಾದ ಖ್ಯಾತ ಉದ್ಯಮಿ, ಬರಹಗಾರ ಹಾಗೂ ಸಮಾಜ ಸಂಘಟಕ ಸುಧಾಕರ ಪೇಜಾವರ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು. 


ಹಲವು ಅಂತರಾಷ್ಟ್ರೀಯ ಮಟ್ಟದ ವ್ಯದ್ಯಕೀಯ ಜರ್ನಲ್ ಗಳಿಗೆ ಪ್ರಬಂಧಗಳನ್ನು ಮತ್ತು ಹಲವು ವೈದ್ಯಕೀಯ ಪಠ್ಯಪುಸ್ತಕಗಳನ್ನು ಬರೆದು ಖ್ಯಾತರಾಗಿರುವ ಮೂಲತಃ ಮಂಗಳೂರು ಮತ್ತು ಪೇಜಾವರದವರಾದ ವಿಶ್ವ ವಿಖ್ಯಾತ ನವಜಾತ ಶಿಶು ತಜ್ಞ ಡಾ.ರಂಜನ್ ಪೇಜಾವರ ಮೊತ್ತಮೊದಲ ಇಂಗ್ಲಿಷ್ ಕಾದಂಬರಿ ʼದ ಹೆವೆನ್ ಆಸ್ ಐ ಸಾʼ . ಕೆಲಕಾಲ ಮರಣಿಸಿ ಸ್ವರ್ಗಕ್ಕೆ ಹೋಗಿ ಅಲ್ಲಿ ತಾನು ಕಂಡ ನಿರೀಕ್ಷಿತ ಮತ್ತು ಅನಿರೀಕ್ಷಿತ ವ್ಯಕ್ತಿಗಳಿಂದ , ಅವರ ಜೀವನಗಾಥೆಯಿಂದ; ಕಥಾನಾಯಕನು ಅಚ್ಚರಿಗೊಳ್ಳುವುದು, ಒಳಿತು ಕೆಡುಕು, ಪಾಪ ಪುಣ್ಯಗಳ ಕುರಿತು ಮಂಥನಕ್ಕೆ ತೊಡಗುವುದು ಈ ಕಾದಂಬರಿಯ ವಸ್ತು. 


ಇಂಗ್ಲಿಷ್ ಹಾಗೂ ಕನ್ನಡದಲ್ಲಿ ತಮ್ಮ ಬ್ಲಾಗ್ ಮತ್ತು ಪತ್ರಿಕೆಗಳಲ್ಲಿ ಬೆಳಕು ಕಂಡ ಬಿಡಿ ಲೇಖನಗಳು, ಕವಿತೆ/ಕಥೆಗಳಿಂದ ನಾಡಿನ ಓದುಗರಿಗೆ ಈಗಾಗಲೇ ಚಿರಪರಿಚಿತರಾಗಿರುವ ಮೂಲತಃ ಕಾಸರಗೋಡಿನವರಾದ ಸತ್ಯಕಾಮ ಶರ್ಮಾ ಅವರು ʼಕನ್ನಡದ್ದೇ ಕೃತಿʼ ಎಂಬಂತೆ ಇದನ್ನು ಅನುವಾದಿಸಿರುತ್ತಾರೆ.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top