ಬ್ರಹ್ಮೋಪದೇಶದಲ್ಲಿ ಚದುರಂಗದಾಟ ಸ್ಪರ್ಧೆ

Upayuktha
0


ಮುಳ್ಳೇರಿಯಾ: ಎಳೆಯ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಚೆಸ್ ಆಸಕ್ತಿ ಮೂಡಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಬದಿಯಡ್ಕದ ಮಾಸ್ಟರ್ ಚೆಸ್ ಅಕಾಡೆಮಿ ಸಂಸ್ಕೃತಿ ಚೆಸ್ ಸ್ಪರ್ಧೆ ಸೀಸನ್ -1ನ್ನು ಆಯೋಜಿಸಿದೆ. ಬಾಲ ಚೆಸ್ ಪ್ರತಿಭೆ ಮಾ. ನೈತಿಕ್ ಕೃಷ್ಣನ ಬ್ರಹ್ಮೋಪದೇಶದ ಅಂಗವಾಗಿ ಡಿಸೆಂಬರ್ 25ರಂದು ಬೆಳ್ಳೂರು ಶ್ರೀ ಮಹಾವಿಷ್ಣು ದೇವಾಲಯದಲ್ಲಿ ಅಪರಾಹ್ನ 2.30ರಿಂದ ಚೆಸ್ ಸ್ಪರ್ಧೆ ಜರಗಲಿದೆ.


ಮಾಸ್ಟರ್ ಚೆಸ್ ಅಕಾಡೆಮಿ ಬದಿಯಡ್ಕ ಪ್ರಮುಖ್ ಪ್ರಶಾಂತ ಎಂ. ಹಾಗೂ ಶಶೀಂದ್ರ ಮವ್ವಾರು ಇವರ ಸಂಘಟನಾ ಸಂಯೋಜನೆಯಂತೆ ಸ್ಪರ್ಧೆ ನಡೆಯಲಿದೆ. ಮಹಾಭಾರತ ಕಾಲದಿಂದಲೇ ಅಖಂಡ ಭಾರತದಲ್ಲಿ ಚೆಸ್ ಎಂಬ ಚದುರಂಗದಾಟ ಜನಪ್ರಿಯವಾಗಿದೆ. ಇದು ಬೌದ್ಧಿಕ ಚಿಂತನ ಶೀಲತೆ ಮತ್ತು ಪ್ರತಿಭೆ ಬಯಸುವ ಆಟವಾಗಿದ್ದು ಎಳೆಯ ಮಕ್ಕಳನ್ನು ಇದರಲ್ಲಿ ತೊಡಗಿಸಿಕೊಂಡರೆ ಅವರ ಕೌಶಲ್ಯಾಭಿವೃದ್ಧಿಯಾಗುತ್ತದೆ.


ಸ್ಪರ್ಧೆಯು ಅಂಡರ್ 9, 12, 15 ವಯೋಮಾನದ ವಿಭಾಗಗಳಲ್ಲಿ ನಡೆಯಲಿದೆ. ಚೆಸ್ ತರಬೇತುದಾರ ಕುಂಞಂಬು ಸಹಕರಿಸುವರು. ಎಲ್ಲಾ ವಯೋಮಾನದ ವಿಜೇತರಿಗೆ ತಲಾ 10 ಪ್ರಶಸ್ತಿ ಫಲಕ (ಟ್ರೋಫಿ) ಹಾಗೂ ಜನರಲ್ ವಿಭಾಗದಲ್ಲಿ ವಿಜೇತ ಮೂವರಿಗೆ ನಗದು ಬಹುಮಾನ ದೊರೆಯಲಿದೆ. ಈ ಸಂಬಂಧ ಹೆಚ್ಚಿನ ಮಾಹಿತಿಗೆ (9995284422, 8590198284) ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top