ಸುಂದರ ಬಾಲ್ಯಗಳು- ಬೇವು ಬೆಲ್ಲದ ಮಿಶ್ರಣ

Upayuktha
1 minute read
0

ಮಕ್ಕಳ ದಿನಾಚರಣೆ ವಿಶೇಷ



ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬವನ್ನು ಆಚರಿಸಿ ನಾವೀಗ ಮಕ್ಕಳ ದಿನಾಚರಣೆಯ ಸಂಭ್ರಮದ ಹೊಸ್ತಿಲಲ್ಲಿ ಇದ್ದೇವೆ. ಮಕ್ಕಳು ಅಂದರೆ ನೆನಪಾಗುವುದೇ ಅರಳುವ ಹೂವುಗಳು ಮತ್ತು ಮಕ್ಕಳನ್ನು ಮುಗ್ಧತೆಯ ನೆನಪಾಗಿ ದೇವರಿಗೆ ಹೋಲಿಸಲಾಗುತ್ತಿದೆ.


ಪ್ರತಿ ವರ್ಷ ನೆಹರೂರವರ ಜಯಂತಿಯನ್ನು ಮಕ್ಕಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಆದರೆ ನಾವೆಷ್ಟು ಮಕ್ಕಳ ಬಗ್ಗೆ ಗಮನ ಹರಿಸುತ್ತಿದ್ದೇವೆ ಎಂಬುದೇ ಪ್ರಶ್ನೆ ಆಗಿದೆ.


ಮಕ್ಕಳಿಗೆ ನಾವೆಷ್ಟು ಸುಂದರ ಬಾಲ್ಯವನ್ನು ಕಲ್ಪಿಸಿ ಕೊಡುತ್ತಿದ್ದೇವೆ? ಚಿಕ್ಕ. ಮಕ್ಕಳನ್ನು ಆಧುನಿಕ ಶಿಕ್ಷಣದ ಹೆಸರಿನಲ್ಲಿ ಬೋರ್ಡಿಂಗ್. ಸ್ಕೂಲಿಗೆ ಹೊತ್ತು ಹಾಕುತ್ತಿದ್ದೇವೆ. ಸ್ಕೂಲ್ ರಜೆ ಇರುವಾಗಲೂ ಫೋನ್ ಮಾಡಿ ಯಾವಾಗ ಸ್ಕೂಲ್ ಶುರು ಆಗುತ್ತದೆ? ಅವರನ್ನು ಕಂಟ್ರೋಲ್ ಮಾಡಲು ಆಗುತ್ತಿಲ್ಲ, ಬೇಗ ಸ್ಕೂಲ್ ಶುರು ಮಾಡಿ ಎಂದು ಅಲವತ್ತು ಕೊಳ್ಳುವ ತಾಯಂದಿರನ್ನು ನೋಡಿದ್ದೇನೆ. ಬಹಳ ಜನ ಪಾಲಕರಿಗೆ ಮಕ್ಕಳೆಂದರೆ ಕೇವಲ ಮಾರ್ಕ್ಸ್ ತೆಗೆಯುವ ಯಂತ್ರ ಆಗಿ ಪರಿಗಣಿಸಿದ್ದಾರೆ.


ಹಿಂದಿನ ಕಾಲದಲ್ಲಿ ಸ್ಕೂಲಿಗೆ ರಜೆ ಆದರೆ ಸಾಕು ಅಜ್ಜನ ಮನೆಗೆ ಹೋಗುತ್ತಿದ್ದ ಕಾಲವಿತ್ತು. ಆದರೆ. ವಿಭಕ್ತ ಕುಟುಂಬದ ಪ್ರಭಾವದಿಂದಾಗಿ ಮಕ್ಕಳು ಬೇಸಿಗೆ ರಜೆಗೆ ಕೋಚಿಂಗ್ ಕ್ಲಾಸ್ ಅಥವಾ ಸಮ್ಮರ್ ಕ್ಯಾಂಪ್ ಗೆ ಅವಲಂಬಿತವಾಗಿವೆ.


ಈಗಿನ ಮಕ್ಕಳಿಗೆ ತಂದೆ ತಾಯಿ ಬಿಟ್ಟು ಉಳಿದವರೆಲ್ಲ ಆಂಟಿ ಅಂಕಲ್‌ಗಳ ಸಂಬಂಧವಾಗಿದೆ. ಸೋದರ ಮಾವ, ಸೋದರತ್ತೆ, ಚಿಕ್ಕಪ್ಪ, ಚಿಕ್ಕಮ್ಮ, ಭಾವ, ಮುಂತಾದ ಸಂಬಂಧಗಳು ಅಪರಿಚಿತವಾಗಿವೆ.


ಮನೆಗೆ ನೆಂಟರಿಷ್ಟರು ಬಂದಾಗ ಕ್ಷೇಮ ಸಮಾಚಾರವನ್ನು ವಿಚಾರಿಸದೆ ಮೊಬೈಲ್ ತೆಗೆದುಕೊಂಡು ರೂಂನಲ್ಲಿ ಕುಳಿತುಕೊಳ್ಳುವ ಮಕ್ಕಳನ್ನು ನೋಡಿದ್ದೇನೆ. ಮಕ್ಕಳು ಹಟ ಮಾಡಿದರೆ ಅವರಿಗೆ ಮೊಬೈಲ್ ಕೊಟ್ಟು ಸಮಾಧಾನ ಪಡಿಸುವ ಎಷ್ಟೋ ತಾಯಂದಿರು ಇದ್ದಾರೆ.


ಅದೇ ರೀತಿ  ಪೇಪರ್ ಹಾಕಿ, ಅಂಗಡಿಗಳಲ್ಲಿ ಪೊಟ್ಟಣ ಕಟ್ಟಿ ಶಾಲೆಗೆ ಬರುವ ಎಷ್ಟೋ ಜನ ಮಕ್ಕಳಿದ್ದಾರೆ.

ಜಪಾನ್‌ನಲ್ಲಿ ಈಗಲೂ ಮಕ್ಕಳು ಕಡ್ಡಾಯವಾಗಿ  ಹಿರಿಯರಿಗೆ ಎದ್ದು ಜಾಗ ಕೊಡುವ ಮೌಲ್ಯಗಳನ್ನು ಕಲಿಸಲಾಗುತ್ತಿದೆ. ಅಮೇರಿಕಾದಲ್ಲಿ ಮಿತಿ ಮೀರಿದ ಸ್ವಚ್ಛಂದ ಸ್ವಭಾವದಿಂದ ಮಕ್ಕಳು ತಲೆ ನೋವಾಗಿದ್ದಾರೆ. ಆದ್ದರಿಂದ ಮಕ್ಕಳಿಗೆ ಸುಂದರ ಬಾಲ್ಯವನ್ನು ಕೊಟ್ಟು ಮುಂದೆ ಉತ್ತಮ ನಾಗರಿಕ ಸಮಾಜವನ್ನೂ ನಿರ್ಮಿಸೋಣ ಮತ್ತು ಸರ್ಕಾರದ ಆಶಯವನ್ನು ಅರಿತು ನಡೆಯೋಣ.


- ಗಾಯತ್ರಿ ಸುಂಕದ, ಬದಾಮಿ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
To Top