ನಮ್ಮ ಭಾಷೆಲಿ ಭೇದ ಇದ್ದರೂ ಹವಿಭಾಷೆ
ಹೆಮ್ಮೆಯೇ ಮೇಳಲ್ಲಿ ಕೇಳೆಕ್ಕದ
ನಮ್ಮವೇ ಗೌರವವ ನೀಡದ್ರೆ ಹೇಂಗಕ್ಕು ?
ತಮ್ಮಣ್ಣ ಹೇಳಿಕ್ಕು ಗೊಂತಕ್ಕದ.
ಕಿಟ್ಟೆಲ್ಲ ° ದೂರಂದ ಬಂದಿಲ್ಲಿ ಕನ್ನಡವ
ಕಟ್ಟಿ ಬೆಳಶಿದ ಕತೆಯ ಕೇಳಿದ್ದಿರೊ ?
ಗಟ್ಟಿ ಮನಸಿನ ಮಾಡಿ ಕಲಿಯೆಕ್ಕು ಹವ್ಯಕವ
ಗಟ್ಟಿಗರೆ ನಾವೆಲ್ಲ ತಿಳ್ಕೊಂಡರೆ ..
ತುಳುವರೂ ಕೊಂಕಣಿಗ ಮಲೆಯಾಳಿ ಅವರದೇ /
ಹಳೆ ಭಾಷೆ ಒಳುಶಿದವು ಬಹು ಚೆಂದಲಿ
ಚಳಿ ಎಂತ ಬೇಡದ್ದು ಹವ್ಯಕಲಿ ಮಾತಾಡ್ಲೆ
ಕಳೆಗಟ್ಟಿ ಕೇಳೆಕ್ಕು ಬೆಂಗ್ಳೂರಿಲಿ .
ಕವಿ ಕಾವ್ಯ ಸಾಹಿತ್ಯ ಬೆಳದೀಗ ಹವ್ಯಕಲಿ
ಕವಿ ಕೂಟ ಇದ್ದಲ್ಲಿ ಬಹು ಚೆಂದವೆ ..
ಹವಿಕರ ಮನೆ ಮಾತು ಲಾಯ್ಕಿದ್ದು ಮಾತಾಡ್ಲೆ
ಹವಿ ಮೇಳ ನಡದಲ್ಲಿ ಸಂತೋಷವೆ..
- ಗುಣಾಜೆ ರಾಮಚಂದ್ರ ಭಟ್
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ