ವಕ್ಫ್ ಆಸ್ತಿ ಸಾಂಕ್ರಾಮಿಕ ವ್ಯಾಧಿ ದಿನ ದಿನವೂ ವಿಸ್ತರಿಸುತ್ತಿದೆ. ಸರ್ ಎಂ ವಿಶ್ವೇಶ್ವರಯ್ಯ ಓದಿದ ಶಾಲೆ ಇದ್ದಕ್ಕಿದ್ದಂತೆ ವಕ್ಫ್ ಆಸ್ತಿ ಆಗಿದೆ. ಮಂಡ್ಯ ಜಿಲ್ಲೆಯ ಕೊಪ್ಪದ ಹಿಂದು ರುದ್ರ ಭೂಮಿ ಈಗ ವಕ್ಫ್ ಆಸ್ತಿ ಆಗಿದೆ!
ಹುಟ್ಟುವ ಆಸ್ಪತ್ರೆ ವಕ್ಫ್ ಆಸ್ತಿ; ಓದುವ ಶಾಲೆ, ಜ್ಞಾನ ಕೇಂದ್ರಗಳು ವಕ್ಫ್ ಆಸ್ತಿ; ಗುರುಕುಲ, ದಾಸೋಹದ ವಿದ್ಯಾರ್ಥಿ ನಿಲಯಗಳು ವಕ್ಫ್ ಆಸ್ತಿ;
ಭಕ್ತಿಯಿಂದ ಪ್ರಾರ್ಥನೆ ಮಾಡಲು ಇರುವ ಮಂದಿರಗಳು ವಕ್ಫ್ ಆಸ್ತಿ; ಮಠಗಳು ವಕ್ಪ್ ಆಸ್ತಿ; ಮುತ್ತಜ್ಜನ ಕಾಲದಿಂದ ಪಿತ್ರಾರ್ಜಿತವಾಗಿ ಬಂದು ಅನ್ನ ಬೆಳೆದುಕೊಳ್ಳುತ್ತಿದ್ದ ಸ್ವಂತ ಭೂಮಿ ವಕ್ಫ್ ಆಸ್ತಿ; ನ್ಯಾಯ ಕೇಳಲು ವಕ್ಫ್ ಆಸ್ತಿಯ ಟ್ರಿಬ್ಯುನಲ್.
ವಿಧಾನ ಸೌಧ, ಪಾರ್ಲಿಮೆಂಟ್ ಭವನ ಎಲ್ಲ ವಕ್ಫ್ ಆಸ್ತಿಯಂತೆ. ಸತ್ತ ಮೇಲೆ ಸುಟ್ಟು ಅಂತ್ಯ ಸಂಸ್ಕಾರ ಮಾಡೋ ರುದ್ರ ಭೂಮಿ, ಹರಿಶ್ಚಂದ್ರ ಘಾಟ್ ಕೂಡ ಈಗ ವಕ್ಫ್ ಆಸ್ತಿ.
ಮುಂದೆ ಹುಟ್ಟಿ, ಬೆಳೆದು, ಕಲಿತು, ಕಲೆತು, ದುಡಿದು, ಮಡಿದು.... ಎಲ್ಲ ಭಾರತಾಂಬೆಯ ಮಡಿಲಿನಲ್ಲಿ ಅಲ್ಲ, ವಕ್ಫ್ ಆಸ್ತಿ ಯ ಚುಚ್ಚುವ ಒರಟು ಕಲ್ಲಿನ ರಾಕ್ಷಸ ಹಸ್ತದ ಮೇಲೆ!!?
ಏನಾಗ್ತಾ ಇದೆ ಈ ಮೇದಿನಿಯಲ್ಲಿ!!!?
- ಅರವಿಂದ ಸಿಗದಾಳ್, ಮೇಲುಕೊಪ್ಪ
9449631248
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


