'ಕುಗ್ರಾಮವನ್ನು ಸುಗ್ರಾಮವಾಗಿಸಿದ ದಿ| ಡಾ ವೈ ಕೆ ಕೇಶವ ಭಟ್'

Upayuktha
0

ಸಂಸ್ಮರಣಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಭಟ್ ಕೆ ನುಡಿನಮನ




ಏತಡ್ಕ: ಕುಗ್ರಾಮವಾಗಿದ್ದ ಏತಡ್ಕವನ್ನು ಸುಗ್ರಾಮವನ್ನಾಗಿಸಿದ ಕೀರ್ತಿ ಡಾ ವೈ ಕೆ ಕೇಶವ ಭಟ್ಟರಿಗೆ ಸಲ್ಲುತ್ತದೆ. ಹತ್ತಿರವೆಲ್ಲೂ ಚಿಕಿತ್ಸಾಲಯಗಳಿಲ್ಲದ ಆ ಕಾಲಘಟ್ಟದಲ್ಲಿ ಏತಡ್ಕ ಪರಿಸರದ ಆಶಾಕಿರಣವಾಗಿದ್ದವರು ಡಾ ವೈ ಕೆ ಕೇಶವ ಭಟ್. ಓರ್ವ ಸಮಾಜ ಸೇವಕನಾಗಿ ಪ್ರತಿಯೊಬ್ಬನಿಗೂ ದಾರಿ ದೀಪವಾದ ವ್ಯಕ್ತಿ ಡಾಕ್ಟರರು ಎಂದು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ಸುಬ್ರಹ್ಮಣ್ಯ ಭಟ್ ಕೆ ಅವರು ಹೇಳಿದರು.


ಅವರು ಕುಂಬಡಾಜೆ ಗ್ರಾಮ ಸೇವಾಸಂಘ ಗ್ರಂಥಾಲಯದ ಆಶ್ರಯದಲ್ಲಿ ಏತಡ್ಕದ ಗಣಪತಿ ನಿಲಯದಲ್ಲಿ ಡಾ. ವೈ ಕೆ ಕೇಶವ ಭಟ್ಟರ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅಭ್ಯಾಗತರಾಗಿ ಆಗಮಿಸಿ ಮಾತನಾಡಿದರು.


ತಮ್ಮ ಈ ಮಟ್ಟದ ಬೆಳವಣಿಗೆಗೆ ಡಾ. ವೈ.ಕೆ ಕೇಶವ ಭಟ್ಟರು ಕಾರಣೀಭೂತರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರಂಥಾಲಯದ ಅಧ್ಯಕ್ಷ ವೈ ಕೆ ಗಣಪತಿ ಭಟ್ ಅಧ್ಯಕ್ಷೀಯ ಮಾತುಗಳನ್ನಾಡಿ ಅಭಿಪ್ರಾಯಪಟ್ಟರು.


ತಮಗೆ ಸಭೆಯ ಮುಂಭಾಗದಲ್ಲಿ ಯಾವ ರೀತಿ ಮಾತನಾಡಬೇಕು ಎಂಬುದನ್ನು ತಿಳಿಸಿಕೊಟ್ಟು ತಮ್ಮನ್ನು ರಾಜಕೀಯದ ಹಾದಿಗೆ ಸೆಳೆದ ಮಹಾನ್ ಚೇತನ ಡಾ ವೈ ಕೆ ಕೇಶವ ಭಟ್. ಡಾಕ್ಟರರು ಬಾಲ್ಯದಿಂದ ಗೃಹಸ್ಥಾಶ್ರಮಕ್ಕೆ ಕಾಲಿಟ್ಟ ಮೇಲೆ ತದನಂತರದ ಜೀವನವನ್ನು ಸಮಾಜಕ್ಕೆ ಬೇಕಾಗಿ ಧಾರೆ ಎರೆದಂತಹ ಮಹಾನ್ ವ್ಯಕ್ತಿ. ಇಂದಿಗೆ ಇಪ್ಪತ್ತೇಳು ವರ್ಷ ಕಳೆದ ಮೇಲೂ ಅವರ ಕುರಿತಾಗಿ ಸಂಸ್ಮರಣೆ ಮಾಡಬೇಕಾದದರೆ ಅವರ ವ್ಯಕ್ತಿತ್ವ ಏನಿತ್ತು ಎಂಬುದು ನಮಗೆ ಮನವರಿಕೆಯಾಗುತ್ತದೆ ಎಂದು ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತಿಯಲ್ಲಿದ್ದ ಕುಂಬಡಾಜೆ ಗ್ರಾಮಪಂಚಾಯತಿ ನಾಲ್ಕನೇ ವಾರ್ಡು ಸದಸ್ಯ ಕೃಷ್ಣ ಶರ್ಮ ಜಿ ಅಭಿಪ್ರಾಯಪಟ್ಟರು. 


ಇದೊಂದು ಉತ್ತಮ ಕಾರ್ಯಕ್ರಮ ಈ ಸಮಾರಂಭದಲ್ಲಿ ಪಾಲ್ಗೊಂಡಾಗ ನನಗೆ ಬಹಳ ಸಂತಸವಾಗಿದೆ. ಏತಡ್ಕ ಎನ್ನುವ ಕುಗ್ರಾಮವನ್ನು ಸುಗ್ರಾಮವನ್ನಾಗಿಸಲು ಡಾಕ್ಟರರಂತಹ ಮಹಾನ್ ವ್ಯಕ್ತಿಗಳು ಕೆಲಸ ಮಾಡಿದ್ದಾರೆ ಎಂಬುದು ಬಹಳ ಸಂತಸದ ವಿಷಯ. ಇಂದಿನ ಹೊಸ ತಲೆಮಾರುಗಳಿಗೆ ಇಂತಹ ವ್ಯಕ್ತಿಗಳನ್ನು ಪರಿಚಯಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ಗ್ರಂಥಾಲಯ ಪಂಚಾಯತ್ ಸಮಿತಿ ಸಂಚಾಲಕ ಅಶ್ರಫ್ ಬೆಳಿಂಜ ಕಾರ್ಯಕ್ರಮಕ್ಕೆ ಆಗಮಿಸಿ ಶುಭಹಾರೈಸಿ ಮಾತನಾಡಿದರು.


ಎಲ್ಲಾ ವಯೋಮಾನದವರೊಂದಿಗೆ ಬಹಳ ಪ್ರೀತಿಯಿಂದ ವರ್ತಿಸುತ್ತಿದ್ದರು ಎಂದು ಸದಾಶಿವ ದೇವಸ್ಥಾನದ ಮೊಕ್ತೇಸರರು ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವೈ ಶ್ಯಾಮ ಭಟ್ ಅಭಿಪ್ರಾಯಪಟ್ಟರು. 


ಇದೇ ಸಂದರ್ಭದಲ್ಲಿ ನರಸಿಂಹ ಭಟ್ ಕಟ್ಟದಮೂಲೆ ಡಾ ವೈ ಕೆ ಕೇಶವಭಟ್ಟರ ಕುರಿತು ರಚಿಸಿದ ಮುಕ್ತಕವನ್ನು ವಾಚಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದವರಲ್ಲಿ ಚಂದ್ರಶೇಖರ ಏತಡ್ಕ, ಡಾ. ಮೋಹನ್ ಕುಮಾರ್, ಸುಬ್ರಹ್ಮಣ್ಯ ವೈ ವಿ., ಮುಂತಾದವರು ಡಾ ವೈ ಕೆ ಕೇಶವ ಭಟ್ಟರ ಕುರಿತು ನುಡಿನಮನ ಸಲ್ಲಿಸಿ ಮಾತನಾಡಿದರು. ಶಶಿಪ್ರಭಾ ವರುಂಬುಡಿ ಪ್ರಾರ್ಥಿಸಿ, ಗ್ರಂಥಾಲಯದ ಕಾರ್ಯದರ್ಶಿ ಗಣರಾಜ ಕೆ ಸ್ವಾಗತಿಸಿ, ಡಾ ವೇಣುಗೋಪಾಲ್ ಕೆ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top