ಬದುಕಿನಲ್ಲಿ ಯಶಸ್ಸು ಸಾಧಿಸಲು ಕೌಶಲ್ಯಾಭಿವೃದ್ದಿ ಅಗತ್ಯ: ಚಿತ್ರಾ ರಾವ್

Upayuktha
0


ಕಾರ್ಕಳ: ಎಂ.ಪಿ.ಎಂ ಸರ್ಕಾರಿ ಪ್ರಥಮ ದರ್ಜೆ ಪ್ರೊಫೆಷನಲ್ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು, ಕಾರ್ಕಳ, ತನ್ನ ವಿದ್ಯಾರ್ಥಿಗಳಿಗೆ ವೃತ್ತಿಜೀವನದಲ್ಲಿ ಅಗತ್ಯವಾದ ಕೌಶಲ್ಯಗಳ ಮಹತ್ವವನ್ನು ಮನವರಿಕೆ ಮಾಡಿಕೊಡುವ ಉದ್ದೇಶದಿಂದ "ವೃತ್ತಿಪರ ಅಭಿವೃದ್ಧಿಯ ಆವಶ್ಯಕತೆಗಳು" ಎಂಬ ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಂಡಿತು.


ಈ ವಿಶೇಷ ಕಾರ್ಯಕ್ರಮದಲ್ಲಿ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಹಾಗೂ ಅಸಿಸ್ಟೆಂಟ್ ಪ್ಯಾರಾಪ್ಲಾನರ್, ಕರಿಸ್ಮಾ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್, ಬೆಂಗಳೂರು, ಮಿಸ್. ಚಿತ್ರಾ ರಾವ್, ಇವರು ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದರು. ಅವರು ತಮ್ಮ ಬೌದ್ಧಿಕ ಭಾಷಣದಲ್ಲಿ ವೃತ್ತಿಪರ ಬದುಕಿನ ಯಶಸ್ಸು ಸಾಧಿಸಲು ಕೌಶಲ್ಯಾಭಿವೃದ್ದಿಯ ಅಗತ್ಯತೆ, ಸಮಯ ನಿರ್ವಹಣೆ, ಮತ್ತು ದೀರ್ಘಕಾಲೀನ ಉದ್ದೇಶಗಳ ಮಾರ್ಗದರ್ಶನದ ಕುರಿತು ವಿವರಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಕಾಲೇಜಿನ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ ಮಾತನಾಡಿ, ವಿದ್ಯಾರ್ಥಿಗಳು ವಿದ್ಯಾರ್ಥಿ ದೆಸೆಯಿಂದಲೇ ಕೌಶಲ ಅಭಿವೃದ್ಧಿಯ ಮಹತ್ವ ಹಾಗೂ ಮುಂದೆ ಬರುವ ಸವಾಲುಗಳನ್ನು ಎದುರಿಸುವ ಧೈರ್ಯವನ್ನು ಮಾಡಿಕೊಳ್ಳಬೇಕೆಂದು ಹೇಳಿದರು. ಡಾ. ಸುಬ್ರಹ್ಮಣ್ಯ ಕೆ.ಸಿ., ಪ್ರೇರಣಾ ಸಂಯೋಜಕರು, ಹಾಗೂ ಮಿಸ್. ಸಂಧ್ಯಾ ಭಂಡಾರಿ, IQAC ಸಹ ಸಂಯೋಜಕ ಡಾ. ಸುದರ್ಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.


ಕಾರ್ಯಕ್ರಮವನ್ನು III BBA ವಿದ್ಯಾರ್ಥಿನಿ ಮಿಸ್. ಪೂರ್ಣಿಮಾ ನಿರೂಪಿಸಿದರು. III B.Com  ವಿದ್ಯಾರ್ಥಿನಿ ಮಿಸ್. ರಕ್ಷಿತಾ ಸ್ವಾಗತ ಭಾಷಣದ ಮೂಲಕ ಕಾರ್ಯಕ್ರಮವನ್ನು ಆರಂಭ ಮಾಡಿದರು.

ಕಾರ್ಯಕ್ರಮದ ಅಂತ್ಯದಲ್ಲಿ, III BBA ವಿದ್ಯಾರ್ಥಿನಿ ಮಿಸ್. ಕ್ರತಿ, ಧನ್ಯವಾದಗಳು ಹೇಳುವ ಮುಖಾಂತರ ಎಲ್ಲರ ಸಹಕಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು.

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top