ಉದಾತ್ತ ಚಿಂತನೆಗಳಿಂದ ಸುಧಾರಣೆ ಪ್ರಖರ: ಡಾ ಡಿ. ವೀರೇಂದ್ರ ಹೆಗ್ಗಡೆ

Upayuktha
0

 ಲಕ್ಷದೀಪೋತ್ಸವ: ಧರ್ಮಸ್ಥಳದಲ್ಲಿ ಪಾದಯಾತ್ರಿ ಸಮಾವೇಶ


ಧರ್ಮಸ್ಥಳ: ಸಂಕುಚಿತ ಮಿತಿಗಳನ್ನು ಮೀರುವುದಕ್ಕೆ ಉದಾತ್ತ ಚಿಂತನೆಗಳು ಸಹಾಯಕವಾಗುತ್ತವೆ. ಆ ಮೂಲಕ ಸಾಮಾಜಿಕ ಸುಧಾರಣೆಯ ಹಾದಿ ಪ್ರಖರವಾಗುತ್ತದೆ ಎಂದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು, ರಾಜ್ಯಸಭಾ ಸದಸ್ಯರಾದ ಡಾ ಡಿ. ವಿರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.


ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಹಿನ್ನೆಲೆಯಲ್ಲಿ ಉಜಿರೆಯ ಶ್ರೀ ಜನಾರ್ಧನ ಸ್ವಾಮಿ ದೇವಾಲಯದಿಂದ ಧರ್ಮಸ್ಥಳದವರೆಗೆ ಆಗಮಿಸಿದ ಪಾದಯಾತ್ರಿಗಳನ್ನು ಅಮೃತವರ್ಷಿಣಿ ಸಭಾಂಗಣದಲ್ಲಿ ಸ್ವಾಗತಿಸುವ ಬೃಹತ್ ಸಮಾವೇಶದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.


ಮನುಷ್ಯನ ಸಂಕುಚಿತತೆ ಸಮಾಜದ ಸಾಮರಸ್ಯ ಹಾಗೂ ಸೌಹಾರ್ದತೆಗಳಿಗೆ ಹಾನಿಯುಂಟು ಮಾಡುತ್ತದೆ. ವಿಶ್ವಮಾನವನಾಗಿ ಹುಟ್ಟುವ ಮನುಷ್ಯ ನಕಾರಾತ್ಮಕ ಶಕ್ತಿಗಳ ಪ್ರಭಾವದಿಂದ ಮುಗ್ದತೆಯನ್ನು ಕಳೆದುಕೊಂಡು ಸಂಕುಚಿತನಾಗಿ ಬಿಡುತ್ತಾನೆ, ಹೃದಯ ವೈಶಾಲ್ಯತೆಯು ಸತ್ಕಾರ್ಯಗಳಿಗೆ ಪ್ರೇರಣೆ ನೀಡುತ್ತದೆ. ಇಂತಹ ಪ್ರೇರಣೆಯ ಬಲದಿಂದ ಹನ್ನೆರೆಡು ವರುಷಗಳ ಹಿಂದೆ ನಾಲ್ಕುನೂರು ಜನರಿಂದ ಪ್ರಾರಂಭವಾದ ಈ ಪಾದಯಾತ್ರೆ ಇಂದು ಹದಿನೈದು ಸಾವಿರ ಪಾದಯಾತ್ರಿಗಳ ಭಕ್ತಿಪೂರ್ವಕ ಭಾಗವಹಿಸುವಿಕೆಗೆ ಕಾರಣವಾಗಿದೆ ಎಂದರು.


ಧರ್ಮ ಮಾರ್ಗದಲ್ಲಿ ನಡೆಯುವವರಿಗೆ ಕೆಡುಕು ಸಂಭವಿಸುವುದು ಅಸಾಧ್ಯ. ಸತ್ಯ ಮತ್ತು ಸನ್ಮಾರ್ಗಗಳೇ ಸದ್ಗತಿಯ ಸಾಧನಗಳಾಗಿರುತ್ತವೆ. ಒಳ್ಳೆಯ ಕಾರ್ಯಗಳನ್ನು ಮಾಡುವ ಮುಖೇನ ಕೆಟ್ಟ ಚಿಂತನೆಗಳನ್ನು ದೂರವಿಡಬಹುದು ಎಂದು ಹೇಳಿದರು.                          


ಶ್ರೀ ಕ್ಷೇತ್ರ ಧರ್ಮಸ್ಥಳದ ಚತುರ್ದಾನ ಪದ್ಧತಿ ಯಶಸ್ವಿಯಾಗುವಲ್ಲಿ ಆಡಳಿತ ಮಂಡಳಿ ಹಾಗೂ ಭಕ್ತಾದಿಗಳ ಸಹಕಾರವನ್ನು ಸ್ಮರಿಸಿದರು.


ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಸಿಂಹ ನಾಯಕ್ ಮಾತನಾಡಿದರು. ಲಕ್ಷದೀಪೋತ್ಸವದ ಆಚರಣೆಯ ಹಿಂದಿನ ಭಾವವೇ ಕತ್ತಲೆಯನ್ನು ತೊಲಗಿಸುವುದು. ಮನದ ಅಜ್ಞಾನವನ್ನು ಅಳಿಸುವ ಕಾರ್ಯ ಆಧ್ಯಾತ್ಮವನ್ನು ಆರಾಧಿಸುವುದರಿಂದ ಜರುಗುತ್ತದೆ. ದೇವರನ್ನು ಆರಾಧಿಸುವುದರಿಂದ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಸಿಗುತ್ತದೆ. ಇಂಥಹ ಒಗ್ಗಟ್ಟಿನ ಮತ್ತು ಸೌಹಾರ್ದತೆಯ  ನಡೆಗಳು ಅಂಥ ಶಕ್ತಿಯನ್ನು ಮನಗಾಣಿಸುತ್ತವೆ ಎಂದರು.


ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜ ಮಾತನಾಡಿ, ಧರ್ಮಸ್ಥಳವೆಂಬ ಪುಣ್ಯಕ್ಷೇತ್ರ ನಮ್ಮ ತಾಲೂಕಿನಲ್ಲಿರುವುದು ಒಂದು ಹೆಮ್ಮೆಯ ಸಂಗತಿಯಾಗಿದೆ ಎಂದರು. 


ಕಾರ್ಯಕ್ರಮದಲ್ಲಿ ಮಾತೋಶ್ರೀ ಹೇಮಾವತಿ ಹೆಗ್ಗಡೆ ಮತ್ತು ಉಜಿರೆಯ ಶ್ರೀ ಜನಾರ್ದನ ಸ್ವಾಮಿ ದೇವಾಲಯದ ಆನುವಂಶಿಕ ಮುಖ್ಯಸ್ಥ ಶರತ್‌ಕೃಷ್ಣ ಪಡುವೆಟ್ನಾಯ ಉಪಸ್ಥಿತರಿದ್ದರು.


ರೋಟರಿ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಧನಂಜಯ್ ರಾವ್ ಸ್ವಾಗತಿಸಿದರು.



 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter   

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top