ವಿಕಲಾಂಗರು ಸಹಜ ಜೀವನ ನಡೆಸಲು ಸಾಧ್ಯವಾದರೆ ಸಂತೃಪ್ತಿ
ಪಣಂಬೂರು: ಅನೇಕ ಜನರು ಕೆಲವೊಂದು ಅವಘಡ, ಗ್ಯಾಂಗ್ರಿನ್ ಮತ್ತಿತರ ವಿಚಾರಗಳಿಗೆ ಕಾಲು ಕಳೆದುಕೊಂಡ ಅನಿವಾರ್ಯ ಸ್ಥಿತಿಗಳಲ್ಲಿ ಕೃತಕ ಅವಯವದ ಜೋಡಣೆಯಿಂದ ತಕ್ಕಮಟ್ಟಿಗೆ ಸಹಜ ಜೀವನ ನಡೆಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಎಂಸಿಎಫ್ ಎಸ್ಆರ್ ಸಹಕಾರದಲ್ಲಿ ಕೃತಕ ಅಂಗಾಂಗ ಜೋಡಣೆ ಸಲಕರಣೆ ನೀಡುತ್ತಾ ಬರುತ್ತಿರುವುದು ನಮಗೂ ಸಂತೃಪ್ತಿ ತರುವ ಕರ್ತವ್ಯ ಎಂದು ತಿಳಿದಿದ್ದೇನೆ ಎಂದು ಶಾಸಕ ಡಾ.ಭರತ್ ಶೆಟ್ಟಿ ವೈ ನುಡಿದರು.
ಶನಿವಾರ ಎಂಸಿಎಫ್ ಸಂಸ್ಥೆಯಲ್ಲಿ ನಡೆದ ಕೃತಕ ಅಂಗಾಂಗ ಜೋಡಣೆ ಸಲಕರಣೆ ವಿತರಿಸಿ ಮಾತನಾಡಿದರು. ಸಾಮಾಜಿಕ ಜವಾಬ್ದಾರಿ ಹಣಕಾಸಿನಡಿ ಕ್ಲಾಸ್ ರೂಂ ನವೀಕರಣ, ಅಂಗನವಾಡಿ ಕೇಂದ್ರದ ನವೀಕರಣ, ಟ್ರಾಲಿ, ವಿತರಣೆ ಸಹಿತ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಈ ಸಂದರ್ಭ ಕೃತಜ್ಞತೆ ಅರ್ಪಿಸುವುದಾಗಿ ಶಾಸಕರು ನುಡಿದರು.
ಎಂಸಿಎಫ್ನ ಸಿಇಒ ಆಗಿರುವ ನಿತಿನ್ ಎಂ. ಕಾಂಟಕ್ ಅವರು ಮಾತನಾಡಿ, ಸಿಎಸ್ಆರ್ ನಿಧಿಯಡಿ ಈ ಒಂದು ಕಾರ್ಯಕ್ರಮ ನನಗೆ ವೈಯುಕ್ತಿಕವಾಗಿ ಸಂತಸವನ್ನು ನೀಡಿದೆ. ಸಾರ್ವಜನಿಕರಿಗೆ ಅನುಕೂಲವಾಗುವ ಯೋಜನೆ ಜಾರಿಗೆ ಮುಂದೆಯೂ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು. ಮೇಯರ್ ಮನೋಚ್ ಕುಮಾರ್, ಮನಪಾ ಸದಸ್ಯ ಅನಿಲ್ ಕುಮಾರ್ ಅವರು ಸಂಸ್ಥೆಯ ಮಾನವೀಯ ಕರ್ತವ್ಯವನ್ನು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ಎಂಸಿಎಫ್ ಉತ್ಪಾದನಾ ವಿಭಾಗದ ಮುಖ್ಯಸ್ಥಗಿರೀಶ್ ಎಸ್. ಅವರು ಸಿಎಸ್ಆರ್ ಯೋಜನೆಯ ಕುರಿತಂತೆ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮನಪಾ ಸದಸ್ಯೆ ಸುಮಂಗಳ ರಾವ್ ಉಪಸ್ಥಿತರಿದ್ದರು. ಡಾ.ಯೋಗೀಶ್ ನಿರೂಪಿಸಿ, ಚೇತನ್ ಮೆಂಡೋನ್ಸ ವಂದಿಸಿದರು. ಎಂಸಿಎಫ್ ಅಧಿಕಾರಿಗಳು,ರೋಟರಿ ಇನ್ನರ್ ವೀಲ್ ಪದಾಧಿಕಾರಿಗಳು ಭಾಗವಹಿಸಿದ್ದರು.
11 ಮಂದಿಗೆ ಕೃತಕ ಕಾಲು ಜೋಡಣೆ, 3 ಮಂದಿಗೆ ಶ್ರವಣ ಸಾಧನ ವಿತರಣೆ, ಸೆಂಟ್ರಲ್, ಜಂಕ್ಷನ್ ರೈಲು ನಿಲ್ದಾಣಕ್ಕೆ ವೀಲ್ಚೇರ್, ಕೂಳೂರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಟ್ರಾಲಿ, ಯಂತ್ರ ಕೊಡುಗೆ, ಸೇವಾ ಭಾರತಿಗೆ ಸಂಸ್ಥೆಗೆ ಫಿಸಿಯೋಥೆರೆಪಿ ಸಾಧನ ವಿತರಣೆ ಮಾಡಲಾಯಿತು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ