ಬಿಸಿಲಿನ ಧಗೆ ಏರುತ್ತಿದ್ದಂತೆ ಕುಡಿಯುವ ನೀರಿನ ಕ್ಷಾಮವೂ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಕುಡಿಯುವ ನೀರಿಗಾಗಿ ಪರದಾಡುವ ಜನರು ಅಡ್ಡ ಕೊಳವೆ ಬಾವಿ, ಕೊಳವೆ ಬಾವಿ ಮುಂತಾದ ಅಂತರ್ಜಲ ಮಟ್ಟದ ಮೊರೆ ಹೋಗಬೇಕಾದ ಸ್ಥಿತಿ ಬಂದೊದಗಿದೆ. ಕೃಷಿಕರಿಗೆ ತಮ್ಮ ತೋಟದುಳಿವಿನದ್ದೇ ಚಿಂತೆಯಾಗಿ ಹೋಗಿದೆ. ಅದಕ್ಕಾಗಿ ಅವರು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಸ್ಥಿತಿಯು ಮುಂದುವರಿದುದೇ ಆದಲ್ಲಿ ಕುಡಿಯುವ ನೀರಿಗಾಗಿ ಬಿಸಿಲಿನ ಧಗೆ ಏರುತ್ತಿದ್ದಂತೆ ಕುಡಿಯುವ ನೀರಿನ ಕ್ಷಾಮವೂ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಕುಡಿಯುವ ನೀರಿಗಾಗಿ ಪರದಾಡುವ ಜನರು ಅಡ್ಡ ಕೊಳವೆ ಬಾವಿ, ಕೊಳವೆ ಬಾವಿ ಮುಂತಾದ ಅಂತರ್ಜಲ ಮಟ್ಟದ ಮೊರೆ ಹೋಗಬೇಕಾದ ಸ್ಥಿತಿ ಬಂದೊದಗಿದೆ. ಕೃಷಿಕರಿಗೆ ತಮ್ಮ ತೋಟದುಳಿವಿನದ್ದೇ ಚಿಂತೆಯಾಗಿ ಹೋಗಿದೆ. ಅದಕ್ಕಾಗಿ ಅವರು ಭಗೀರಥ ಪ್ರಯತ್ನ ಮಾಡುತ್ತಿದ್ದಾರೆ. ಇದೇ ಸ್ಥಿತಿಯು ಮುಂದುವರಿದುದೇ ಆದಲ್ಲಿ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ಬರಬಹುದೆಂಬ ಆತಂಕವು ಜನರಲ್ಲಿ ಮೂಡಿದೆ.
ಕೃಷಿಗೆ ಬೇಕಾದ ನೀರಾವರಿ ಸರಿಯಾಗಿ ಲಭಿಸದೆ ಕೃಷಿಕರು ಪರದಾಡುತ್ತಿದ್ದಾರೆ. ಈ ಹಿಂದೆ ನಡೆದ ವಿಶ್ವ ಯುದ್ದವು ಬ್ರಿಟಿಷರ ವಿರುದ್ಧವಾದರೆ ಇನ್ನು ಮುಂದೆ ವಿಶ್ವಯುದ್ಧ ನಡೆಯುವುದಿದ್ದರೆ ಅದು ನೀರಿಗಾಗಿಯೇ ಎಂದು ಜಲತಜ್ಞರು ಹೇಳಿದ್ದಾರೆ. ಇಸ್ರೇಲ್ ದೇಶದ ನೀರಿನ ಸದ್ಭಳಕೆಯು ನಮ್ಮ ಭಾರತ ದೇಶಕ್ಕೂ ಮಾದರಿಯಾಗಬೇಕು ಅಂದರೆ ಇಸ್ರೇಲ್ನಲ್ಲಿ ಉಪ್ಪು ನೀರನ್ನು ಸಿಹಿ ನೀರಾಗಿ ಪರಿವರ್ತಿಸಿ ಸದ್ಬಳಕೆ ಮಾಡಲಾಗುತ್ತದೆ. ಇಲ್ಲಿ ಒಂದು ಲೀಟರ್ ನೀರನ್ನು ಪುನಃ ಬಳಕೆ ಮಾಡಲಾಗುತ್ತದೆ. ಈ ರೀತಿ ನೀರನ್ನು ಬಳಕೆ ಮಾಡಿದ ಈ ದೇಶದಲ್ಲಿ ಅವರಿಗೆ ಉತ್ತೇಜಕ ಬಹುಮಾನವನ್ನು ನೀಡಲಾಗುತ್ತದೆ. ಈ ರೀತಿ ನೀರನ್ನು ಬಳಕೆ ಮಾಡಿದ ಇಸ್ರೇಲ್ ದೇಶದ ಜನರಿಗೆ ಕೇವಲ 15% ನೀರು ಮಾತ್ರ ಅವರಿಗೆ ನಷ್ಟವಾಗಿ ಉಳಿದ ನೀರು ಅವರಿಗೆ ಸದ್ಬಳಕೆಯಾಗುತ್ತದೆ. ಎಂದು ತಿಳಿದ ತಜ್ಞರು ಹೇಳುತ್ತಾರೆ. ನೀರು ಉಪಯೋಗ ಮಾಡುವುದಕ್ಕೆ ಸಾಂಪ್ರದಾಯಿಕ ಕಟ್ಟಗಳು ಮಾದರಿಯಾಗಿದೆ. ಏತಡ್ಕದಲ್ಲಿ ಸಾಮಾನ್ಯ 1 ಕಿಲೋ ಮೀಟರ್ ದೂರದಲ್ಲಿ ಹತ್ತು ಕಟ್ಟಗಳಿವೆ.
ಕಟ್ಟಗಳು ಎಂದರೇನು?
ಕಟ್ಟಗಳು ಎಂದರೆ ನೀರಿನ ಸಂರಕ್ಷಣೆಗಾಗಿ ಊರಿನ ಕೃಷಿಕರು ಮಾಡಿಕೊಂಡ ಒಂದು ನೀರಿನ ಮೂಲವೇ ಕಟ್ಟ ಏತಡ್ಕವನ್ನು ಕಟ್ಟಗಳ ತವರೂರು ಎಂದು ಕರೆಯಲಾಗುತ್ತದೆ. ಕಟ್ಟಗಳ ಕುರಿತಾದ ಹಲವಾರು ಸಾಕ್ಷ್ಯಚಿತ್ರಗಳನ್ನು ಏತಡ್ಕದಲ್ಲಿ ಮಾಡಲಾಗಿದೆ. ಕಟ್ಟಗಳ ನೀರು ಕೃಷಿಕರ ಜೀವಾಳವಾಗಿದೆ. ಕಟ್ಟಗಳ ನೀರು ಕೃಷಿಕರಿಗೆ ಬಹಳ ಪ್ರಯೋಜನಕಾರಿಯಾಗಿದೆ.
ನೀರಿನ ಸಂರಕ್ಷಣೆ ಏಕೆ ಬೇಕು?
ನೀರಿನ ಮಾಲಿನ್ಯವನ್ನು ತಡೆಗಟ್ಟುವ ಕಡೆ ನಾವೆಲ್ಲರೂ ಗಮನ ಹರಿಸಬೇಕು ಇಲ್ಲವಾದಲ್ಲಿ ಈ ಉರಿಬಿಸಿಲಿಗೆ ಭುವಿಯ ಜೀವಜಂತುಗಳು ಬದುಕುಳಿಯುವುದು ಕಷ್ಟ ಸಾಧ್ಯ. ನೀರಿನ ಅಭಾವವನ್ನು ತಡೆಗಟ್ಟಲು ಇರುವ ಒಂದೇ ಒಂದು ಮಾರ್ಗ ಎಂದರೆ ನೀರಿನ ಸಂರಕ್ಷಣೆ. ಲಭ್ಯವಿರುವ ಜಲವನ್ನು ಜಾಗರೂಕತೆಯಿಂದ ಮತ್ತು ಮಿತವ್ಯಯದಿಂದ ಉಪಯೋಗ ಮಾಡುವುದರ ಮೂಲಕ ಮುಂದಿನ ಪೀಳಿಗೆಗೆ ನೀರನ್ನು ಉಳಿಸುವುದೇ ನೀರಿನ ಸಂರಕ್ಷಣೆ.
ನೀರಿನ ಸದ್ಬಳಕೆ ಹೇಗೆ?
ಇತ್ತೀಚೆಗೆ ಪ್ರಪಂಚದಾದ್ಯಂತ ತೀವ್ರ ಚರ್ಚೆಗೊಳಗಾಗುತ್ತಿರುವ ವಿಷಯದಲ್ಲಿ ನೀರಿನ ಸಂರಕ್ಷಣೆಯೂ ಒಂದು. ಐದು ದಶಕಗಳ ಹಿಂದೆ ನೀರಿನ ಬಗ್ಗೆ ಯಾರೂ ಇಷ್ಟೊಂದು ತಲೆಕೆಡಿಸಿಕೊಂಡಿರಲಿಲ್ಲ. ಆಗೆಲ್ಲಾ ಕಾಲಕಾಲಕ್ಕೆ ಸರಿಯಾಗಿ ಮಳೆಯಾಗುತ್ತಿದ್ದು ಕೆರೆ ಕಾಲುವೆಗಳು ಭರ್ತಿಯಾಗುತ್ತಿದ್ದವು. ದಶಕಗಳಿಂದೀಚೆಗೆ ಜನಸಂಖ್ಯೆ ಹೆಚ್ಚುತ್ತಾ, ಮಾನವನ ಅಗತ್ಯತೆಗಳಿಗನುಸಾರವಾಗಿ ಕೆರೆ, ಕಾಲುವೆಗಳು ಒತ್ತರಿಸಿಕೊಳ್ಳುತ್ತಾ ಮರೆಯಾಗುತ್ತಿವೆ. ಅತಿ ಔದ್ಯೋಗಿಕರಣದ ಫಲವಾಗಿ ಮಾಲಿನ್ಯವುಂಟಾಗುತ್ತಾ ನದಿಗಳು ಕಲುಷಿತಗೊಳ್ಳುತ್ತಾ ಸಾಗಿದೆ. ಹವಾಮಾನ ವೈಪರೀತ್ಯಗಳಿಂದಾಗಿ ಮಳೆ ಮರೀಚಿಕೆಯಾಗುತ್ತಿದೆ. ಕೆಲವೊಂದು ಕಡೆ ಅತಿವೃಷ್ಟಿಯೂ, ಮತ್ತೆ ಕಲವು ಕಡೆ ಅನಾವೃಷ್ಠಿಯೂ ಆಗಿ ಜೀವ ಸಂಕುಲ ಪರದಾಡುವಂತಾಗಿದೆ. ಒಂದು ಸಮೀಕ್ಷೆಯ ಪ್ರಕಾರ ಭೂಮಿಯ 70% ಭಾಗ ಜಲವೃತವಾಗಿದೆ. ಆದರೆ, ಭೂಮಿಯ ಈ ಭೂಮಿಯ ಮೇಲಿರುವ ನೀರಿನ 97% ನೀರು ಲವಣಗಳಿಂದ ಕೂಡಿ ಬಳಕೆಗೆ ಬಾರದಾಗಿದೆ. ಈ ಲವಣಾಂಶಗಳನ್ನು ನೀರಿನಿಂದ ಬೇರ್ಪಡಿಸಿ ನೀರನ್ನು ಕುಡಿಯಲು ಯೋಗ್ಯಗೊಳಿಸುವ ವಿಧಾನಗಳಿವೆಯಾದರೂ, ಇವೆಲ್ಲಾ ತುಂಬ ತ್ರಾಸದಾಯಕ ಹಾಗೂ ದುಬಾರಿಯಾದ ವಿಧಾನಗಳು.
ಉತ್ತರ ಮತ್ತು ದಕ್ಷಿಣ ಧ್ರುವ ಪ್ರದೇಶಗಳಲ್ಲಿ ಹಿಮರೂಪದಲ್ಲಿರುವ 2% ನೀರು ಕುಡಿಯಲು ಯೋಗ್ಯವಾದುದಾದರೂ, ಜನವಸತಿ ಪ್ರದೇಶಗಳಿಂದ ತುಂಬಾ ದೂರದಲ್ಲಿರುವುದರಿಂದ ಈ ನೀರಿನ ಬಳಕೆ ಅಸಾಧ್ಯ.
ಆಹಾರ ವಿಲ್ಲದೇ ಮನುಜ ಹಲವಾರು ವಾರಗಳು ಬದುಕಿರಬಲ್ಲ. ಆದರೆ ನೀರಿಲ್ಲದೇ ಕೆಲವು ದಿನಗಳೂ ಬದುಕಿರಲಾರ. ಪ್ರತಿದಿನ 6ರಿಂದ 8 ಲೋಟಗಳ ಶುದ್ಧ ಜಲ ಸೇವನೆಯು ಮಾನವನ್ನು ಆರೋಗ್ಯವಾಗಿಡಬಲ್ಲುದು. ನಮ್ಮ ದೇಹದ ಸುಮಾರು 70% ಭಾಗ ನೀರಿನಿಂದ ಕೂಡಿದೆ. ಇಷ್ಟೊಂದು ಪ್ರಮುಖವಾದ ನೀರನ್ನು ಸರಿಯಾಗಿ ಸದ್ಬಳಕೆ ಮಾಡಿ ಸಂರಕ್ಷಿಸುವುದು ನಮ್ಮ ಕರ್ತವ್ಯ. ಬನ್ನಿ ನಾವೆಲ್ಲಾ ಜಲ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮಾದರಿಯಾಗೋಣ.
- ಕಾರ್ತಿಕ್ ಕುಮಾರ್ ಕೆ
ದುರ್ಗಾನಿಲಯ ಕಡೆಕಲ್ಲು, ಏತಡ್ಕ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ