ಬೆಂಗಳೂರು: ಶ್ರೀ ರಾಘವೇಂದ್ರ ಸೇವಾ ಸಮಿತಿಯ ವತಿಯಿಂದ ನವೆಂಬರ್ 11, ಸೋಮವಾರದಂದು 'ಚಿಪ್ಪಗಿರಿಯ ತಪೋಮೂರ್ತಿ' ಶ್ರೀ ವಿಜಯದಾಸರ ಆರಾಧನೆಯ ಪ್ರಯುಕ್ತ ಅಂದು ಬೆಳಗ್ಗೆ ಫಲಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ವಿಜಯ ವಿಠಲ ಭಜನಾ ಮಂಡಳಿಯ ಸದಸ್ಯರಿಂದ ಭಜನೆ, ಮ||ಶಾ||ಸಂ|| ಡಾ|| ವೆಂಕಟನರಸಿಂಹಾಚಾರ್ಯರಿಂದ "ಶ್ರೀ ವಿಜಯದಾಸರ ಮಹಿಮೆಗಳು". ವಿಷಯವಾಗಿ ಧಾರ್ಮಿಕ ಪ್ರವಚನ, ಮಹಾಮಂಗಳಾರತಿ.
"ವಿಜಯರಾಯರ ಭಜಿಸೋ" : ಸಂಜೆ 6-30ಕ್ಕೆ ರೂಪಾ ಪ್ರಭಂಜನ ಮತ್ತು ರಮ್ಯಾ ಸುಧೀರ್ ಇವರಿಂದ "ವಿಜಯರಾಯರ ಭಜಿಸೋ" ಎಂಬ ಶೀರ್ಷಿಕೆಯಲ್ಲಿ ಶ್ರೀ ವಿಜಯದಾಸರು ರಚಿಸಿದ ಕೃತಿಗಳನ್ನೂ ಮತ್ತು ಇತರ ಹರಿದಾಸರುಗಳು ವಿಜಯದಾಸರನ್ನು ಕುರಿತು ರಚಿಸಿರುವ ಕೃತಿಗಳನ್ನೂ ಹಾಡಲಿದ್ದಾರೆ. ಇವರ ಗಾಯನಕ್ಕೆ ಕೀ-ಬೋರ್ಡ್ ವಾದನದಲ್ಲಿ ಅಮಿತ್ ಶರ್ಮಾ ಹಾಗೂ ತಬಲಾ ವಾದನದಲ್ಲಿ ಶ್ರೀನಿವಾಸ್ ಕಾಖಂಡಕಿ ಸಾಥ್ ನೀಡಲಿದ್ದಾರೆಂದು ಶ್ರೀಮಠದ ಗೌರವ ಕಾರ್ಯದರ್ಶಿಗಳಾದ ನರಹರಿ ರಾವ್ ತಿಳಿಸಿದ್ದಾರೆ. ಕಾರ್ಯಕ್ರಮ ನಡೆಯುವ ಸ್ಥಳ : ಶ್ರೀ ರಾಘವೇಂದ್ರ ಸ್ವಾಮಿಗಳ ಮಠ, 6ನೇ ಅಡ್ಡರಸ್ತೆ, ಈಜುಕೊಳದ ಬಡಾವಣೆ, ಸುಧೀಂದ್ರನಗರ, ಮಲ್ಲೇಶ್ವರಂ, ಬೆಂಗಳೂರು-560003
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ