ಅರಿವನ್ನು ಪಸರಿಸುವುದೆ ಧರ್ಮ: ಡಾ ಅರವಿಂದ್ ಪಟೇಲ್

Upayuktha
0





ಬಳ್ಳಾರಿ: 
ಶಿಕ್ಷಕರು ತಾವು ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪಸರಿಸುವುದೇ ಶಿಕ್ಷಕರ ನಿಜವಾದ ಧರ್ಮ. ಜ್ಞಾನವು ಬಚ್ಚಿಟ್ಟುಕೊಂಡರೆ ಕೊಳೆಯುತ್ತದೆ ಹಂಚಿದರೆ ಹೊಳೆಯುತ್ತದೆ, ಹೊಸ ಹೊಸ ವಿಚಾರಗಳಿಗೆ ಶಿಕ್ಷಕರು ಸದಾ ತಮ್ಮನ್ನು ತಾವು ತೆರೆದುಕೊಳ್ಳಬೇಕು ಈ ಹಿನ್ನೆಲೆಯಲ್ಲಿ ಇಂತಹ ತರಬೇತಿ ಕಾರ್ಯಾಗಾರಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವೀ ವಿ ಸಂಘದ ಕಾರ್ಯದರ್ಶಿ ಡಾ ಅರವಿಂದ ಪಟೇಲ್ ಹೇಳಿದರು.

ಅವರು ಬಳ್ಳಾರಿ ನಗರದ ಕೊಟ್ಟೂರು ಸ್ವಾಮಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ವೀರಶೈವ ವಿದ್ಯಾವರ್ಧಕ ಸಂಘ ವತಿಯಿಂದ ಜರುಗಿದ ಎರಡು ದಿನಗಳ ತರಬೇತಿ ಕಾರ್ಯಾಗಾರದ ಮುಕ್ತಾಯ ಸಮಾರಂಭದಲ್ಲಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವೀ ವಿ ಸಂಘದ ಕೋಶಾಧಿಕಾರಿಗಳಾದ  ಬೈಲುವದ್ಧಿಗೇರಿ ಎರ್ರಿಸ್ವಾಮಿ ಇವರು ಮಾತನಾಡುತ್ತಾ ಮಕ್ಕಳನ್ನು ತರಗತಿಯುದ್ದಕ್ಕೂ ಆಸಕ್ತಿಯುತವಾಗಿ ಹಿಡಿದಿಟ್ಟುಕೊಳ್ಳುವುದು ತುಂಬಾ ಕಷ್ಟದ ಕೆಲಸ, ಇಂತಹ ತರಬೇತಿಗಳಿಂದ ವಿದ್ಯಾರ್ಥಿಗಳ ಕಲಿಕೆಯನ್ನು ಅಸಕ್ತಿಕರವಾಗಿ ಮಾಡಬಹುದು ಎಂದು ತಿಳಿಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ವೀ ವಿ ಸಂಘದ ಅಧ್ಯಕ್ಷ ರಾದ ಅಲ್ಲಂ ಗುರುಬಸವರಾಜ್ ಇವರು ಮಾತನಾಡುತ್ತಾ ಈ ತರಬೇತಿ ಕಾರ್ಯಗಾರವನ್ನು ಏರ್ಪಡಿಸಲು ಕಾರಣರಾದ ಕಾರ್ಯದರ್ಶಿಗಳನ್ನು ಹಾಗೂ ಇತರರನ್ನು ನೆನೆಯುತ್ತಾ ಇಲ್ಲಿ ತಾವು ಪಡೆದ ಜ್ಞಾನವನ್ನು ದೈನಂದಿನ ತರಗತಿಯಲ್ಲಿ ಬಳಸಿಕೊಂಡು ವಿದ್ಯಾರ್ಥಿಗಳ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದುಕೊಳ್ಳಿ ಎಂದರು.ಎರಡು ದಿನಗಳ ಕಾಲ ಶಿಕ್ಷಕರಿಗೆ ನಡೆದ ಕಾರ್ಯಾಗಾರ ನಿರಂತರವಾಗಿ ನಡೆಯಲಿದೆ ಎಂದರು. 


ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ  ಹಚ್ಹೊಳ್ಳಿ ಶರಣಗೌಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ, ಎಲ್ ಟಿ ಶೇಖರ್,  ಎಳುಬೆಂಚಿ ರಾಜಶೇಖರ ಗೌಡ್ ಪ್ರಾಚಾರ್ಯರಾದ ಡಾ ಸತೀಶ ಹಿರೇಮಠ್ ಮುಂತಾದವರು ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ ವಿಕ್ರಮ್ ಹಿರೇಮಠ್ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕುಮಾರಿ ಜಗನ್ಮಾತೆ ಇವರು ಪ್ರಾರ್ಥನೆಗೈದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top