ಬಳ್ಳಾರಿ: ಶಿಕ್ಷಕರು ತಾವು ಪಡೆದ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಪಸರಿಸುವುದೇ ಶಿಕ್ಷಕರ ನಿಜವಾದ ಧರ್ಮ. ಜ್ಞಾನವು ಬಚ್ಚಿಟ್ಟುಕೊಂಡರೆ ಕೊಳೆಯುತ್ತದೆ ಹಂಚಿದರೆ ಹೊಳೆಯುತ್ತದೆ, ಹೊಸ ಹೊಸ ವಿಚಾರಗಳಿಗೆ ಶಿಕ್ಷಕರು ಸದಾ ತಮ್ಮನ್ನು ತಾವು ತೆರೆದುಕೊಳ್ಳಬೇಕು ಈ ಹಿನ್ನೆಲೆಯಲ್ಲಿ ಇಂತಹ ತರಬೇತಿ ಕಾರ್ಯಾಗಾರಗಳು ಅತ್ಯಂತ ಪ್ರಮುಖ ಪಾತ್ರ ವಹಿಸುತ್ತವೆ ಎಂದು ವೀ ವಿ ಸಂಘದ ಕಾರ್ಯದರ್ಶಿ ಡಾ ಅರವಿಂದ ಪಟೇಲ್ ಹೇಳಿದರು.
ಕಾರ್ಯಕ್ರಮದಲ್ಲಿ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಹಚ್ಹೊಳ್ಳಿ ಶರಣಗೌಡ, ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಶ್ರೀಮತಿ ಕಾತ್ಯಾಯಿನಿ ಮರಿದೇವಯ್ಯ, ಎಲ್ ಟಿ ಶೇಖರ್, ಎಳುಬೆಂಚಿ ರಾಜಶೇಖರ ಗೌಡ್ ಪ್ರಾಚಾರ್ಯರಾದ ಡಾ ಸತೀಶ ಹಿರೇಮಠ್ ಮುಂತಾದವರು ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕ ಡಾ ವಿಕ್ರಮ್ ಹಿರೇಮಠ್ ಇವರು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಕುಮಾರಿ ಜಗನ್ಮಾತೆ ಇವರು ಪ್ರಾರ್ಥನೆಗೈದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ