ಕೆನರಾ ಕಾಲೇಜು: "ಶಿಕ್ಷಣ ಪಠ್ಯಕ್ರಮದಲ್ಲಿ ಹಿಂದಿ ಭಾಷೆಯ ಸ್ಥಾನ" ವಿಚಾರ ಸಂಕಿರಣ

Upayuktha
0


ಮಂಗಳೂರು: ಕೆನರಾ ಕಾಲೇಜು ಮತ್ತು ಮಂಗಳೂರು ಹಿಂದಿ ಅಧ್ಯಾಪಕ ಸಂಘ ಹಾಗೂ ಬ್ಯಾಂಕ್ ಆಫ್ ಬರೋಡಾದ ಸಹಭಾಗಿತ್ವದಲ್ಲಿ ರಾಜ್ಯ ಶಿಕ್ಷಣ ನೀತಿ 2024-25ನೇ ಸಾಲಿನ ಪ್ರಥಮ ವರ್ಷದ ಬಿಕಾಂ, ಬಿಸಿಎ, ಬಿಬಿಎ ಹಾಗೂ ಬಿಎಸ್‌ಸಿ ಪಠ್ಯಕ್ರಮದ ಒಂದು ದಿನದ ಶೈಕ್ಷಣಿಕ ಕಾರ್ಯಾಗಾರ ಮತ್ತು "ಶಿಕ್ಷಣ ಪಠ್ಯಕ್ರಮದಲ್ಲಿ ಹಿಂದಿ ಭಾಷೆಯ ಸ್ಥಾನ" ಎಂಬ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು. ಬ್ಯಾಂಕ್ ಆಫ್ ಬರೋಡದ ಉಪ ಮಹಾ ಪ್ರಬಂಧಕರಾದ ಅಶ್ವಿನಿ ಕುಮಾರ್ ಅವರು ದೀಪ ಬೆಳಗಿಸಿ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.


ಅವರು, ಹಿಂದಿ ಭಾಷೆಯ ಕೊಡುಗೆ ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಮಾತ್ರವಲ್ಲದೆ ಇನ್ನಿತರ ಕ್ಷೇತ್ರಗಳಲ್ಲಿಯೂ ಇದೆ ಎಂದರು. "ಗುಡ್ ಮಾರ್ನಿಂಗ್ "ಮತ್ತು "ನಮಸ್ಕಾರ" ಶಬ್ದಗಳ ಅರ್ಥಗಳಲ್ಲಿರುವ ವ್ಯತ್ಯಾಸವನ್ನು ಅವರು ವಿವರಿಸಿದರು.


ಮಾತೃ ಭಾಷೆಗಳು ಅಮ್ಮನ ಸ್ಥಾನದಲ್ಲಿದ್ದರೆ ಹಿಂದಿ ಭಾಷೆಯು ಚಿಕ್ಕಮ್ಮನ ಸ್ಥಾನದಲ್ಲಿ ಇದ್ದು ಭಾಷೆಯ ಬಳಕೆಯಿಂದ ಮನುಷ್ಯನ ಸಂಸ್ಕಾರ ಮತ್ತು ಸಂಸ್ಕೃತಿ ತಿಳಿಯುವುದು ಎಂದು ಅವರು ನುಡಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಸಂಚಾಲಕ ಸಿಎ ಜಗನ್ನಾಥ್ ಕಾಮತ್ ಅವರು ಹಿಂದಿ ಭಾಷೆಯು ದೇಶದಲ್ಲಿ ಮಾತ್ರವಲ್ಲದೆ ವಿಶ್ವದೆಲ್ಲೆಡೆ ಪ್ರಸಿದ್ಧಿಯನ್ನು ಪಡೆದಿರುವ ಭಾಷೆಯಾಗಿದೆ. ಸಂವಿಧಾನದ ಎಂಟನೇ ಪರಿಚ್ಛೇದದ 22 ಭಾಷೆಗಳಲ್ಲಿ ಹಿಂದಿಯು ಒಂದು ಭಾಷೆಯಾಗಿದ್ದು ಅದನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವ ಜವಾಬ್ದಾರಿ ಇದೆ ಎಂದರು.


ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಆಗಿರುವ ಡಾ. ಕಲ್ಪನಾ ಪ್ರಭು ಅವರು ಅತಿಥಿಗಳನ್ನು ಪರಿಚಯಿಸಿ ಸ್ವಾಗತಿಸಿದರು. ಕುಮಾರಿ ಹರ್ಷಿಕ ಮತ್ತು ಬಳಗ ಪ್ರಾರ್ಥಿಸಿದರು. ಶ್ರೀಮತಿ ನಮಿತಾ ಅವರು ವಂದಿಸಿ, ಶ್ರೀಮತಿ ಸುಜಾತ ಜಿ. ನಾಯಕ್ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.

ಬ್ಯಾಂಕ್ ಆಫ್ ಬರೋಡಾದ ಹಿಂದಿ ಆಫೀಸರ್ ಶ್ರೀಮತಿ ಸುಗುಣಾವತಿ ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರಿನ ಪ್ರಾಧ್ಯಾಪಕಿಯರಾದ ಡಾ. ನಾಗರತ್ನ, ಡಾ. ಸುಮಾ ಟಿ.ಆರ್, ಪರೀಕ್ಷಾ ವಿಭಾಗದ ಅಧ್ಯಕ್ಷರಾದ ಶ್ರೀಮತಿ ಸೋಫಿಯಾ ಡಾಯಸ್ ಅವರು ಉಪಸ್ಥಿತರಿದ್ದರು. ವಿವಿಧ ಕಾಲೇಜುಗಳ ಸುಮಾರು 70 ಉಪನ್ಯಾಸಕರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಗ್ರೂಪ್‌ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ


web counter 


إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top