'ಯಲಾ ಕುನ್ನಿ, ನಿನ್ನ ಸೊಕ್ಕನ್ನು ಮುರಿಯುತ್ತೇನೆ' ಎಂದ ರೋಷಾವೇಶದಿಂದ ಸ್ಪೀಡ ಬ್ರೇಕರ್
'ಏ ಮಾನಸಿಕ ಇದ್ದಿ ಏನಲೇ ನೀ? ಹಿಂಗ್ಯಾಕ ಡೈಲಾಗ್ ಹೊಡ್ಯಾಕತ್ತಿದಿ?' ಕೇಳ್ದ ಕಾಳ್ಯಾ
'ಯಲಾ ಕುನ್ನಿ' ಇದು ನಮ್ಮ ಭಾರಿ ಖಳ ನಾಯಕ ವಜ್ರಮುನಿ ಅವರ ಫೇಮಸ್ ಡೈಲಾಗ್ ಐತಿರಿ' ಎಂದ ಟಿಂಟಿಂ
'ವಜ್ರಮುನಿ ಅವರದು ಅಣ್ಣಾವ್ರ ಕಾಂಬಿನೇಶನ್ ಭಾಳ ಭಾರಿ ಇತ್ತು ಒಂದ ಕಾಲದಾಗ' ಎಂದಳು ರಾಣಿ
'ಸಂಪತ್ತಿಗೆ ಸವಾಲ, ಬಭ್ರುವಾಹನ, ಗಿರಿಕನ್ಯೆ.... ಹಿಂಗ ಏನಂದ್ರs ಭಾಳ ಸಿನೇಮಾದಾಗ ಅವರ ಅಬ್ಬರ ನೋಡಂಗಿತ್ತು' ಎಂದ ಕಾಕಾ
'ವಿಷ್ಣುವರ್ಧನ ಜೋಡಿನೂ ವಜ್ರಮುನಿ ಭಾಳ ಪಿಚ್ಚರ ಮೇ ಕಾಮ ಕರೇ ಥೆ' ಅಂದ ಬಾಶಾ
'ವಜ್ರಮುನಿ, ತೂಗುದೀಪ ಶ್ರೀನಿವಾಸ, ಧೀರೆಂದ್ರ ಗೋಪಾಲ, ಮುಸುರಿ ಕೃಷ್ಣಮೂರ್ತಿ, ದ್ವಾರಕೀಶ ಇವರೆಲ್ಲಾ ದಂತಕಥೆಗಳು' ಎಂದಳು ರಾಣಿ
'ಮತ್ತೆ ನರಸಿಂಹರಾಜು?' ಕೇಳಿದ ಕಾಕಾ
'ನರಸಿಂಹರಾಜು ಕನ್ನಡದ ಚಾರ್ಲಿ ಚಾಪ್ಲಿನ್' ಎಂದಳು ರಾಣಿ.
'ಅಬಬs.....ನೀನೂ ಭಾರಿ ತಿಳ್ಕೊಂಡಿ ಬಿಡು' ಎಂದ ಕಾಳ್ಯಾ.
'ಮತ್ತs ಕನ್ನಡ ಅಂದ್ರs ಏನಂತ ತಿಳಕೊಂಡಿದಿ ಅದು ಸವಿಜೇನಿನ ರಸಗನ್ನಡ' ಅಂದಳು ರಾಣಿ
'ಅಬಬ್ಬಾ ಕವಿನೇ ಆಗಿಟ್ಟಳು ರಾಣಿ' ಅಂತ ಕಾಕಾ ಅಂದ ಆಶ್ಚರ್ಯದಿಂದ
'ಕೆ ಎಸ್ ಅಶ್ವತ್ಥ ಬಾಲಕೃಷ್ಣ ಲೋಕನಾಥ ರಾಜಾರಾಂ... ಎಲ್ಲಾರೂ ಘಟಾನುಘಟಿಗಳೇ!' ಅಂದ ಟುಮ್ಯಾ
'ಕನ್ನಡ ಆಗ ಸಿನೇಮಾ ಕಲೆ ಆಗಿತ್ತು, ಈಗ ಉದ್ಯಮ ಇಂಡಸ್ಟ್ರಿ ಆಗೇತಿ!' ಎಂದ ಟುಮ್ಯಾ
'ಕಲೆ ಇದ್ದಾಗ ಬಂದಂಥ ಸಿನಿಮಾ ನೋಡ್ರಿ ಹ್ಯಾಂಗ ಇದ್ದು ಅವು ಮನಿಮಂದಿ ಎಲ್ಲಾ ಕೂತ್ಗೊಂಡು ನೋಡಂಗ ಇದ್ವು' ಎಂದ ಕಾಕಾ
'ಈಗ ಇಂಡಸ್ಟ್ರಿ ಆದ ಮ್ಯಾಕ ಬರೇ ಹೊಡಿ ಬಡಿ ಕಡಿ!' ಎಂದು ನಕ್ಕ ಕಾಳ್ಯಾ.
'ರಾಜ್ ವಿಷ್ಣು ಶಂಕರನಾಗ ಅನಂತನಾಗ ಅಂಬರೀಷ ಮಂಜುಳಾ ಆರತಿ ಭಾರತಿ ಜಯಂತಿ ಲೀಲಾವತಿ.... ಏನು ಸಿನಿಮಾ ಮಾಡ್ತಿದ್ರಲಾ? ಅದು ಸುವರ್ಣ ಯುಗ ಆಗಿತ್ತು' ಎಂದ ಕಾಕಾ
'ಆಮ್ಯಾಲ ಶುರು ಆತ ನೋಡ್ರಿ ಡಬ್ಬಲ್ ಮೀನಿಂಗ್ ಥ್ರಿಬ್ಬಲ್ ಮೀನಿಂಗ್!' ಅಂದ ಗುಡುಮ್ಯಾ
'ಈಗ ಅದ್ಕೇ ಥೇಟರಕ ಹೋಗಿ ಸಿನ್ಮಾ ನೋಡುವರು ಕಮ್ಮಿ ಆಗ್ಯಾರು' ಎಂದ ಸ್ಪೀಡ ಬ್ರೇಕರ್
'ಈಗ ವಿಲನ್ಗಳೇ ಹೀರೋಗಳು, ಹೀರೋಯಿನ್ಗಳೇ ಕ್ಯಾಬರೇ ನರ್ತಕಿಯರು!' ಎಂದ ಟಿಂಟಿಂ
' ಏ ಎಲ್ಲಾರೂ ಹಂಗಿಲ್ಲ ತಗಿ' ಎಂದು ಆಕ್ಷೇಪಿಸಿದ ರಬಡ್ಯಾ
'ಆದ್ರs ಭಾಳ ಮಂದಿ ಹಂಗೇ ಅದಾರು! ಯಾಕಂತ ಕೇಳಿದ್ರs ಜನಾ ಇದನ್ನೇ ಬಯಸ್ತಾರು ಅಂತ ಜನರ ಮ್ಯಾಗ ಹಾಕಿ ಬಿಡ್ತಾರು' ಎಂದ ಕಾಕಾ
'ಪುಟ್ಟಣ್ಣ ಕಣಗಾಲ, ಸಿದಲಿಂಗಯ್ಯ, ಜಯರಾಂ, ರಾಜೇಂದ್ರ ಬಾಬು ನಿರ್ದೇಶಕರು, ವಿಜಯಭಾಸ್ಕರ , ಜಿಕೆ ವೆಂಕಟೇಶ, ರಾಜನ್ ನಾಗೇಂದ್ರ ಅಶ್ವತ್ಥ ಅಂಥಾ ಸಂಗೀತ ನಿದೇಶಕರು! ಭಾಳ ಚಂದ ಇತ್ತು ಆವಾಗ' ಅಂದಳು ರಾಣಿ
'ಹಾಲಿನ ಹೊಳೆಯೋ ಜೇನಿನ ಮಳೆಯೋ ಸುಧೆಯೋ ಕನ್ನಡ ಸವಿ ನುಡಿಯೋ......' ಇದು ಕನ್ನಡದ ನುಡಿ ಗೀತೆ ಎಂದ ಕಾಕಾ
'ಕನ್ನಡಕೆ ಹೋರಾಡೋ ಕನ್ನಡದ ಕಂದ, ಕನ್ನಡವ ಕಾಪಾಡು ನನ್ನ ಆನಂದ, ಜೋಗುಳದ ಹರಕೆಯಿದು ಮರೆಯದಿರು ಚಿನ್ನಾ, ಮರತೆಯಾದರೆ ಅಯ್ಯೋ ಮರೆತಂತೆ ನನ್ನಾ' ಇದು ಕನ್ನಡ ಗಾಥೆ ಎಂದಳು ರಾಣಿ
'ನೀ ಖರೇನೇ ಕವಯಿತ್ರಿ ಆಗಿದೆಲಾ? ನಮ್ಗ ಗೊತ್ತಿದ್ದಿದ್ದಿಲ್ಲ ಬಿಡು, ಇಲ್ಲಾಂದ್ರs ಮೈಸೂರು ದಸರಾ ಕವಿಗೋಷ್ಟಿಗೆ ಕಳಸ್ತಿದ್ವಿ ನೋಡು' ಎಂದ ಗುಡುಮ್ಯಾ
'ಏ ಅಲ್ಲಿ ವಶೀಲಿ ಇದ್ರs ನಡಿತದ, ಅದಕ್ಕs ಬರೇ ಹೋದವ್ರ ಹೋಗ್ತಾರ! ನಮ್ಮಂಥವರ ಕಾಲವಲ್ಲವಯ್ಯ ಇದು!' ಅಂತ ನಕ್ಕಳು ರಾಣಿ
'ಅದಿರಲಿ, ಈ ಸಲ ಬಿಗ್ ಬಾಸ್ ಹ್ಯಾಂಗ ನಡದತೆ?' ಕೇಳಿದ ಟಿಂಟಿಂ
'ಏ ಮಾನಸಿಕ ಆಗೇತಿ!' ಎಂದ ಧಡಂಧುಡಕಿ
'ಬಿಗ್ ಬಾಸ್ಗೆ ಮಾನಸಿಕ ಆಗೇತಾ? ಯಾಕ? ಹ್ಯಾಂಗ?' ಕೇಳಿದ ಕಾಕಾ
'ಏ ಹಂಗಂತ ಹೇಳಿ ಆ ಹಾಡಾ ಹಾಡ್ತಾನಲಾ ಹನುಮಂತ ಹೇಳ್ಯಾನು' ಅಂದ ಧಡಂಧುಡಕಿ
'ಏ ಮಳ್ಳ, ಅಂವಾ ತುಕಾಲಿ ಹ್ಯಾಣ್ತಿ ಮಾನಸಿ ಅಂತ ಅನ್ಲಿಕ್ಕೆ ಹೋಗಿ ಮಾನಸಿಕ ಅಂತ ಬಾಯಿ ತಪ್ಪಿ ಅಂದಾನು' ಅಂತ ಅಂದ ಕಾಳ್ಯಾ
'ಅಲ್ಲಿ ಅಂವಾ ವಕೀಲ ಅಂವಾ ಶನಿ ಆಗಿದ್ನಲಾ ಅವರು ಹೊಡದಾಡಿ ಹೊರಗ ಹೋಗ್ಯಾರು' ಅಂದ ಟುಮ್ಯಾ
'ಈಗ ಮಂಜ ಸತ್ಯ ಆ ಪಾರು ಇವರು ಒಂದು ಟೀಂ ಆಗ್ಯಾರು' ಅಂದ ಸ್ಪೀಡ ಬ್ರೇಕರ್
'ಆ ವಿಕ್ರಮ ಶಿಶಿರ ರಂಜಿತಾಂದು ಒಂದ ಗುಂಪೈತಿ' ಅಂದಳು ರಾಣಿ
'ಅಂವಾ ಧರ್ಮ ಮತ್ತs ಅನುಷಾ ಅವರು ಇಬ್ರೂ ಇವರು ಹೊಡದ್ಯಾಡು ಮುಂದ ಒಬ್ಬರಿಗೊಬ್ಬರು ಚಪಾತಿ ತಿನಿಸಿ ತಮ್ಮ ಪ್ರೀತಿ ವ್ಯಕ್ತಪಡಿಸಾಕತ್ತಿದ್ರು' ಎಂದು ನಕ್ಕ ಟಿಂಟಿಂ
'ಮತ್ತ ಧನರಾಜ ಜಿಂಕೆ ಗೀತಾದ ಭವ್ಯ ಇನ್ನೊಂದು ಜಿಂಕೆ' ಎಂದ ಗುಡುಮ್ಯಾ
'ಆ ಬಂಗಾರ ಮೈತುಂಬ ಹಾಕೊಂಡು ಓಡಾಡಂವಾ ಬಂಗಾರಪ್ಪ ಇದ್ದಾನಲಾ ಸುರೇಶಾ!' ಎಂದ ಸ್ಪೀಡ
'ಆ ಹನುಮಂತ ಅವ್ನಿಗಿ ಬಂಗಾರಪ್ಪ ಅಂತ ಅಂದಿದ್ದ' ಎಂದಳು ರಾಣಿ
'ಇದಕ್ಕ ಹುಚ್ಚರ ಸಂತೆ ಅಂತ ಅಂತಾರ ಕೆಲವು ಮಂದಿ' ಎಂದ ಕಾಕಾ
'ಅವರು ಒಳಗಿನ ಹುಚ್ಚರು ನಾವು ಹೊರಗಿನ ಹುಚ್ಚರು! ಅಷ್ಟೇ ಫರ್ಕ ಐತಿ!' ಅಂತ ವ್ಯಂಗವಾಗಿ ನಕ್ಕ ಕಾಳ್ಯಾ
'ಮತ್ತs ಶ್ಯಾಣ್ಯಾರು ಯಾರು?' ಕೇಳ್ದ ಟುಮ್ಯಾ
'ಮತ್ತ ಮತ್ತ ಚುನಾವಣೆ ನಮ್ಮ ಮ್ಯಾಲ ಅಂದ್ರs ನಮ್ಮ ಜನಗಳ ಮ್ಯಾಲ ಹೇರಿ, ತೆರಿಗೆ ದುಡ್ಡು ಪೋಲು ಮಾಡ್ತಾರಲಾ ಆ ಮಹಾನ್ ವ್ಯಕ್ತಿಗಳು!' ಅಂತ ಅಂದ ಕಾಳ್ಯಾ
'ಯಲಾ ಕುನ್ನಿ' ಅಂತ ನಕ್ಕ ಕಾಕಾ
ಎಲ್ಲಾರೂ ಕೂಡಿ ಬಿಗ್ಬಾಸ್ ಮನಿಗಿ ಹೋಗಾಕ ರೇಡಿ ಆದರು ಈ ನಮ್ಮ ಎಲ್ಲ ಜನರ ನಿಜವಾದ ಪ್ರತಿನಿಧಿಗಳು
- ಶ್ರೀನಿವಾಸ ಜಾಲವಾದಿ, ಸುರಪುರ
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ