ಶಿವಮೊಗ್ಗ: ಶಿವಮೊಗ್ಗದ ಮಾನಸಟ್ರಸ್ಟ್ ನ ಕಟೀಲ್ ಅಶೋಕ್ ಪೈ ಸ್ಮಾರಕಕಾಲೇಜಿನ ಬಿಸಿಎ ವಿಭಾಗದ ಕಂಪ್ಯೂಟರ್ ಪ್ರಯೋಗಾಲಯದ ಉದ್ಘಾಟನೆ ಹಾಗೂ ರೋಟರಿ ಶಿವಮೊಗ್ಗ ಮಿಡ್ಟೌನ್ ವತಿಯಿಂದ ದಿನಾಂಕ ಅ 30 ರಂದು ವಿದ್ಯಾರ್ಥಿಗಳಿಗೆ ನಡೆಸಿದ ಕೌಶಲ್ಯ ತರಬೇತಿ ಕಾರ್ಯಾಗಾರದ ಉದ್ಘಾಟನೆಯನ್ನು ಕಾಲೇಜಿನ ಬಹುಮುಖಿ ಸಭಾಂಗಣದಲ್ಲಿ ವಿಧಾನಪರಿಷತ್ ಸದಸ್ಯರು, ಕುವೆಂಪು ವಿಶ್ವವಿದ್ಯಾಲಯದ ವಿದ್ಯಾವಿಷಯಕ ಪರಿಷತ್ತಿನ ಸದಸ್ಯರೂ ಆಗಿರುವ ಡಿ ಎಸ್ಅರುಣ್ರವರು ನೆರವೇರಿಸಿದರು.
ಶಿಕ್ಷಣವು ಅನುಕರಣೆಗಿಂತ ಸ್ವಂತಿಕೆಯನ್ನು ಹಾಗೂ ಸೃಜನಾತ್ಮಕತೆಯನ್ನು ಉದ್ದೀಪನೆಗೊಳಿಸು ವಂತಿರಬೇಕು ಎಂದು ಅವರು ಅಭಿಪ್ರಾಯ ಪಟ್ಟರು ಇಂದಿನ ಯುವಕ ಯುವತಿಯರಲ್ಲಿ ತನ್ನ ಬಗ್ಗೆ, ತನ್ನ ಸಮುದಾಯದ ಬಗ್ಗೆ, ತನ್ನ ದೇಶದ ಬಗ್ಗೆ ಕೀಳರಿಮೆ ಬೇಡ, ಬದಲಾಗಿ ಸ್ವಾಭಿಮಾನ ಇರಬೇಕು ಹಾಗೂ ಇಲ್ಲಿಯದೇ ಸಂಪನ್ಮೂಲಗಳನ್ನು ಬಳಸಿಕೊಂಡು ಯುವ ಜನರು ತಮ್ಮಜೀವನವನ್ನು ಸಮೃದ್ಧಿಗೊಳಿಸಬಹುದು ಎಂದು ತಿಳಿಸಿದರು. ತಮ್ಮಆಸಕ್ತಿಯ ವಿಷಯಗಳನ್ನು ಓದುವ ಮುಕ್ತ ಅವಕಾಶ ಹೊಸ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ದೊರಕುತ್ತಿದೆ. ಅದನ್ನು ಇಂದಿನ ವಿದ್ಯಾರ್ಥಿಗಳು ಧನಾತ್ಮಕವಾಗಿ ಬಳಸಿಕೊಳ್ಳಬೇಕು. ಇಂದಿನ ಉದ್ಯೋಗಗಳಿಗೆ ಬೇಕಾಗುವುದು ಪದವಿ ಪತ್ರಗಳು ಒಂದೇ ಅಲ್ಲ. ಕೌಶಲ್ಯಗಳು ಕೂಡ ಮುಖ್ಯ ಎಂಬುದನ್ನು ಮರೆಯಬೇಡಿರಿಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ವಿದ್ಯಾರ್ಥಿಗಳು ಮೂರು ಮುಖ್ಯ ವಿಷಯಗಳನ್ನು ರೂಡಿ ಮಾಡಿಕೊಳ್ಳಿ ..ಅವುಗಳಂದರೆ. ಮೊದಲನೆಯದಾಗಿ ಭಾವನಾತ್ಮಕ ಬುದ್ಧಿವಂತಿಕೆ ಅಥವಾ ಎಮೋಷನಲ್ ಕೋಶಂಟ್, ಎರಡನೆಯದಾಗಿ ಒಳ್ಳೆಯ ಕೆಲಸಗಳನ್ನು ದಿನನಿತ್ಯ ಮಾಡುವಅಭ್ಯಾಸ .ಮೂರನೆಯದಾಗಿ ಸಾಮಾಜಿಕ ಜವಾಬ್ದಾರಿಗಳನ್ನು ಸರಿಯಾಗಿ ನಿರ್ವಹಿಸುವುದು ಎಂದು ಅವರು ತಿಳಿಸಿದರು. ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ರಜನಿ ಪೈರವರು ಶಿಕ್ಷಣ ಸಂಸ್ಥೆಯನ್ನು ಕಟ್ಟಿ, ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿರುವುದು ಶ್ಲಾಘನೀಯ ಎಂದು ಅರುಣ್ರವರು ತಿಳಿಸಿದರು.
ಮತ್ತೋರ್ವ ಮುಖ್ಯ ಅತಿಥಿಗಳಾದ ರೋಟರಿ ಶಿವಮೊಗ್ಗ ಮಿಡ್ಟೌನ್ ಅಧ್ಯಕ್ಷ ಸುರೇಶ್ಕುಮಾರ್ ರವರು ಮಾತಾಡುತ್ತಾ ನಮ್ಮೆಲ್ಲರ ಮೆದುಳು ಅಂದಾಜು 32 ಲಕ್ಷಕ್ಕಿಂತಲೂ ಹೆಚ್ಚು ಜಿಬಿಯ ಸಾಮರ್ಥ್ಯವನ್ನು ಹೊಂದಿದೆ. ಆದುದರಿಂದ ಅಂತಹ ಮೆದುಳಿನ ಸಾಮರ್ಥ್ಯವನ್ನು ಬಳಕೆ ಮಾಡುವ ಕೌಶಲ್ಯವನ್ನು ಕಲಿಯಿರಿ ಎಂದು ತಿಳಿಸಿದರು.
ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ರೋ ಸಂತೋಷ್ರವರು ವಿದ್ಯಾರ್ಥಿಗಳಿಗೆ ಹಲವಾರು ಚಟುವಟಿಕೆಗಳ ಮೂಲಕ ಗ್ರಹಣ ಶಕ್ತಿಯ ಕೌಶಲ್ಯಗಳನ್ನು, ಆರೋಗ್ಯ ಪೂರ್ಣಜೀವನ ಶೈಲಿಯ ರೀತಿಯನ್ನು ತಿಳಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಮಾನಸ ಸಂಸ್ಥೆಯ ನಿರ್ದೇಶಕರಾದ ಡಾಕ್ಟರ್ ರಜನಿ ಎ ಪೈ, ಆಡಳಿತ ಅಧಿಕಾರಿ ಪ್ರೊಫೆಸರ್ ರಾಮಚಂದ್ರ ಬಾಳಿಗ, ರೋಟರಿ ಶಿವಮೊಗ್ಗ ಮಿಡ್ಟೌನ್ನ ಕಾರ್ಯದರ್ಶಿ ಪಾಹಿಂ, ಉಪನ್ಯಾಸಕ ಮಂಜುನಾಥ ಸ್ವಾಮಿ, ಮಂಗೇಶ ಎಸ್ಪೈ ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಡಾಕ್ಟರ್ ಸಂಧ್ಯಾಕಾವೇರಿ ಮಾತನಾಡುತ್ತಾ ಡಿಎಸ್ ಅರುಣ್ರವರು ಯುವಜನರ ಹಾಗೂ ವಿದ್ಯಾರ್ಥಿಗಳ ಆಸಕ್ತಿ ಹಾಗೂ ಅವಶ್ಯಕತೆಗಳೆರಡನ್ನು ಅರ್ಥೈಸಿಕೊಂಡು ತನ್ನ ಸಮಾಜಸೇವೆಯ ಮುಖ್ಯ ವಿಷಯಗಳಾಗಿ ಕೈಗೆತ್ತಿಕೊಳ್ಳುತ್ತಾರೆ ಅವರು ಯುವಜನರೆಲ್ಲ ಮೆಚ್ಚಿದ ಅಪರೂಪದ ನಾಯಕ ಎಂದು ಹೇಳಿ ಸಂಸ್ಥೆಯ ಪರವಾಗಿ ಅಭಿನಂದಿಸಿದರು.
ರೋಟರಿ ಸಂಸ್ಥೆಯು ಆಯಾಕಾಲದ ಸಮಾಜಕ್ಕೆಅಗತ್ಯವಿರುವ ಸೇವೆಯನ್ನೇ ಒದಗಿಸುತ್ತಾ ಬಂದಿದೆ. ಈ ನಿಟ್ಟಿನಲ್ಲಿ ಇಂದಿನ ಕಾಲಕ್ಕೆ ಅತಿ ಅವಶ್ಯಕವಾಗಿ ಬೇಕಾಗಿರುವ ಕೌಶಲ್ಯಗಳ ತರಬೇತಿ ಕಾರ್ಯಾಗಾರ ಅರ್ಥಪೂರ್ಣ ಕಾರ್ಯಕ್ರಮ ಎಂದು ಬಣ್ಣಿಸಿದರು. ವಿದ್ಯಾರ್ಥಿಗಳಾದ ಸಂಧ್ಯಾ ಕೆಕೆ ನಿರೂಪಿಸಿ, ಮಮತಾ ಸ್ವಾಗತಿಸಿ, ಗೌಸ್ ಪೀರ್ ಹಾಗೂ ಹರ್ಷವರ್ಧನ ಅತಿಥಿಗಳನ್ನು ಪರಿಚಯಿಸಿದರು. ತನ್ಮಯಿ ಹಾಗೂ ತಂಡದವರು ಪ್ರಾರ್ಥಿಸಿದರು ಹಾಗೂ ಕಾವ್ಯ ವಂದಿಸಿದರು.
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪ್ಗೆ ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ